ಬೆಂಗಳೂರು: ಚಂದ್ರಯಾನ ಬಗ್ಗೆ ಕುತೂಹಲ ಎದ್ದಿರುವಾಗಲೇ ಪ್ರಗತಿಪರರ ನಡೆಯೊಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇಸ್ರೋ ಅಧಿಕಾರಿಗಳ ನಡೆಯನ್ನು ಟೀಕಿಸುವ ಆತುರದಲ್ಲಿ ಎಡವಟ್ಟಿಗೆ ಕಾರಣವಾಗಿರುವ ಚಿಂತಕರ ಗುಂಪು ಇದೀಗ ನೆಟ್ಟಿಗರ ಟೀಕೆಗೂ ಗುರಿಯಾಗಿದೆ.
ಚಂದ್ರಯಾನದ ಸಾಹಸವನ್ನು ಅಭಿನಂದಿಸಿರುವ ಪ್ರಗತಿಪರ ಚಿಂತಕರು, ಚಂದ್ರಯಾನದ ಮಾದರಿಯನ್ನು ತಿರುಪತಿಗೆ ಕೊಂಡೊಯ್ದು ಪೂಜೆ ನೆರವೇರಿಸಿರುವ ಅಧಿಕಾರಿಗಳ ನಡೆ ಬಗ್ಗೆ ಆಕ್ಷೇಪಿಸಿದ್ದಾರೆ. ಈ ಕುರಿತ ಖಂಡನಾ ಹೇಳಿಕೆಯಲ್ಲಿ ‘ಚಂದ್ರಯಾನ’ ಎನ್ನುವ ಬದಲು ‘ಮಂಗಳಯಾನ’ ಎಂದಿದ್ದಾರೆ. ಬಿಜೆಪಿ ಕಾರ್ಯಕರ್ತರು ಈ ಹೇಳಿಕೆ ಬಗ್ಗೆ ಕಟು ಟೀಕೆ ವ್ಯಕ್ತಪಡಿಸಿದ್ದಾರೆ.
ಈ ಎಡವಟ್ಟನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೂ, ‘ಚಂದ್ರಯಾನ , ಮಂಗಳಯಾನದ ನಡುವಿನ ಅಂತರ ಗೊತ್ತಿಲ್ಲದ, ಎಲ್ಲದರ ಬಗ್ಗೆಯೂ ಅಭಿಪ್ರಾಯ ಹೊಂದಿರುವ, ಎಲ್ಲದರಲ್ಲೂ ಕಹಿ ಹರಡುವ ದೊಡ್ಡವರು’ ಎಂದು ವ್ಯಂಗ್ಯವಾಡಿದ್ದಾರೆ.
ಚಂದ್ರಯಾನ , ಮಂಗಳಯಾನದ ನಡುವಿನ ಅಂತರ ಗೊತ್ತಿಲ್ಲದ , ಎಲ್ಲದರ ಬಗ್ಗೆಯೂ ಅಭಿಪ್ರಾಯ ಹೊಂದಿರುವ , ಎಲ್ಲದರಲ್ಲೂ ಕಹಿ ಹರಡುವ ದೊಡ್ಡವರು ….!!!! pic.twitter.com/FwPVu3IdZF
— B L Santhosh ( Modi Ka Parivar ) (@blsanthosh) July 14, 2023