ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿ ಗ್ಯಾರಂಟಿ ಯೋಜನೆ ಜಾರಿಯಾಗಿ ಒಂದು ವರ್ಷವಾಗಿದ್ದು, ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಸರ್ಕಾರದ ಯಶೋಗಾಥೆಗೆ ಸಾಕ್ಷಿಯಾಗಿದೆ. ಇದರ ಜೊತೆಯಲ್ಲೇ ಕೆಎಸ್ಸಾರ್ಟಿಸಿ ಸಹಿತ ಸಾರಿಗೆ ನಿಗಮಗಳು ಹೊಸ ಸಾಧನೆಯ ಪರ್ವಕ್ಕೆ ಸಾಕ್ಷಿಯಾಗುತ್ತಿದ್ದು, ಆರ್ಥಿಕ ಸಬಲತೆ, ಯಾಂತ್ರಿಕ ಕ್ಷಮತೆ, ನೇಮಕಾತಿ ಮೂಲಕ ನೌಕರ ಸೈನ್ಯದ ಬಲವರ್ಧನೆ ಮೂಲಕ ಕರ್ನಾಟಕ ಇಡೀ ದೇಶದ ಗಮನಸೆಳೆದಿದೆ.
ಯೋಜನೆ ಜಾರಿಯಾದಾಗಿನಿಂದ ಉಚಿತ ಪ್ರಯಾಣ ಮೂಲಕ 249 ಕೋಟಿ ಮಹಿಳೆಯರು ರಾಜ್ಯ ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ಪ್ರಯಾಣಿಸಿದ್ದು, 6051 ಕೋಟಿ ಉಚಿತ ಟಿಕೆಟ್ ಮೌಲ್ಯವಾಗಿದೆ. ಈ ಸಂಗತಿಯನ್ನೊಳಗೊಂಡ ಸಾರಿಗೆ ಇಲಾಖೆಯ ವರ್ಷದ ಸಾಧನೆಯ ಕೈಪಿಡಿಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅನಾವರಣಗೊಳಿಸಿ ಗಮನಸೆಳೆದಿದ್ದಾರೆ.
ಈ ಸಂದರ್ಭದಲ್ಲಿ ಯೋಜನೆ ಯಶಸ್ಸಿನ ಬಗ್ಗೆ ಸಂತಸ ಹಂಚಿಕೊಂಡ ರಾಮಲಿಂಗ ರೆಡ್ಡಿ, ಸಾರಿಗೆ ಸಚಿವನಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ, ಕಳೆದ ಒಂದು ವರ್ಷದ ಅವಧಿಯಲ್ಲಿ ನಾಲ್ಕು ಸಾರಿಗೆ ನಿಗಮಗಳಲ್ಲಿ ಹತ್ತಾರು ಕಾರ್ಮಿಕ ಹಾಗೂ ಪ್ರಯಾಣಿಕ ಸ್ನೇಹಿ ಉಪಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು. ಅದರಲ್ಲೂ ಶಕ್ತಿ ಗ್ಯಾರೆಂಟಿ ಯೋಜನೆಯು ಮಹಿಳಾ ಸಬಲೀಕರಣವಡೆ ಹೆಜ್ಜೆ ಇಟ್ಟಿದ್ದು, ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಾರಿಗೆ ಸಂಸ್ಥೆಯ ಸಮಸ್ತ ಕಾರ್ಮಿಕರು ಹಾಗೂ ಅಧಿಕಾರಿಗಳ ಕಾರ್ಯದಕ್ಷತೆ, ಪರಿಶ್ರಮ ವರ್ಣಿಸಲು ಪದಗಳೇ ಇಲ್ಲ ಎಂದರು.
