(ವರದಿ: ನವೀನ್)
ಮಂಗಳೂರು: ಆಧುನೀಕತೆಯ ಅಬ್ಬರದ ನಡುವೆ ಸಂಸ್ಕೃತಿ ಸೌರಭ ಮರೆಯಾಗಿದೆ ಎಂಬ ಅಪವಾದ ಸಹಜ. ಆದರೆ ಮಂಗಳೂರಿನ ಸನ್ನಿವೇಶವೊಂದು ಅದೆಲ್ಲದಕ್ಕೂ ಉತ್ತರ ಎಂಬಂತಿದೆ.
ಮುಗಿಲೆತ್ತರ ಹಾರಿದ ಆಕಾಶ ಬುಟ್ಟಿಗಳು, ಪರಿಸರವನ್ನೇ ನಸುನಗಿಸುವಂತೆ ಮಾಡಿದ ದೀಪಗಳ ವಯ್ಯಾರ, ವರ್ಣ ಚಿತ್ತಾರದ ರಂಗೋಳಿಯ ಅಲಂಕಾರ.. ಚೆಲುವೆಯರ ಸೌಂದರ್ಯ ಸೊಬಗು.. ಸಾಂಸ್ಕೃತಿಕ ಸೊಗಸಿಗೆ ಆಕರ್ಷಣೆ ತಂದ ಯುವಕರ ಉತ್ಸಾಹ.. ಇದೆಲ್ಲವನ್ನೂ ಕಂಡ ಗಣ್ಯರು ಮೂಕವಿಸ್ಮಿತ.
ವಿಶೇಷತೆಗಳಿಗೆ ಹೆಸರಾಗಿರುವ ‘ಕರಾವಳಿ’ಯ ಕ್ರಿಯಾಶೀಲ ಶಿಕ್ಷಣ ತಜ್ಞರಲ್ಲೊಬ್ಬರಾದ ಎಸ್.ಗಣೇಶ್ ರಾವ್ ಅವರು ದೀಪಾಳಿ ಸಂದರ್ಭದಲ್ಲಿ ಈ ಸುಂದರ ಸಾಂಸ್ಕೃತಿಕ ಲೋಕವನ್ನು ಅನಾವರಣ ಮಾಡಿಸಿದ್ದರು. ತಮ್ಮ ಸಂಸ್ಥೆಯಲ್ಲಿ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಅವರು ಹಬ್ಬ ಸಂಭ್ರಮದಿಂದ ದೂರ ಉಳಿಯಬಾರದೆಂಬ ಉದ್ದೇಶದಿಂದ ಕಾಲೇಜು ಆವರಣದಲ್ಲಿ ಈ ಸಡರದ ಸನ್ನಿವೇಶವನ್ನು ಕರಾವಳಿ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಗಣೇಶ್ ರಾವ್ ಹಾಗೂ ನಿರ್ದೇಶಕಿ ಲತಾ ಜಿ.ರಾವ್ ಅವರು ಸೃಷ್ಟಿಸಿದ್ದರು.
ಕ್ಯಾಂಪಸ್ ತುಂಬೆಲ್ಲಾ ರಂಗೋಳಿಯ ಚಿತ್ತಾರ.. ಮುಗಿಲರತ್ತರ ಚಾಚಿದ ಕಟ್ಟಡಳಿಗೂ ದೀಪಗಳ ಅಲಂಕಾರ.. ಅಲ್ಲಲ್ಲಿ ವಿದ್ಯಾರ್ಥಿಗಳೇ ಬೆಳಗಿಸಿದ ಜ್ಯೋತಿ ವಯ್ಯಾರವು ಸಿರಿವಂತಿಕೆಯ ಹಬ್ಬವಾದ ಈ ದೀಪಾವಳಿಯ ಆಕರ್ಷಣೆಯನ್ನು ನೂರ್ಮಡಿಗೊಳಿಸಿತು.