ಬೆಂಗಳೂರು: ಹಿರಿಯ ಪತ್ರಕರ್ತ ಮಹದೇವ್ ಪ್ರಕಾಶ್ ನಿಧನಕ್ಕೆ ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಂಬನಿ ಮಿಡಿದಿದ್ದಾರೆ.
ಮಹದೇವ್ ಪ್ರಕಾಶ್ ನಿಧನ ಬಗ್ಗೆ ದುಃಖ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಸಿ.ಟಿ.ರವಿ, ಆತ್ಮೀಯರೂ, ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು ಹಾಗೂ ಅಂಕಣಕಾರರಾದ ಮಹಾದೇವ ಪ್ರಕಾಶ್ ಅವರು ನಮ್ಮನ್ನಗಲಿದ್ದಾರೆ ಅನ್ನುವ ಸುದ್ದಿ ಕೇಳಿ ಆಘಾತವಾಗಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮಾಧ್ಯಮ ಸಲಹೆಗಾರರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು ಎಂದು ಹೇಳಿಕೊಂಡಿದ್ದಾರೆ.
ನನ್ನ ಆತ್ಮೀಯರೂ, ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು ಹಾಗೂ ಅಂಕಣಕಾರರಾದ ಶ್ರೀ ಮಹಾದೇವ ಪ್ರಕಾಶ್ ಅವರು ನಮ್ಮನ್ನಗಲಿದ್ದಾರೆ ಅನ್ನುವ ಸುದ್ದಿ ಕೇಳಿ ಆಘಾತವಾಗಿದೆ.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ. ಬಿ ಎಸ್ ಯಡಿಯೂರಪ್ಪ ಅವರ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಶ್ರೀಯುತರು ಪ್ರಚಲಿತ ರಾಜಕೀಯ ವಿಚಾರಗಳನ್ನು
1/2 pic.twitter.com/qJ7GWGYsAI
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) May 14, 2021
ಪ್ರಚಲಿತ ರಾಜಕೀಯ ವಿಚಾರಗಳನ್ನು ತಮ್ಮ ಅಂಕಣಗಳ ಮೂಲಕ ಅವರು ವಿಶ್ಲೇಷಣೆ ಮಾಡುತ್ತಿದ್ದ ಶೈಲಿ ನನ್ನನ್ನೂ ಸೇರಿದಂತೆ ಅಪಾರ ಓದುಗರ ವರ್ಗವನ್ನು ಇವರ ಅಭಿಮಾನಿಯನ್ನಾಗಿಸಿತ್ತು. ಇವರ ಅಗಲುವಿಕೆ ವೈಯುಕ್ತಿಕವಾಗಿ ನನಗೆ, ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟ ಎಂದು ಸಿ.ಟಿ.ರವಿ ಹೇಳಿದ್ದಾರೆ.
ತಮ್ಮ ಅಂಕಣಗಳ ಮೂಲಕ ವಿಶ್ಲೇಷಣೆ ಮಾಡುತ್ತಿದ್ದ ಶೈಲಿ ನನ್ನನ್ನೂ ಸೇರಿದಂತೆ ಅಪಾರ ಓದುಗರ ವರ್ಗವನ್ನು ಇವರ ಅಭಿಮಾನಿಯನ್ನಾಗಿಸಿತ್ತು. ಇವರ ಅಗಲುವಿಕೆ ವೈಯುಕ್ತಿಕವಾಗಿ ನನಗೆ, ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟ.
ಅಗಲಿದ ಅವರಾತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸೋಣ.
ಓಂಶಾಂತಿಃ
2/2— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) May 14, 2021