ದೊಡ್ಡಬಳ್ಳಾಪುರ: ಪೆಟ್ರೋಲ್, ಡಿಸೇಲ್, ಮತ್ತು ಗ್ಯಾಸ್ ದರ ಏರಿಕೆ ಮತ್ತು ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ದೊಡ್ಡಬಳ್ಳಾಪುರ ನಗರದಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಟನಾ ಮೆರವಣಿಗೆ ನಡೆಸಿತು. ದೊಡ್ಡಬಳ್ಳಾಪುರ ನಗರದ ಆಸ್ಪತ್ರೆ ವೃತ್ತದಿಂದ ತಾಲೂಕು ಕಚೇರಿವರೆಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕತ್ತೆಗಳ ಮೆರವಣಿಗೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು, ಪ್ರತಿಭಟನನಿರತ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕೃಷ್ಣಬೈರೇಗೌಡ ಪೆಟ್ರೋಲ್, ಡಿಸೇಲ್ ಗ್ಯಾಸ್ ಗಳ ಬೆಲೆಯನ್ನ ಕೇಂದ್ರ ಸರ್ಕಾರ ಯದ್ವಾತದ್ವಾ ಏರಿಸುತ್ತಿದೆ, ಬೆಲೆ ಏರಿಕೆಯಿಂದ 135 ಕೋಟಿ ಭಾರತೀಯರು ಕಷ್ಟ ಪಡುತ್ತಿದ್ದರು ಕೇಂದ್ರ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ, ಬೆಲೆ ಏರಿಕೆಯ ಬಗ್ಗೆ ಹಾರಿಕೆಯ ಉತ್ತರಗಳನ್ನ ಕೊಡುತ್ತಿದ್ದಾರೆ ಎಂದರು.
ಅಂಬಾನಿ ಅದಾನಿ ನಿಮಿಷಕ್ಕೆ 3 ಕೋಟಿ ದಿನಕ್ಕೆ ಸಾವಿರಾರು ಕೋಟಿ ಆದಾಯ ಗಳಿಸುತ್ತಿದ್ದಾರೆ, ಅಂಬಾನಿ ಅದಾನಿಯವರ ಮೇಲೆ ಶೇಕಡಾ 1 ರಷ್ಟು ತೆರಿಗೆ ಹಾಕಿದ್ರೆ 135 ಕೋಟಿ ಭಾರತೀಯರು ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾರೆ.
ಅಂಬಾನಿ ಅದಾನಿಯವರ ಮೇಲೆ ಟ್ಯಾಕ್ಸ್ ಹಾಕುವ ಬದಲಿಗೆ ಪೆಟ್ರೋಲ್, ಡಿಸೇಲ್, ಗ್ಯಾಸ್ ಮೇಲೆ ಯದ್ವಾತದ್ವಾ ತೆರಿಗೆ ಹಾಕುವ ಮೂಲಕ 130 ಕೋಟಿ ಭಾರತೀಯರ ಸುಲಿಗೆ ಮಾಡಲಾಗುತ್ತಿದೆ, ಕೇಂದ್ರ ಸರ್ಕಾರ ಶ್ರೀಮಂತರನ್ನ ಸಾಕುತ್ತಿರುವುದು ದೇಶದ ದುರದೃಷ್ಟಕರ ಎಂದರು.
ಭಾರತದ ಇತಿಹಾಸದಲ್ಲಿಯೇ ಈ ಪ್ರಮಾಣದಲ್ಲಿ ಪೆಟ್ರೋಲ್ ಡಿಸೇಲ್ ದರ ಏರಿಕೆಯಾಗಿರಲಿಲ್ಲ, ಕೇಂದ್ರ ಸರ್ಕಾರದ ಕಣ್ಣು ತೆರೆಸಿ ಇಂಧನಗಳ ಬೆಲೆ ಇಳಿಸುವ ಮೂಲಕ ಜನರಿಗೆ ನೆಮ್ಮದಿ ತಂದು ಕೊಡುವ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆ ಮಾಡುತ್ತಿದೆ ಎಂದರು.
ದೇಶದ ಅಭಿವೃದ್ಧಿಗಾಗಿ ಇಂಧನಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂಬ ವಾದಕ್ಕೆ ತಿರುಗೇಟು ನೀಡಿದ ಅವರು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 120 ರೂಪಾಯಿ ಇದ್ದಾಗ 65 ರೂಪಾಯಿಗೆ ಪೆಟ್ರೋಲ್ ಮಾರಾಟವಾಗುತ್ತಿತ್ತು, ಆಗ ದೇಶ ಅಭಿವೃದ್ಧಿಯಾಗಿರಲಿಲ್ಲವೇ, ಈಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 60 ಡಾಲರ್ ಇದೆ. ದೇಶದ ಅಭಿವೃದ್ಧಿ ಮಾಡುವುದೇ ಆಗಿದ್ದಾರೆ ದೇಶದ 1ರಷ್ಟಿರುವ ಶ್ರೀಮಂತರ ಬಳಿ ಶೇಕಡಾ 50 ರಷ್ಟು ಭಾರತದ ಸಂಪತ್ತಿದೆ, ದಿನಕ್ಕೆ ಸಾವಿರಾರು ಕೋಟಿ ಸಂಪಾದಿಸುವ ಶ್ರೀಮಂತರ ಮೇಲೆ ಟ್ಯಾಕ್ಸ್ ಹಾಕಿ, ದಿನಕ್ಕೆ ಸಾವಿರಾರು ಕೋಟಿ ಸಂಪಾದಿಸುವ ಶ್ರೀಮಂತರ ಮೇಲೆ ಶೇಕಡಾ ರಷ್ಟು ಟ್ಯಾಕ್ಸ್ ಹಾಕಿದ್ರೆ ನೂರು ಕೋಟಿ ಟ್ಯಾಕ್ಸ್ ಇದು ಅವರಿಗೆ ಹೊರೆಯಾಗುವುದಿಲ್ಲ, ಅದರ ಬದಲು ದಿನಕ್ಕೆ 150 ರೂಪಾಯಿ ಸಂಪಾದಿಸುವ ಬಡವರ ಮೇಲೆ ಟ್ಯಾಕ್ಸ್ ಹಾಕಿ ದೇಶ ಕಟ್ಟುವ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದರು.