ದೊಡ್ಡಬಳ್ಳಾಪುರ: ಬೈಕ್ಗೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಳೆದ ರಾತ್ರಿ ತಾಲೂಕಿನ ಅರಳು ಮಲ್ಲಿಗೆ ಕೆರೆ ಏರಿ ಮೇಲೆ ನಡೆದಿದೆ.
ಲೋಕೇಶ್ (28) ಮೃತಪಟ್ಟ ಬೈಕ್ ಸವಾರ ಎನ್ನಲಾಗಿದೆ. ಲಾರಿಯು ಚಾಲಕನ ನಿರ್ಲಕ್ಷದಿಂದ ಮೊದಲು ಆಲಹಳ್ಳಿ ಬಳಿ ಕಾರಿಗೆ ಡಿಕ್ಕಿ ಹೊಡೆಯಲಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿಗೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಲು ವೇಗವಾಗಿ ಸಾಗಿ ಕೆರೆ ಏರಿ ಮೇಲೆ ಬೈಕ್ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಬೈಕ್ ಗೆ ಢಿಕ್ಕಿಯಾದ ಲಾರಿ ಅಲ್ಲಿಂದಲೂ ಪರಾರಿಯಾಗಿದೆ. ಇದನ್ನು ಕಂಡ ಮಧುರೆ ಹೋಬಳಿ ನಿವಾಸಿ ಚೇತನ್ ಎಂಬವರು ಲಾರಿಯನ್ನು ಹಿಂಬಾಲಿಸಿ ನೆಲಮಂಗಲದ ಬಿನ್ನಮಂಗಲದ ಬಳಿ ಲಾರಿ ಸಮೇತ ಚಾಲಕನನ್ನ ಹಿಡಿದು ನೆಲಮಂಗಲ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಪಘಾತ ಘಟನೆ ಬಗ್ಗೆ ಪರಿಶೀಲಿಸಿರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.





















































