‘ಸರ್ಕಾರದ ಕಾಮಗಾರಿ ಜಾತ್ರೆಯು ಹಣ ಲೂಟಿಯ ಜಾತ್ರೆಯಲ್ಲದೆ ಬೇರೇನೂ ಅಲ್ಲ’ ಎಂಬುದು ಬೆಂಗಳೂರಿನ ಪ್ರಜ್ಞಾವಂತರ ಆಕ್ರೋಶ..
ಬೆಂಗಳೂರು: ಉದ್ಯಾನ ನಗರಿಯ ರಸ್ತೆಗಳು ಕಳಪೆ ಕಾಮಗಾರಿಯಿಂದಾಗಿ ಅಧ್ವಾನಕ್ಕೆ ಸಾಕ್ಷಿಯಾಗುತ್ತಿವೆ. ವರ್ಷವೂ ಕಾಮಗಾರಿ ನಡೆಸಿದರೂ ಒಂದೇ ಮಳೆಗೆ ರಸ್ತೆಗಳು ಹಾಳಾಗುತ್ತವೆ ಅಂದರೆ ಸರ್ಕಾರ ಕೈಗೊಳ್ಳುವ ಕಾಮಗಾರಿಯ ಗುಣಮಟ್ಟದ ಬಗ್ಗೆ ಅನುಮಾನಗಳು ಸಹಜ.
Hon. @PMOIndia, We draw your kind attention to the pathetic condition of 2B Main Road, Kasturinagar, (Kasiviswanatheswara Temple Road) Bengaluru-43. Numerous complaints to @BBMPCOMM have fallen on deaf ears and the road is a death trap especially for sr citizens. @CMofKarnataka pic.twitter.com/eYyHaTaODX
— Ramkumar Gopisetty (@ramgopisetty) October 17, 2022
ಈ ವಿಚಾರದಲ್ಲಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕುತ್ತಿರುವ ಜನರು, ‘ಸರ್ಕಾರದ ಕಾಮಗಾರಿ ಜಾತ್ರೆಯು ಹಣ ಲೂಟಿಯ ಜಾತ್ರೆಯಲ್ಲದೆ ಬೇರೇನೂ ಅಲ್ಲ’ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ರಸ್ತೆ ಅಧ್ವಾನಕ್ಕೆ ಭಾರೀ ಮಳೆಯಂತಹಾ ಪ್ರಕೃತಿ ವಿಕೋಪವೇ ಕಾರಣ ಎನ್ನುತ್ತಿರುವ ಸರ್ಕಾರದ ಮಾತನ್ನು ರಾಜಧಾನಿಯ ಪ್ರಜ್ಞಾವಂತ ಜನರು ಒಪ್ಪುತ್ತಿಲ್ಲ. ಬದಲಾಗಿ ಜನರು ಹಲವಾರು ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
◾ ಮಳೆಯನ ಕೃಪೆ ಬೆಂಗಳೂರಿಗೊಂದು ರೀತಿ, ಬೇರೆ ಜಿಲ್ಲೆಗಳಲ್ಲೊಂದು ರೀತಿ ಇರುತ್ತದೆಯೇ❓
◾ ಭಾರೀ ಮಳೆಯಾಗುತ್ತಿರುವ ಕರಾವಳಿ ಮಲೆನಾಡಿನಲ್ಲಿ ರಸ್ತೆಗಳು ವರ್ಷಗಟ್ಟಲೆ ಡಾಮರ್ ಹಾಗೇ ಇರುತ್ತಾವಲ್ಲ❓ ಬೆಂಗಳೂರಿನಲ್ಲಿ ಹೀಗೇಕೆ❓
◾ ಬೆಂಗಳೂರಿನ ರಸ್ತೆಗಳಂತೆ ಇತರ ಜಿಲ್ಲೆಗಳ ರಸ್ತೆಗಳು ಕಳಚಿಹೋಗುತ್ತಿಲ್ಲವಲ್ಲಾ❓
Best road in India. Are there any challengers for this ? @bbmpcommr @BBMPCOMM @BBMPAdmn #Bengaluru #india #roads https://t.co/NV3o8uHSRW
— Madhu KR (@madhukr) October 18, 2022
◾ ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ ಎಂಬುದು ಅಧಿಕಾರಿಗಳು ಸಬೂಬು..! ಅಂದರೆ ಮುಂಬೈ, ಹೈದರಾಬಾದ್, ದೆಹಲಿ, ಚೆನ್ನೈ, ಕೋಲ್ಕತ್ತಾ ನಗರಗಳಿಗಿಂತಲೂ ಹೆಚ್ಚು ವಾಹನಗಳು ಬೆಂಗಳೂರಿನಲ್ಲಿವೆಯೇ❓
◾ ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್, ಚೆನ್ಬೈ ನಗರಗಳಲ್ಲಿ ಭಾರೀ ಮಳೆಯಾಗುತ್ತಿದ್ದರೂ ಅಲ್ಲಿ ಬೆಂಗಳೂರಿನಂತೆ ರಸ್ತೆಗಳು ಹಾಳಾಗುತ್ತಿಲ್ಲವಲ್ಲಾ❓
