ಮಂಗಳೂರು: ಅನಾರೋಗ್ಯ ಕಾರಣದಿಂದ ಬೇಸತ್ತು ಸುರತ್ಕಲ್ ಬಳಿ ದಂಪತಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇಂದು ಬೆಳಿಗ್ಗೆ ಮಂಗಳೂರು ಪೊಲೀಸ್ ಆಯುಕ್ತರಿಗೆ ಹಾಗೂ ಹಿಂದೂ ಸಂಘಟನೆಗಳಿಗೆ ಸಂದೇಶ ರವಾನಿಸಿ ರಮೇಶ್ ಕುಮಾರ್ ಹಾಗೂ ಗುಣ ಆರ್.ಸುವರ್ಣ ದಂಪತಿ ನೇಣಿಗೆ ಕೊರಳೊಡ್ಡಿದ್ದಾರೆ. ಅಂತ್ಯ ಸಂಸ್ಕಾರಕ್ಕೆಂದು 1 ಲಕ್ಷ ರೂಪಾಯಿ ಇಟ್ಟಿರುವುದಾಗಿ ಹೇಳಿಕೊಂಡಿರುವ ಈ ದಂಪತಿ ತಮ್ಮ ಮನೆಯಲ್ಲಿರುವ ಬೆಳೆಬಾಳುವ ವಸ್ತುಗಳನ್ನು ಮಾರಿ ಬಡವರಿಗೆ ಹಂಚುವಂತೆ ತಿಳಿಸಿದ್ದಾರೆ.

ಸಾವಿಗೂ ಮುನ್ನ ಬರೆದಿಟ್ಟಿರುವ ಡೆತ್ ನೋಟ್, ಹಣದ ಕಂತೆ ಹಾಗೂ ಕೆಲವು ದಾಖಲೆಗಳನ್ನು ಈ ದಂಪತಿ ತಾವು ಸಾವಿಗೆ ಶರಣಾದ ಸ್ಥಳದಲ್ಲೇ ಇಟ್ಟಿರುವುದು ಕಂಡು ಬಂದಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.























