ಶಕ್ತಿ ಯೋಜನೆ ಆರಂಭವಾದಾಗ ಸವಾಲುಗಳನ್ನು ಎದುರಿಸಬೇಕಾಯಿತು. ಆದರೆ ಇದೀಗ ಇದು ಇಡೀ ದೇಶವೇ ಈ ಯೋಜನೆಯನ್ನು ಕುತೂಹಲದಿಂದ ನೋಡುತ್ತಿದೆ ಎಂದ ಸಚಿವರು, ಕಳೆದ 5 ವರ್ಷದ ಅವಧಿಯಲ್ಲಿ ಅಂದರೆ ಹಿಂದಿನ ಸರ್ಕಾರದ ಅವಧಿಯಲ್ಲಿ ಬಿಎಂಟಿಸಿ ಹೊರತುಪಡಿಸಿ ಇತರ ನಿಗಮಗಳಿಗೆ ಯಾವುದೇ ಬಸ್ ಸೇರ್ಪಡೆಯಾಗಿರಲಿಲ್ಲ. 13988 ಹುದ್ದೆಗಳು ಖಾಲಿಯಿದ್ದರೂ ನೇಮಕಾತಿಯಾಗಿರಲಿಲ್ಲ. ನಿಗಮಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದವು. ಇದೀಗ ಸಾರಿಗೆ ಸಂಸ್ಥೆಗಳಿಗೆ ಶಕ್ತಿ ತುಂಬುವ ಪ್ರಾಮಾಣಿಕ ಕಾರ್ಯವನ್ನು ಮಾಡಿದ್ದೇನೆಂಬ ತೃಪ್ತಿ ಇದೆ ಎಂದವರು ಹೇಳಿದರು.
ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ವರ್ಷದ ಸಾಧನೆಯ ಹೈಲೈಟ್ಸ್ ಹೀಗಿದೆ:
5,800 ಹೊಸ ಬಸ್ಗಳ ಸೇರ್ಪಡೆಗೆ ಅನುಮೋದನೆ ಸಿಕ್ಕಿದೆ.
2863 ಹೊಸ ಬಸ್ಸುಗಳ ಸೇರ್ಪಡೆಯಾಗಿದೆ (KSRTC 937, BMTC 689, NWKRTC 435, KKRTC 802)
ಪಲ್ಲಕ್ಕಿ, ಅಶ್ವಮೇಧ ಕ್ಲಾಸಿಕ್, ಕಲ್ಯಾಣ ರಥ, ಅಮೋಘ ವರ್ಷ ಹೊಸ ಬಸ್ಗಳ ಸೇರ್ಪಡೆ9000 ಹುದ್ದೆಗಳ ನೇಮಕಾತಿಗೆ ಅನುಮತಿ
1883 ಚಾಲಕ – ಕಂ -ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ
6500 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿ (KSRTC 2500 ಚಾಲಕ-ಕಂ-ನಿರ್ವಾಹಕರು, BMTC – 2000 ನಿರ್ವಾಹಕರು, NWKRTC-1000 ಚಾಲಕರು, 1000 ನಿರ್ವಾಹಕರು)1277 ಹಳೆಯ ಬಸ್ಗಳ ಪುನಶ್ವೇತನ
ಶಕ್ತಿ ಯೋಜನೆ ಜಾರಿಗೆ ಮುನ್ನ ಪ್ರತಿದಿನ ಕಾರ್ಯಾಚರಣೆಗೊಳಿಸುತ್ತಿದ್ದ 158909 ಟ್ರಿಪ್ಗಳ ಪ್ರಮಾಣವು 169627ಗೆ ಹೆಚ್ಚಳ,
ಪ್ರತಿದಿನ 10718 ಹೆಚ್ಚುವರಿ ಟ್ರಿಪ್
553 ಮೃತ ಸಿಬ್ಬಂದಿಯ ಅವಲಂಬಿತರಿಗೆ ಅನುಕಂಪ ಆಧಾರದ ನೌಕರಿ ಕರ್ತವ್ದಲ್ಲಿದ್ದಾಗ ಅಪಘಾತದಲ್ಲಿ (ಆನ್ ಡ್ಯೂಟಿ/ಆಫ್ ಡ್ಯೂಟಿ) ಮೃತಪಟ್ಟ ಸಾರಿಗೆ ನಿಗಮದ ನೌಕರರ ಅವಲಂಬಿತರಿಗೆ ರೂ.1 ಕೋಟಿ ಚೆಕ್ ವಿತರಣೆ
ಅಪಘಾತದಲ್ಲಿ ಮೃತಪಟ್ಟ ಬಸ್ ಪ್ರಯಾಣಿಕರ ಕುಟುಂಬದವರಿಗೆ ಈ ಹಿಂದೆ ನೀಡುತ್ತಿದ್ದ ರೂ.3 ಲಕ್ಷ ಪರಿಹಾರ ಹಣ ರೂ.10 ಲಕ್ಷಕ್ಕೆ ಏರಿಕೆ
ಅಪಘಾತ ಹೊರತುಪಡಿಸಿ ಇತರ ಕಾರಣಗಳಿಂದ ಮೃತಪಟ್ಟ ಸಿಬ್ಬಂದಿಯ ಕುಟುಂಬಕ್ಕೆ ನೀಡಲಾಗುತ್ತಿದ್ದ ಕುಟುಂಬ ಕಲ್ಯಾಣ ವಿಮಾ ಯೋಜನೆ ಮೊತ್ತವನ್ನು ರೂ.3 ಲಕ್ಷದಿಂದ ರೂ.10 ಲಕ್ಷಕ್ಕೆ ಏರಿಕೆಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಜೊತೆ KSRTC, BMTC ಮತ್ತು KKRTC ನಿಗಮಗಳ ಸಿಬ್ಬಂದಿಗಾಗಿ ಹೃದ್ರೋಗ ತಪಾಸಣೆ ಒಡಂಬಡಿಕೆ.
