ಕೀವ್: ಉಕ್ರೇನ್ ಮೇಲಿನ ರಷ್ಯಾ ದಾಳಿ ಹಾಗೂ ಸಮರ ಸನ್ನಿವೇಶ ಆ ಎರಡು ರಾಷ್ಟ್ರಗಳ ಮೇಲಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ಪರಿಣಾಮ ಹಾಗೂ ಆತಂಕ ಮೂಡಿಸಿದೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಸಮರ ತೀವ್ತ ಸ್ವರೂಪ ತಾಳಿದ್ದು ಭಾರೀ ಸಾವು ನೋವಿಗೆ ಸಾಕ್ಷಿಯಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳಿಗೂ ಕ್ಯಾರೇ ಎನ್ನದ ರಷ್ಯಾ ಉಕ್ರೇನ್ ಮೇಲೆ ಗುರುವಾರ ಆರಂಭಿಸಿರುವ ಆಕ್ರಮಣ ಮುಂದುವರಿದಿದ್ದು ಸಮರ ಸಂತ್ರಸ್ತ ನೆಲದಲ್ಲಿ ವಿವಿಧ ರಾಷ್ಟ್ರಗಳ ಲಕ್ಷಾಂತರ ಜನರು ಅತಂತ್ರರಾಗಿದ್ದಾರೆ.
“Where do I go? Tell me please. Where will I run?”
People across Ukraine were out on the streets, queuing at ATMs, looking for shelter or seeking ways to leave the country. pic.twitter.com/FgMy5iaqu7
— DW News (@dwnews) February 25, 2022
ಉಕ್ರೇನ್ನಲ್ಲಿರುವ 20,000 ಭಾರತೀಯರೂ ಸಂಕಷ್ಟದಲ್ಲಿದ್ದಾರೆಂದು ಅಂದಾಜಿಸಲಾಗಿದ್ದು ಸುಮಾರು 4,000 ಜನರನ್ನು ಸ್ಥಳಾಂತರಿಸಲಾಗಿದೆ. ಈ ಕುರಿತಂತೆ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮಾಹಿತಿ ಹಂಚಿಕೊಂಡಿದ್ದಾರೆ.
WATCH: Unknown object intercepted over Ukraine's capital; no further details pic.twitter.com/1FEqKpzSmD
— BNO News (@BNONews) February 25, 2022
ಈ ನಡುವೆ, ಆಕ್ರಮಣನಿರತ ರಷ್ಯಾದ ಹತ್ತಾರು ಯುದ್ಧವಿಮಾನಗಳು ಹೆಲಿಕಾಪ್ಟರ್ಗಳು ಹಾಗೂ 30ಕ್ಕೂ ಹೆಚ್ಚು ಯುದ್ಧ ಟ್ಯಾಂಕ್ಗಳನ್ನು ಉಕ್ರೇನ್ ನಾಶ ಪಡಿಸಿದೆ. ಈ ದಾಳಿಯ ಸಂದರ್ಭದಲ್ಲಿ 800ಕ್ಕೂ ಹೆಚ್ಚು ರಷ್ಯನ್ ಸೈನಿಕರನ್ನು ತಾವು ಹೊಡೆದುರುಳಿಸಿದ್ದಾಗಿ ಉಕ್ರೇನ್ ಸರ್ಕಾರ ಹೇಳಿಕೊಂಡಿದೆ.
ಇದೇ ವೇಳೆ, ಎದುರಾಳಿ ರಾಷ್ಟ್ರದ ಮೇಲೆ ಹಿಡಿತ ಸಾಧಿಸಿರುವ ರಷ್ಯಾ ಸೈನ್ಯವು ಉಕ್ರೇನ್ನ ರಾಜಧಾನಿ ಕೈವ್ ನಗರವನ್ನು ವಶಪಡಿಸುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.