ಮಂಗಳೂರು: ಪುರಾಣ ಪ್ರಸಿದ್ದ ಕಟೀಲು ಕ್ಷೇತ್ರ ಅನೇಕಾನೇಕ ಕೈಂಕರ್ಯಗಳಿಂದಾಗಿ ನಾಡಿನ ಗಮನಸೆಳೆಯುತ್ತಲಿದೆ. ಈ ನಡುವೆ ಕಟೀಲಿನಲ್ಲಿಂದು ನಡೆದ ಸಮಾರಂಭ ಅನನ್ಯ ವಿಶೇಷತೆಗೆ ಸಾಕ್ಷಿಯಾಯಿತು.
ಅನ್ನ ದಾಸೋಹ, ಅಕ್ಷರ ದಾಸೋಹದ ಮೂಲಕ ನಾಡಿನ ಆಸ್ತಿಕ ಸಮುದಾಯದ ಪಾಲಿಗೆ ಅಭಯ ನೀಡುವ ದೇವಿಯ ಕ್ಷೇತ್ರದ ವತಿಯಿಂದ ಗುರು ವೈಭವ ಕಾರ್ಯಕ್ರಮ ನೆರವೇರಿತು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ಶಿಕ್ಷಣ ಸಂಸ್ಥೆಗಳ 125 ಶಿಕ್ಷಕರ ಉಪಸ್ಥಿತಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ, ಕಟೀಲು ವಿದ್ಯಾ ಸಂಸ್ಥೆಗಳಿಂದ ನಿವೃತ್ತಿಗೊಂಡ ಉಪನ್ಯಾಸಕರನ್ನು ಗೌರವಿಸಲಾಯಿತು.