ನಮ್ಮ ಕಾರ್ಗೋ-20 ಸರಕು ಸಾಗಣೆ ವಾಹನಗಳ ಮೂಲಕ ಲಾಜಿಸ್ಟಿಕ್ಸ್ ಸೇವೆ ಆರಂಭಸಾರಿಗೆ ವಿದ್ಯಾ ಚೇತನ ಯೋಜನೆ – ಸಿಬ್ಬಂದಿಗಳ ಮಕ್ಕಳಿಗೆ ಅತ್ಯಧಿಕ ಮೊತ್ತದ ವಿದ್ಯಾರ್ಥಿ ವೇತನ ಇಲ್ಲಿಯವರೆಗೆ ರೂ.2 ಕೋಟಿ ಪಾವತಿ
ವಾಕರಸಾ ಸಂಸ್ಥೆಯ ಸಿಬ್ಬಂದಿಗೆ ಕಿಮ್ಸ್ ಜೊತೆ ‘ನಗದು ರಹಿತ’ ವೈದ್ಯಕೀಯ ಸೌಲಭ್ಯ






















































ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ವರ್ಷದ ಸಾಧನೆಯ ಹೈಲೈಟ್ಸ್ ಹೀಗಿದೆ:
ಪಲ್ಲಕ್ಕಿ, ಅಶ್ವಮೇಧ ಕ್ಲಾಸಿಕ್, ಕಲ್ಯಾಣ ರಥ, ಅಮೋಘ ವರ್ಷ ಹೊಸ ಬಸ್ಗಳ ಸೇರ್ಪಡೆ
6500 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿ (KSRTC 2500 ಚಾಲಕ-ಕಂ-ನಿರ್ವಾಹಕರು, BMTC – 2000 ನಿರ್ವಾಹಕರು, NWKRTC-1000 ಚಾಲಕರು, 1000 ನಿರ್ವಾಹಕರು)
553 ಮೃತ ಸಿಬ್ಬಂದಿಯ ಅವಲಂಬಿತರಿಗೆ ಅನುಕಂಪ ಆಧಾರದ ನೌಕರಿ
ಅಪಘಾತ ಹೊರತುಪಡಿಸಿ ಇತರ ಕಾರಣಗಳಿಂದ ಮೃತಪಟ್ಟ ಸಿಬ್ಬಂದಿಯ ಕುಟುಂಬಕ್ಕೆ ನೀಡಲಾಗುತ್ತಿದ್ದ ಕುಟುಂಬ ಕಲ್ಯಾಣ ವಿಮಾ ಯೋಜನೆ ಮೊತ್ತವನ್ನು ರೂ.3 ಲಕ್ಷದಿಂದ ರೂ.10 ಲಕ್ಷಕ್ಕೆ ಏರಿಕೆ
ನಮ್ಮ ಕಾರ್ಗೋ-20 ಸರಕು ಸಾಗಣೆ ವಾಹನಗಳ ಮೂಲಕ ಲಾಜಿಸ್ಟಿಕ್ಸ್ ಸೇವೆ ಆರಂಭ