◾ ಬೆಂಗಳೂರಿನಲ್ಲಿ ಕಾಮಗಾರಿಯ ಗುತ್ತಿಗೆ ನೀಡುವಾಗ ಗುತ್ತಿಗೆ ದಾರರರು ಯಾವ ದರ್ಜೆಯವರು ಎಂಬುದನ್ನು ಪರಿಶೀಲಿಸಬೇಕಲ್ಲವೇ❓ ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರರ ಅರ್ಹತೆ ಬಗ್ಗೆ ಪರಿಪೂರ್ಣ ಪರಿಶೀಲನೆ ನಡೆದಿದೆಯೇ❓
◾ ರಸ್ತೆಗಳ ಕಾಮಗಾರಿ ಬಗೆಗಿನ ‘ಡಿಫೆಕ್ಟ್ ಲಯಬಿಲಿಟಿ’ ಬಗ್ಗೆ ಕ್ಲಾರಿಟಿಯೇ ಇಲ್ಲ ಎಂಬುದು ತಜ್ಞರ ಅಭಿಪ್ರಾಯ. ಈ ಬಗ್ಗೆ ಅಧಿಕಾರಿಗಳು ಮೌನ ವಹಿಸಿರುವುದರ ಹಿಂದಿನ ರಹಸ್ಯವೇನು❓
◾ ಕಾಮಗಾರಿ ವೈಫಲ್ಯ ಬಗ್ಗೆ ಎಷ್ಟು ಪ್ರಕರಣಗಳನ್ನು ತನಿಖೆಗೆ ವಹಿಸಲಾಗಿದೆ❓ ಎಷ್ಟು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ❓ ಎಷ್ಟು ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲಾಗಿದೆ❓
Potholes – Hellholes! #Potholes have claimed yet another life in #Bengaluru.
Is this why citizens pay road tax & juggle between work & home? To meet with accidents & never see their families again?Has the administration lost its conscience completely? This is deeply hurting. pic.twitter.com/NJf1Mg5I1v
— ಮಂಜುನಾಥ್ ನಾಯ್ಡು (@ManjuForHebbala) October 17, 2022
ಈ ಕುರಿತಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದರೆ ಸರ್ಕಾರ ಹಾಗೂ ಬಿಬಿಎಂಪಿ ಅಧಿಕಾರಿಗಳು ಉತ್ತರವನ್ನೇ ಕೊಡುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರು ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Bengaluru: Woman hit by bus after falling from scooter on pothole-riddled road succumbs to injuries https://t.co/dYR5XtCV0E
— TOI Bengaluru (@TOIBengaluru) October 18, 2022
ಬೆಂಗಳೂರಿನ ಈ ಅವ್ಯವಸ್ಥೆ ಬಗ್ಗೆ ಮಾಧ್ಯಮಗಳು ಸರಣಿ ವರದಿಗಳನ್ನು ಬಿತ್ತರಿಸಿದರೂ ಅಧಿಕಾರಿಗಳು ಗಮನಹರಿಸಿಲ್ಲ. ಸರ್ಕಾರ ನಿರ್ಲಕ್ಷ್ಯ ವಹಿಸಿರುವುದೇ ಇದಕ್ಕೆ ಕಾರಣ ಎಂಬುದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಪಕ್ಷಗಳ ವ್ಯಂಗ್ಯ..! ನಾಚಿಕೆಪಡದ ಸರ್ಕಾರ?
ಕಾಮಗಾರಿ ವಿಚಾರದಲ್ಲಿ ಪರ್ಸಂಟೇಜ್ ಆರೋಪ ಕೇಳಿಬರುತ್ತದೆ. ಈ ವಿಚಾರದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ‘ಪೇ ಸಿಎಂ, ಸೇ ಸಿಎಂ’ ಹೋರಾಟ ನಡೆಸುತ್ತಿದೆ. ಈ ನಡುವೆ ಕಾಂಗ್ರೆಸ್ ಮಾಡಿರುವ ಸರಣಿ ಟ್ವೀಟ್ ಜನರ ಗಮನಸೆಳೆದಿದೆ.
