ಬೆಂಗಳೂರು: ರಾಜ್ಯದಲ್ಲಿ ಜನವರಿ ತಿಂಗಳಲ್ಲಿ 6,085 ಕೋಟಿ ರೂಪಾಯಿಗಳ ದಾಖಲೆ ಜಿಎಸ್ಟಿ ಸಂಗ್ರಹವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ರಾಜ್ಯದಿಂದ ಇಷ್ಟು ದೊಡ್ಡಮಟ್ಟದಲ್ಲಿ ಜಿಎಸ್ಟಿ ಸಂಗ್ರಹವಾಗುತ್ತಿದ್ದರೂ, ಕೇಂದ್ರದಿಂದ ಇನ್ನೂ 12 ಸಾವಿರ ಕೋಟಿ ಬಾಕಿ ಹಣ ಏಕೆ ಇನ್ನೂ ಬಂದಿಲ್ಲ? ಎಂದು ಜಾತ್ಯತೀತ ಜನತಾ ದಳ ಪ್ರಶ್ನಿಸಿದೆ.
ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಜಿಎಸ್ಟಿ ಸಂಗ್ರಹದಲ್ಲಿ ಶೇ 30ರಷ್ಟು ಅತ್ಯಧಿಕ ಬೆಳವಣಿಗೆ ಹೊಂದಿರುವ ರಾಜ್ಯವಾಗಿ ಕರ್ನಾಟಕ ಮುಂದುವರಿದಿದೆ. ನಮ್ಮ ರಾಜ್ಯದ ಆರ್ಥಿಕತೆ ಬಲಿಷ್ಠವಾಗುತ್ತಿರುವುದೇನೊ ಸರಿ. ಆದರೆ, ಕೇಂದ್ರದ ಖಜಾನೆ ತುಂಬಿಸುವ ದೇಶದ ಪ್ರಮುಖ ಮತ್ತು ಕೆಲವೇ ರಾಜ್ಯಗಳಲ್ಲಿ ಒಂದಾದ ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯವೇಕೆ ಎಂದು ಪ್ರಶ್ನಿಸಿದೆ.
ಬಾಕಿ ಬರಬೇಕಿರುವ 12 ಸಾವಿರ ಕೋಟಿ ಜಿಎಸ್ಟಿ ಹಣ ಇನ್ನೂ ಯಾವ ಕಾಲಕ್ಕೆ ಬರುತ್ತದೆ? ಇದಕ್ಕಾಗಿ @BJP4India ನೇತೃತ್ವದ ಒಕ್ಕೂಟ ಸರ್ಕಾರದ ಬಳಿ ನಾವ್ಯಾಕೆ ಗೋಗರೆಯಬೇಕು? ಒಕ್ಕೂಟ ವ್ಯವಸ್ಥೆಯ ಅರ್ಥವನ್ನೇ ತಲೆಕೆಳಗು ಮಾಡುವ ನಡಾವಳಿ ಇದು. ಜಿಎಸ್ ಟಿ ಪರಿಹಾರ ನೀಡುವಿಕೆಯು ಕಳೆದ ಜೂನ್ ನಲ್ಲೆ ಸ್ಥಗಿತವಾಗಿದೆ. 3/6
— Janata Dal Secular (@JanataDal_S) February 15, 2023
ಬಾಕಿ ಬರಬೇಕಿರುವ 12 ಸಾವಿರ ಕೋಟಿ ಜಿಎಸ್ಟಿ ಹಣ ಇನ್ನೂ ಯಾವ ಕಾಲಕ್ಕೆ ಬರುತ್ತದೆ? ಇದಕ್ಕಾಗಿ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರದ ಬಳಿ ನಾವ್ಯಾಕೆ ಗೋಗರೆಯಬೇಕು? ಒಕ್ಕೂಟ ವ್ಯವಸ್ಥೆಯ ಅರ್ಥವನ್ನೇ ತಲೆಕೆಳಗು ಮಾಡುವ ನಡಾವಳಿ ಇದು. ಜಿಎಸ್ ಟಿ ಪರಿಹಾರ ನೀಡುವಿಕೆಯು ಕಳೆದ ಜೂನ್ನಲ್ಲೆ ಸ್ಥಗಿತವಾಗಿದೆ ಎಂದು ಬೊಟ್ಟುಮಾಡಿದೆ.
