(ವಿಶೇಷ ವರದಿ: ನವೀನ್ ಕುಮಾರ್)
ಮಂಗಳೂರು: ಎಂಆರ್ಪಿಎಲ್ ನೇಮಕಾತಿ ವಿವಾದ ರಾಜ್ಯದ ಬಿಜೆಪಿ ಪಾಲಿಗೆ ಮುಜುಗರದ ಬೆಳವಣಿಗೆ. ರಾಜ್ಯದ ಜನರ ಕನಸುಗಳ ಸಮಾಧಿ ಮೇಲೆ ನಿಂತಿರುವ ಎಂಆರ್ಪಿಎಲ್, ಇದೀಗ ನೇಮಕಾತಿ ಸಂದರ್ಭದಲ್ಲಿ ಸ್ಥಳೀಯರನ್ನು ಕಡೆಗಣಿಸಿರುವುದು ಅಚ್ಚರಿ ಮಾತ್ರವಲ್ಲ, ಅವಮಾನವೂ ಹೌದು. ಅದರಲ್ಲೂ ರಾಜ್ಯದ ಆಡಳಿತಾರೂಢ ಪಕ್ಷದ ಅಧ್ಯಕ್ಷರು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿರುವ ಈ ಸರ್ಕಾರಿ ಸ್ವಾಮ್ಯದ ಸಂಸ್ಥೆ ಈ ರೀತಿಯ ಪ್ರಮಾದ ಎಸಗಿರುವುದಕ್ಕೆ ಜನಪ್ರತಿನಿಧಿಗಳೇ ಹೊಣೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಆಕ್ರೋಶದ ಮಾತುಗಳು.
ಎಂಆರ್ಪಿಎಲ್ನಲ್ಲಿ ಈ ರೀತಿಯ ಅವಾಂತರ ಇಂದು ನಿನ್ಬೆಯದಲ್ಲ. ಅನೇಕ ವರ್ಷಗಳಿಂದಲೂ ಹೊರ ರಾಜ್ಯಗಳ ಮಂದಿಗೆ ಈ ಸಂಸ್ಥೆಯಲ್ಲಿ ಆದ್ಯತೆ ನೀಡಲಾಗುತ್ತಿದೆ. ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಇಂತಹಾ ಪ್ರಮಾದಗಳಿಗೆ ಬಿಜೆಪಿ ನಾಯಕರು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದರು. ಆದರೆ ಇದೀಗ ಪರಿಸ್ಥಿತಿ ಬೇರೆಯೇ ಆಗಿದೆ. ಕೇಂದ್ರ ಹಾಗೂ ರಾಜ್ಯಗಳೆರಡರಲ್ಲೂ ಬಿಜೆಪಿಯೇ ಅಧಿಕಾರದಲ್ಲಿದೆ. ಹಾಗಾಗಿ ಮಂಗಳೂರು ಸಂಸದರು ಈ ವಿವಾದ ಬಗೆಹರಿಸಲು ಮುಂಚೂಣಿಯ ಪ್ರಯತ್ನ ಮಾಡಬೇಕಿತ್ತು ಎಂಬುದು ಕನ್ನಡಿಗರ ಬೈಟ್ಸ್..
ಈ ನಡುವೆ, ಎಂಆರ್ಪಿಎಲ್ ನೇಮಕಾತಿ ವಿಚಾರವನ್ನು ಮುಂದಿಟ್ಟು ಕಾಂಗ್ರೆಸ್ ಪಕ್ಷವು ಈ ಒಟ್ಟಾರೆ ವಿವಾದವನ್ನು ಸಾಮಾಜಿಕ ಜಾಲತಾಣಗಳಲ್ಲಿ ತೆರೆದಿಟ್ಟಿದೆ.
MRPL ನೇಮಕಾತಿಯಲ್ಲಿ ಸ್ಥಾನ ಪಡೆದವರ ಪಟ್ಟಿಯನ್ನು ಕಾಂಗ್ರೆಸ್ ಬಹಿರಂಗಪಡಿಸಿದೆ. ಇದರಲ್ಲಿ ಸ್ಥಳೀಯರೆನಿಸಿರುವ ಕನ್ಬಡಿಗರ ಸಂಖ್ಯೆ ಕೇವಲ 13. ‘ಆಡಳಿತದ ಕರ್ನಾಟಕದಲ್ಲಿ ಕನ್ನಡಿಗನೇ ಅನಾಥ‘ ಎಂಬ ಕಾಂಗ್ರೆಸ್ನ ಟ್ವೀಟ್ ಕನ್ನಡಿಗರನ್ನು ಭಾವನಾತ್ಮಕವಾಗಿ ಸೆಳೆಯುವಂತಿದೆ.
MRPL ನೇಮಕಾತಿಯಲ್ಲಿ ಸ್ಥಾನ ಪಡೆದವರು.