‘ರಸ್ತೆಯಲ್ಲಿ ಗುಂಡಿಗಳಿದ್ದವು, ನಂತರ ರಸ್ತೆಯಲ್ಲಿ ಕಂದಕಗಳು ಸೃಷ್ಟಿಯಾದವು, ಈಗ ರಸ್ತೆಯಲ್ಲಿ ಸುರಂಗಗಳೇ ಬೀಳುತ್ತಿವೆ’ ಎಂದಿರುವ ಕಾಂಗ್ರೆಸ್, 40% ಕಮೀಷನ್ ಸರ್ಕಾರವಿದ್ದರೆ ಮುಂದೆ ರಸ್ತೆಗಳೇ ಮಾಯವಾಗುತ್ತವೆ ಎಂದಿದೆ.
This is the state of Richmond road, in the heart of #Bengaluru pic.twitter.com/gjfxRK21Ec
— Dino (@dino1184) October 19, 2022
‘ಜನಸಂಕಲ್ಪ ಸಮಾವೇಶ ಎನ್ನುವ ಸಿಎಂ ಬೊಮ್ಮಾಯಿ ಅವರೇ, ಅಸಲಿಗೆ ನೀವು ಮಾಡ್ತಿರೋದು “ಜನಸಂಕಟ” ಸಮಾವೇಶ’ ಎಂದು ವ್ಯಂಗ್ಯವಾಡಿರುವ ಕೈ ಪಕ್ಷ, ‘ಇದುವರೆಗೂ ರಸ್ತೆಗುಂಡಿಗೆ ಸುಮಾರು 16ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ, ನೂರಾರು ಜನರು ಗಾಯಗೊಂಡಿದ್ದಾರೆ. ನಿತ್ಯ ನೂರಾರು ಅಪಘಾತಗಳು ರಸ್ತೆ ಗುಂಡಿಯ ಕಾರಣಕ್ಕಾಗಿಯೇ ಸಂಭವಿಸುತ್ತಿವೆ. ರಸ್ತೆಗೆ ಹಾಕಿದ ತೇಪೆಗಳು ನಾಲ್ಕೇ ದಿನಕ್ಕೆ ಕಿತ್ತು ಹೋಗುತ್ತಿವೆ ಎಂದು ಬೆಳಕುಚೆಲ್ಲಿದೆ. ಸರ್ಕಾರದ ಕಮಿಷನ್ 40% ಗಿಂತಲೂ ಹೆಚ್ಚಿದೆಯೇ? ಎಂದೂ ಪ್ರಶ್ನಿಸಿದೆ.
ಇದುವರೆಗೂ ರಸ್ತೆಗುಂಡಿಗೆ ಸುಮಾರು 16ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ,
ನೂರಾರು ಜನರು ಗಾಯಗೊಂಡಿದ್ದಾರೆ.ನಿತ್ಯ ನೂರಾರು ಅಪಘಾತಗಳು ರಸ್ತೆ ಗುಂಡಿಯ ಕಾರಣಕ್ಕಾಗಿಯೇ ಸಂಭವಿಸುತ್ತಿವೆ.
ರಸ್ತೆಗೆ ಹಾಕಿದ ತೇಪೆಗಳು ನಾಲ್ಕೇ ದಿನಕ್ಕೆ ಕಿತ್ತು ಹೋಗುತ್ತಿವೆ.
ಸರ್ಕಾರದ ಕಮಿಷನ್ 40% ಗಿಂತಲೂ ಹೆಚ್ಚಿದೆಯೇ?@BSBommai ಅವರೇ, ಮಾತನಾಡಿ.#SayCM
— Karnataka Congress (@INCKarnataka) October 20, 2022
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಹೈಕೋರ್ಟ್ ಛಿಮಾರಿ ಹಾಕಿದರೂ, ಜನತೆ ಶಾಪ ಹಾಕಿದರೂ ರಸ್ತೆ ಗುಂಡಿ ಮುಚ್ಚಲಾಗದ ಸರ್ಕಾರಕ್ಕೆ ಇನ್ಯಾವ ಅಭಿವೃದ್ಧಿ ಮಾಡಲು ಸಾಧ್ಯ’ ಎಂದು ಸಿಎಂಗೆ ಪ್ರಶ್ನೆಗಳ ಸುರಿಮಳೆಗೈದಿದೆ.