ಹೀಗಾಗಿ, ಜಿಎಸ್ಟಿ ಪರಿಹಾರ ಹಣ ಇಲ್ಲದೆಯೇ ಹಣಕಾಸು ನಿರ್ವಹಣೆ ಮಾಡಬೇಕಿರುವುದು ರಾಜ್ಯ @BJP4Karnataka ಸರ್ಕಾರದ ಮುಂದಿರುವ ದೊಡ್ಡ ಸವಾಲು. ಡಬಲ್ ಎಂಜಿನ್ ಸರ್ಕಾರ ಎಂದು ಬೆನ್ನುತಟ್ಟಿಕೊಳ್ಳುವ ಮುಖ್ಯಮಂತ್ರಿ @BSBommaiಯವರೆ, ಜಿಎಸ್ ಟಿ ಪರಿಹಾರ ಹಣ ತರಿಸುವುದು ಇಷ್ಟು ಕಗ್ಗಂಟಾದರೆ ಹೇಗೆ? 4/6
— Janata Dal Secular (@JanataDal_S) February 15, 2023
ಜಿಎಸ್ಟಿ ಪರಿಹಾರ ಹಣ ಇಲ್ಲದೆಯೇ ಹಣಕಾಸು ನಿರ್ವಹಣೆ ಮಾಡಬೇಕಿರುವುದು ರಾಜ್ಯ ಬಿಜೆಪಿ ಸರ್ಕಾರದ ಮುಂದಿರುವ ದೊಡ್ಡ ಸವಾಲು. ಡಬಲ್ ಎಂಜಿನ್ ಸರ್ಕಾರ ಎಂದು ಬೆನ್ನುತಟ್ಟಿಕೊಳ್ಳುವ ಮುಖ್ಯಮಂತ್ರಿಯವರೇ, ಜಿಎಸ್ ಟಿ ಪರಿಹಾರ ಹಣ ತರಿಸುವುದು ಇಷ್ಟು ಕಗ್ಗಂಟಾದರೆ ಹೇಗೆ? ಎಂದು ಪ್ರಶ್ನೆ ಮಾಡಿದೆ.
ಕೇಂದ್ರ @BJP4India ಸರ್ಕಾರದ ಈ ನಡೆಯಿಂದಾಗಿ ರಾಜ್ಯದ ಹಣಕಾಸು ಲೆಕ್ಕಾಚಾರವೇ ತಲೆಕೆಳಗಾಗುತ್ತಿದೆ. ಆದಾಯ, ತೆರಿಗೆ, ಜಿಎಸ್ಟಿ ಹಾಗೂ ಇನ್ನಿತರ ತೆರಿಗೆಗಳ ಮೂಲಕ ಕರ್ನಾಟಕದಿಂದ ಲಕ್ಷಾಂತರ ಕೋಟಿ ರೂಪಾಯಿಗಳು ಕೇಂದ್ರದ ಬೊಕ್ಕಸಕ್ಕೆ ಸೇರುತ್ತಿದೆ. ಆದರೂ, ಕಣ್ಣಿಗೆ ರಾಚುವಷ್ಟು ತಾರತಮ್ಯ ಎಸಗುತ್ತಿರುವುದು ಅನ್ಯಾಯವೇ ಸರಿ. 5/6
— Janata Dal Secular (@JanataDal_S) February 15, 2023
ಕೇಂದ್ರ ಸರ್ಕಾರದ ಈ ನಡೆಯಿಂದಾಗಿ ರಾಜ್ಯದ ಹಣಕಾಸು ಲೆಕ್ಕಾಚಾರವೇ ತಲೆಕೆಳಗಾಗುತ್ತಿದೆ. ಆದಾಯ, ತೆರಿಗೆ, ಜಿಎಸ್ಟಿ ಹಾಗೂ ಇನ್ನಿತರ ತೆರಿಗೆಗಳ ಮೂಲಕ ಕರ್ನಾಟಕದಿಂದ ಲಕ್ಷಾಂತರ ಕೋಟಿ ರೂಪಾಯಿಗಳು ಕೇಂದ್ರದ ಬೊಕ್ಕಸಕ್ಕೆ ಸೇರುತ್ತಿದೆ. ಆದರೂ, ಕಣ್ಣಿಗೆ ರಾಚುವಷ್ಟು ತಾರತಮ್ಯ ಎಸಗುತ್ತಿರುವುದು ಅನ್ಯಾಯವೇ ಸರಿ ಎಂದಿರುವ ಜೆಡಿಎಸ್, ಈಗಲಾದರೂ ಕರ್ನಾಟಕಕ್ಕೆ ಬರಬೇಕಿರುವ ನ್ಯಾಯಯುತ ಪಾಲು ಕೊಡಲು ನಿಮ್ಮದೇ ಬಿಜೆಪಿ ಪಕ್ಷದ ಒಕ್ಕೂಟ ಸರ್ಕಾರದ ಮೇಲೆ ಸಕಾರಣ ಒತ್ತಡ ಹಾಕಿ. ರಾಜ್ಯದ ಪ್ರಗತಿಗೆ ಅಡ್ಡಗಾಲು ಹಾಕುವ ಇಂತಹ ತಾರತಮ್ಯ ಸಹಿಸಿಕೊಂಡದ್ದೇ ಆದರೆ, ಕನ್ನಡಿಗರಿಗೆ ಅದಕ್ಕಿಂತ ದೊಡ್ಡ ಅನ್ಯಾಯವಿರಲಾರದು. ಈಗಲಾದರೂ ಬೆನ್ನುಮೂಳೆ ಗಟ್ಟಿ ಮಾಡಿಕೊಳ್ಳಿ ಎಂದು ಸಿಎಂ ಬೊಮ್ಮಾಯಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.























