ಯುಪಿ- 59
ಮಧ್ಯಪ್ರದೇಶ- 13
ಬಿಹಾರ- 39
ಮಹಾರಾಷ್ಟ್ರ-10
ಪ.ಬಂಗಾಳ- 09
ದೆಹಲಿ – 07
ಜಾರ್ಖಂಡ್ -05
ಗುಜರಾತ್ -03
ಒರಿಸ್ಸಾ- 02
ಕೇರಳ- 08
ರಾಜಸ್ತಾನ- 02
ಆಂಧ್ರ ಪ್ರದೇಶ – 03
ತಮಿಳುನಾಡು- 01
ತೆಲಂಗಾಣ- 01⛔ಕರ್ನಾಟಕ – 13@BJP4Karnataka ಆಡಳಿತದ ಕರ್ನಾಟಕದಲ್ಲಿ ಕನ್ನಡಿಗನೇ ಅನಾಥ.
— Karnataka Congress (@INCKarnataka) May 24, 2021
ಇನ್ನೊಂದೆಡೆ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಕಾರ್ಯಕರ್ತರೂ ಎಂಆರ್ಪಿಲ್ ವಿಚಾರದಲ್ಲಿ ಮುನಿಸಿಕೊಂಡಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ. ಸದ್ಯ ಸಂಸದ ನಳಿನ್ ಕುಮಾರ್ ಅವರು ಸಮಸ್ಯೆ ಬಗೆಹರಿಸಲು ಅಖಾಡಕ್ಕೆ ಧುಮುಕುವಾಗ ಸಮಯ ಮೀರಿ ಹೋಗಿದೆ ಎಂಬುದು ಹಲವರ ಅಸಮಾಧಾನ.
ಏನಾಗುತ್ತಿದೆ ಮಂಗಳೂರಿನಲ್ಲಿ?
MRPL ಸಂಸ್ಥೆ ನೇಮಿಸಿದ 184 ಮಂದಿ ಕೇವಲ 2 ತುಳುವರಿಗೆ ಮತ್ತು 11 ಮಾತ್ರ ಕರ್ನಾಟಕದವರು.
ಕರಾವಳಿಯ ಸಂಸದ, ಶಾಸಕರೇ… ನಮ್ಮ ಯುವಕರು ಎಲ್ಲಿಗೆ ಹೋಗಿ ಸಾಯಬೇಕು..?
ಅಂದೂ ಅನ್ಯಾಯ, ಇಂದೂ ಅನ್ಯಾಯವೇ..?#Politics #mrpl #mangalore #kudla https://t.co/6uYQm9d1Wi pic.twitter.com/r77Cgsw1oZ
— Sudarshan Shetty 🇮🇳 (@Sudarshanshty) May 22, 2021
ಅದಾಗಲೇ ನೇಮಕಾತಿ ಪ್ರಕ್ರಿಯೆಯ ಪರಿಪೂರ್ಣದ ಹಂತದಲ್ಲಿ ಎಚ್ಚೆತ್ತುಕೊಂಡಿರುವ ನಳಿನ್ ಬಗ್ಗೆ ವ್ಯಾಪಕ ವ್ಯಂಗ್ಯ ಹಾಗೂ ಆಕ್ರೋಶದ ಮಾತುಗಳು ಪ್ರತಿಧ್ವನಿಸುತ್ತಿರುವುದು ಬಿಜೆಪಿಯ ಸಮಸ್ತ ನಾಯಕರಿಗೂ ಎಚ್ಚರಿಕೆಯ ಘಂಟೆಯಂತಿದೆ.
ಎಂ.ಆರ್.ಪಿ.ಎಲ್ ಸುತ್ತಲಿನ ಜನರಿಗೆ ಕೊಟ್ಟ ಕಾಟ ಸ್ವಲ್ಪ ಏನು!
ವಾತಾವರಣ, ಕುಡಿಯುವ ನೀರು ಎಲ್ಲಾ ಕೊಳಕು ಓಡಾಡೋ ದಾರಿಗೂ ಅಡ್ಡ
ಅಲ್ಲಿನ ಸ್ಥಳೀಯರು ಎಷ್ಟು ವರ್ಷಗಳಿಂದ ಹೋರಾಟ ಮಾಡ್ತಾ ಇದ್ದಾರೆ ತುಳುನಾಡು ಆ ಬಗ್ಗೆ ತಲೆ ಕೆಡಿಸಿಕೊಂಡಿತೇ?
ಜಾಗ ಕೊಟ್ಟರು ಆ ಕಂಪೆನಿ ನಿಮ್ಮದೆಂಬ ಭಾವನೆ ಎಂದಾದರೂ ಬಂದಿದ್ಯ
ಹಾಗಾಗಿ ಕೆಲಸ ಕೊಡದಿದ್ದರೂ ಸುದ್ದಿಯಿಲ್ಲ— ಕ್ರುಶಿಕ ಎವಿ/Krushika AV (@KrishKrushik) May 22, 2021