ಸರ್ಕಾರವು ಭ್ರಷ್ಟಾಚಾರದ ಗುಂಡಿಯಲ್ಲಿ ಬಿದ್ದು ಕಮಿಷನ್ ಎಂಬ ಕೆಸರಲ್ಲಿ ಹೊರಳಾಡುತ್ತಿರುವಾಗ ಅಭಿವೃದ್ಧಿ ಮರೀಚಿಕೆಯೇ ಸರಿ ಎಂಬ ಅಭಿಪ್ರಾಯ ಹಂಚಿಕೊಂಡಿರುವ ಕಾಂಗ್ರೆಸ್, ‘ಮುಖ್ಯಮಂತ್ರಿಗಳೇ, ಗುಂಡಿ ಮುಚ್ಚಲು ಇನ್ನೆಷ್ಟು ಜನ ಸಾಯಬೇಕು?’ ಎಂದು ಮಾರ್ಮಿಕವಾಗಿ ಪ್ರಶ್ನೆ ಮಾಡಿದೆ.
ಹೈಕೋರ್ಟ್ ಛಿಮಾರಿ ಹಾಕಿದರೂ, ಜನತೆ ಶಾಪ ಹಾಕಿದರೂ ರಸ್ತೆ ಗುಂಡಿ ಮುಚ್ಚಲಾಗದ ಸರ್ಕಾರಕ್ಕೆ ಇನ್ಯಾವ ಅಭಿವೃದ್ಧಿ ಮಾಡಲು ಸಾಧ್ಯ @BSBommai ಅವರೇ?
ಸರ್ಕಾರ ಭ್ರಷ್ಟಾಚಾರದ ಗುಂಡಿಯಲ್ಲಿ ಬಿದ್ದು ಕಮಿಷನ್ ಎಂಬ ಕೆಸರಲ್ಲಿ ಹೊರಳಾಡುತ್ತಿರುವಾಗ ಅಭಿವೃದ್ಧಿ ಮರೀಚಿಕೆಯೇ ಸರಿ.
ಮುಖ್ಯಮಂತ್ರಿಗಳೇ, ಗುಂಡಿ ಮುಚ್ಚಲು
ಇನ್ನೆಷ್ಟು ಜನ ಸಾಯಬೇಕು?#SayCM— Karnataka Congress (@INCKarnataka) October 20, 2022
Traffic advisory due to yesterday heavy rain a pathole formed near Suranjan das road hal main gate,due to this problem vehicles movement towards Marathahalli is bit slow, commuters please be aware this information if possible use alternate route TQ. @DCPTrEastBCP @blrcitytraffic pic.twitter.com/1HVwBDpCs0
— HAL AIRPORT TRAFFIC BTP (@halairporttrfps) October 14, 2022
Newly raid roads hardly 10 days old been caved in now. Place: Intersection of Divyasree techpark & Vydehi hospital road Nallurahalli. Could you look into this ? pic.twitter.com/2H0tjtDDaP
— Ashok Kanthan (@Ashok_Kanthan) October 17, 2022
Amidst the heavy rains in Bengaluru, looks like there’s another death trap on the cards. This requires immediate attention. Loc- between LOWER AGARAM ROAD and VICTORIA ROAD (Hyderabadi Biryani Jn) @srinualavilli @BSBommai @BBMPCOMM #potholesinbengaluru @Janaagraha1 @mlanaharis pic.twitter.com/U9AMlg8rqh
— Maya (@theworldofmaya) October 15, 2022
This is the state of Richmond road, in the heart of #Bengaluru pic.twitter.com/gjfxRK21Ec
— Dino (@dino1184) October 19, 2022
Potholes riddled, mushy, slushy Varthur Kodi Road Status…
Still the same story "Commuters crying out in Apathy"
Crumbling infrastructure after each rain!@Leaders : Is this this been kept for next tenure under 5 year plan, is it? pic.twitter.com/iwRNgBXe8C— CITIZEN VOICE |WIDEN S-Cross| #ಬಲಗೆರೆ ರಸ್ತೆ ಬೇಡಿಕೆ (@BalagereVoice) October 17, 2022
#BREAKING | No end to Bengaluru pothole menace: Road caves in, 3feet-deep crater forms at Srirampura. BBMP rushes to the spot after angry residents file complaint – https://t.co/2rijHpLkWV pic.twitter.com/5CG1oNDH4B
— Republic (@republic) October 19, 2022
https://twitter.com/council_indian/status/1582358794717528068?t=onrnjw9OfB_HpymL9RtDfQ&s=08




































































