ಬೆಂಗಳೂರು: ಉದ್ಯಾನನಗರಿಯನ್ನು ಬೆಚ್ಚಿ ಬೀಳಿಸಿದ್ದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಎನ್ಐಎ ಬಂಧಿಸಿದೆ. ಬಾಂಬ್ ಇಟ್ಟಿರುವಾತ ಹಾಗೂ ಮಾಸ್ಟರ್ ಮೈಂಡ್ ಬಂಧನವಾಗಿರುವುದಾಗಿ ಎನ್ಐಎ ಮೂಲಗಳು ತಿಳಿಸಿವೆ.
ಅಧಿಕಾರಿಗಳು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅಬ್ದುಲ್ ಮಥೀನ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಝೇಬ್ ಎಂಬಿಬ್ಬರನ್ನು ಕೋಲ್ಕತ್ತಾದ ರಹಸ್ಯ ತಾಣವೊಂದರಲ್ಲಿ ಅಡಗುದಾಣದಲ್ಲಿ ಬಂಧಿಸಲಾಗಿದೆ. .
ಮುಸ್ಸಾವಿರ್ ಹುಸೇನ್ ಶಾಜಿಬ್ ಎಂಬಾತ ಕೆಫೆಯಲ್ಲಿ ಐಇಡಿ ಇರಿಸಿದ ಆರೋಪಿಯಾಗಿದ್ದಾನೆ ಎನ್ನಲಾಗಿದೆ. ಮತ್ತೊಬ್ಬ ಅಬ್ದುಲ್ ಮಥೀನ್ ತಾಹಾ ಎಂಬಾತ ಈ ಪ್ರಕರಣದಲ್ಲಿ ಬಾಂಬರ್ಗೆ ಸಹಾಯ ಮಾಡಿರುವ ಆರೋಪ ಹೊಂದಿದ್ದಾನೆ ಎನ್ನಲಾಗಿದೆ.





















































