(ವರದಿ : ನವೀನ್)
ಬೆಂಗಳೂರು: ಸಿಲಿಕಾನ್ ಸಿಟಿಗೆ ಜೀವನಾಡಿಯಾಗಿದ್ದ ಒಂದು ಕಾಲದ ಜೀವ ನದಿಯಾಗಿದ್ದ ಅರ್ಕಾವತಿ, ಕುಮದ್ವತಿ ನದಿಗಳು ತಿಪ್ಪಗೊಂಡನಹಳ್ಳಿ, ಮಂಚನಬೆಲೆ ಜಲಾಶಯಳಲ್ಲಿ ಶೇಖರಣೆಗಾಗಿ ಬೆಂಗಳೂರಿನ ಬಹು ಭಾಗಗಳಿಗೆ ಕುಡಿಯುವ ನೀರಿಗೆ ಆಸರೆಯಾಗಿತ್ತು. ಕಾಲ ಕ್ರಮೇಣ ಆಧುನಿಕತೆಯ ಭರಾಟೆಯಲ್ಲಿ ನದಿ ಮೂಲಗಳು, ಜೀವಸೆಲೆಗಳು ಮುಚ್ಚಿ ಹೋದ ಹಿನ್ನೆಲೆ ನದಿಗಳು ಬತ್ತಿ ಹೋಗಿ ನೀರಿನ ಸೆಲೆಗಳು ಬರಿದಾಗುತ್ತಿವೆ.
ಬೆಂಗಳೂರಿನ ಪಕ್ಕದಲ್ಲೆ ಇಂಥಹದೊಂದು ನದಿಗಳು ಜಲಾಶಗಳಿವೆ ಎಂದು ಅದೆಷ್ಟೋ ಬೆಂಗಳೂರಿಗರಿಗೆ ಗೊತ್ತೆ ಇಲ್ಲ, ಆದರೂ ಇದು ಸತ್ಯ. ಈ ಜಲಾಶಯಗಳು ಬತ್ತಿ ಹೋಗಲು ಮೂಲ ಕಾರಣ ಗಣಿಗಾರಿಕೆ, ನಂದಿ ತಪ್ಪಲಿಂದ ತಿಪ್ಪಗೊಂಡನಹಳ್ಳಿ ವರೆಗೂ ನಡೆಯುತ್ತಿರುವ ಅರ್ಕಾವತಿ ಜಲಾನಯನ ಪ್ರದೇಶದ ಅಕ್ರಮ ಗಣಿಗಳಿಂದಾಗಿ ಬಹುತೇಕ ನದಿ, ಕೆರೆ, ಕುಂಟೆಗಳು ಬತ್ತಿ ಹೋಗಿದ್ದು, ಬೆಂಗಳೂರಿನ ನೀರಿನ ಬವಣೆ ಹೆಚ್ಚಿಸಲು ಕಾರಣವಾಗಿವೆ.
ತಿಪ್ಪಗೊಂಡನಹಳ್ಳಿ, ಮಂಚನಬೆಲೆ ಜಲಾಶಯಗಳು ಬಹು ಪ್ರಮುಖ ನೀರಿನ ಸೆಲೆಯಾಗಿದ್ದು, ಮಾಗಡಿ ಮತ್ತು ಬೆಂಗಳೂರಿನ ಭಾಗಗಳಿಗೆ ನೀರಿನ ಆಸೆರೆಯಾಗಿದ್ದರೂ ಇದೀಗ ಬಳಕೆಗೆ ಯೋಗ್ಯವಲ್ಲದ ಮಟ್ಟಕ್ಕೆ ತಲುಪಿದ್ದು ಮಾಗಡಿ ಜನರು ಇಂದಿಗೂ ಮಂಚನಬೆಲೆ ಜಲಾಶಯದ ನೀರನ್ನೆ ಕುಡಿಯುತ್ತಿರುವುದು ದುರಂತವೆ ಸರಿ. ಇದಕ್ಕೆಲ್ಲ ಮೂಲ ಕಾರಣ ಗಣಿಗಾರಿಕೆ ಕೂಗಳತೆ ದೂರದಲ್ಲೆ ನಡೆಯುತ್ತಿರುವ ಗಣಿಗಾರಿಕೆ,
ಜಲ್ಲಿ ಕ್ರಶರ್ ಗಳಿಂದಾಗಿ ಜಲಾಶಗಳ ಒಳ ಹರಿವು ಮತ್ತು ಕಲುಶಿತ ನೀರು ಜಲಾಶಯದ ಒಡಲು ಸೇರಿ ಸೇರುತಿದ್ದು ಮುಂದೆ ಹೀಗೆ ಸಾಗಿದಲ್ಲಿ ಎರಡೂ ಅವಳ ಜಲಾಶಯಗಳು ಒಳ ಹರಿವಿಲ್ಲದೆ ಮಂಚನಬೆಲೆ ಜಲಾಶಯ ಕೂಡ, ತಿಪ್ಪಗೊಂಡಬಹಳ್ಳಿ ಜಲಾಶಯದ ಹಾಗೆ ಅನುಪಯುಕ್ತ ಆಗುವುದರಲ್ಲಿ ಸಂಶವಿಲ್ಲ.
ಅದಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಸಮಾಜ ಪರಿವರ್ತನಾ ಸಮಿತಿ ಅರ್ಜಿ ಸತತ 4 ವರ್ಷಗಳ ಬಳಿಕ ತೀರ್ಪು ಪ್ರಕಟಿಸಿದ್ದು, ಅಕ್ರಮ ಕ್ರಶರ್, ಗಣಿಗಾರಿಕೆಗೆ ಬ್ರೇಕ್ ಹಾಕಿದೆ, ಪ್ರತಿ ತಿಂಗಳು ಸರ್ಕಾರ ಅಥವಾ ಸಂಭಂದ ಪಟ್ಟ ಇಲಾಖೆ ಸರ್ವೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿದ್ದು, ಅಕ್ರಮ ಕಂಡು ಬಂದಲ್ಲಿ ಕೂಡಲೆ ಕ್ರಮ ಕೈಗೊಳ್ಳಲು ಸೂಚನೆ ನಿಡಿದ್ದು, ಅದಕ್ಕಾಗಿ ಒಂದು ನಿಗಮ ಮಂಡಳಿ ಸ್ಥಾಪನೆಗೆ ಸೂಚನೆ ನೀಡಿದೆ. ಅರ್ಜಿದಾರರಿಗೂ ಮುಖ್ತ ಅವಕಾಶ ನೀಡಿರುವ ನ್ಯಾಯಾದೀಶರು ಅಕ್ರಮ ಕಂಡು ಬಂದಲ್ಲಿ ಕೂಡಲೆ ಕೋರ್ಟ್ ಗಮನಕ್ಕೆ ತರಬಹುದಾಗಿ ಅವಕಾಶ ಕಲ್ಪಿಸಿದೆ.
ಆದರೆ ಅವಳಿ ಜಲಾಶಯಗಳ ರಕ್ಷಣೆ ಮತ್ತು ಪರಿಸರದ ಮೇಲೆ ಆಗುತ್ತಿರುವ ಅತೀವ ಪರಿಣಾಮದ ಜೊತೆ ಕೂಗಳತೆ ದೂರದಲ್ಲಿರುವ ಇಸ್ರೋ ಭದ್ರತೆ ದೃಷ್ಟಿಬಗ್ಗೆ ಸಹ ಆತಂಕ ಇದ್ದು ಬ್ಯಾಸ್ಟ್ ನಿಂದಾಗಿ ಆತಂಕ ಎದುರಾಗಿದೆ. ಸ್ಥಳೀಯ ಪಂಚಾಯತಿಗಳು ಗಣಿಗಾರಿಕೆ ಮತ್ತು ಕ್ರಶರ್ನಿಂದಾಗುತ್ತಿರುವ ರಸ್ತೆ ಹಾಳಾಗುತ್ತಿವೆ, ವಾತಾವರಣ ಕಲುಷಿತ ಆಗುತ್ತಿವೆ, ಸುತ್ತಮುತ್ತಲ ಸಾರ್ವಜನಿಕರಿಗೆ ಶಬ್ದ, ದೂಳು, ವಾಹನ ದಟ್ಟಣೆ ಸಮಸ್ಯೆಗಳನ್ನು ಮನಗಂಡು ಕ್ರಶರ್ ಮತ್ತು ಗಣಿಗಾರಿಕೆಗೆ ನೀಡಿರುವ ಪರವಾನಿಗೆಯನ್ನ ಹಿಂದಕ್ಕೆ ಪಡೆಯುವಂತೆ ಸಲ್ಲಿಸಲಾಗಿದ್ದ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ರೆಸಲ್ಯೂಶನ್ ಪಾಸ್ ಮಾಡಿ ಸರ್ಕಾರಕ್ಕೆ, ಜಿಲ್ಲಾ ಪಂಚಾಯತಿ ಮತ್ತು ಜಿಲ್ಲಾಧಿಕಾರಿಗಳಿಗೆ ರವಾನೆ ಮಾಡಲಾಗಿತ್ತಾದರೂ ಯಾವುದೇ ಪ್ರಯೋಜನ ಆಗಿಲ್ಲ.
ಅಂತೆಯೇ ಕರ್ನಾಟಕ ಹೈ ಕೋರ್ಟ್ ನೀಡಿರುವ ಆದೇಶ ಸಮಾಧಾನಕರವಾಗಿದ್ದು ಅಕ್ರಮಕ್ಕೆ ಕಡಿವಾಣ ಹಾಕಿದೆ ಆದರೆ ಉಳಿಕೆ ಪರವಾನಿಗೆ ಪಡೆದಿರುವ ಕ್ರಶರ್ಗಳು ಒಂದೇ ಪರವಾನಿಗೆಯಡಿ 5-6ಕ್ಕೂ ಹೆಚ್ಚು ಘಟಕ ನಡೆಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಹೆಚ್ಚಾಗಿದೆ. ತಿಪ್ಪಗೊಂಡನಹಳ್ಳಿ ಮತ್ತು ಮಂಚನಬೆಲೆ ಜಲಾನಯನ ಪ್ರದೇಶ ಕ್ಯಾಚ್ಮೇಟ್ ಏರಿಯಾದಡಿ ಬರುವುದರಿಂದ ಸಂಪೂರ್ಣ ಗಣಿಗಾರಿಕೆ ಸ್ಥಗಿತ ಗೊಳಿಸಿ ಅರ್ಕಾವತಿ ಜಾನಯನ ಪ್ರದೇಶವನ್ನ ಕಾಪಾಡುವ ನಿಟ್ಟಿನಲ್ಲಿ ಅರ್ಜಿದಾರರು ಸುಪ್ರೀ ಮೊರೆ ಹೋಗಲು ನಿರ್ಧರಿಸಿದ್ದು ಹೈ ಕೋರ್ಟ್ ವರದಿ ಮತ್ತು ಆದೇಶವನ್ನ ಮರು ಪರಿಶೀಲಿಸಿ ಸಂಪೂರ್ಣ ಗಣಿಗಾರಿಕೆ ನಿಲ್ಲಿಸಿ ಇಸ್ರೋ ಸೇರಿದಂತೆ ಅವಳಿ ಜಲಾಶಯಗಳ ರಕ್ಷಣೆ ಮಾಡುವಂತೆ ಮಾಡಿದ್ದಾರೆ.