ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಕಾಂಗ್ರೆಸ್ ನಿಂದ ರಾತ್ರಿ ಐತಿಹಾಸಿಕ ಪಂಜಿನ ಮೆರವಣಿಗೆ ನಡೆದಿದ್ದು, ಸಾವಿರಾರು ಜನರು ಭಾಗಿಯಾದರು. ಪ್ರತಿಭಟನೆಯಲ್ಲಿ ಭಾಗಿಯಾದ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ಸರಕಾರ ದೇವಸ್ಥಾನ ದ್ವಂಸಗೊಳಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಕೇಸರಿ ಶಾಲು ಧರಿಸಿ, ಹಿಂದೂ ಸಂಘಟನೆಗಳ ಕಾರ್ಯಕರ್ತರಂತೆ ಪ್ರತಿಭಟನಾ ನಿರತ ಕಾಂಗ್ರೆಸ್ ಕಾರ್ಯಕರ್ತರು ಗಮನಸೆಳೆದರು.
ಧರ್ಮರಕ್ಷಣೆ ಮಾಡುತ್ರೇವೆ ಎನ್ನುವ ಬಿಜೆಪಿಯು ಆಂಜನೇಯ ಮೂರ್ತಿಯನ್ನ ಕಸದ ತೊಟ್ಟಿಗೆ ಎಸೆಯುವಂತ ಕೆಲಸ ಮಾಡಿದೆ. ಯಾವ ಲಾಭಕ್ಕಾಗಿ ದೇವಸ್ಥಾನವನ್ನು ಕೆಡವುವ ಕೆಲಸಕ್ಕೆ ಕೈಹಾಕಿದಿರಿ? ರಾಜ್ಯದ ಜನ ಕಣ್ಮುಚ್ಚಿ ಕುಳಿತುಕೊಳ್ಳುವುದಿಲ್ಲ ಎಂದು ಪ್ರತಿಭಟನಾಕಾರರು ಗಿಡುಗಿದರು.
ಕಪಟ ಹಿಂದುತ್ವದ ನಾಟಕಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುತ್ತಾರೆ.ದೇವರ, ಧರ್ಮದ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿ.ಜೆ.ಪಿಯ ನೈಜ ಬಣ್ಣ ಬಯಲಾಗಿದೆ ಎಂದು ಸರ್ಕಾರದ ವಿರುದ್ದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಗೋಪಾಲ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಮಯದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಸ್.ರಾಜು ಪೂಜಾರಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೌರಿ ದೇವಾಡಿಗ, ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಮಾಜಿ ತಾಲೂಕು ಪಂಚಾಯತ್ ಸದಸ್ಯರುಗಳಾದ ರಮೇಶ್ ಗಾಣಿಗ ಕೊಲ್ಲೂರು, ಜಗದೀಶ್ ದೇವಾಡಿಗ, ಮೀನುಗಾರ ಮುಖಂಡರಾದ ವೆಂಕಟರಮಣ ಖಾರ್ವಿ, ನಾಗೇಶ್ ಖಾರ್ವಿ, ಯುವ ಕಾಂಗ್ರೇಸ್ ಮುಖಂಡರುಗಳಾದ ಶೇಖರ ಪೂಜಾರಿ, ರಾಘವೇಂದ್ರ ಪೂಜಾರಿ ತುಂಬೇರಮನೆ, ಶಿವರಾಜ್ ಗಾಣಿಗ, ದಿಲೀಪ್ ದೇವಾಡಿಗ ಯಡ್ತರೆ, ಹರೀಶ್ ಜಟ್ಟಿತ್ಲು, ಸಂದೀಪ್ ಕೊಡೇರಿಮನೆ, ಸ್ಥಳೀಯರಾದ ಉದಯ್ ಪೂಜಾರಿ ಶಿರೂರು, ಗಣೇಶ್ ಗಾಣಿಗ ಟೈಲರ್ ತಗ್ಗರ್ಸೆ, ಗಣೇಶ್ ಪೂಜಾರಿ ಯಡ್ತರೆ ಮೊದಲಾದವರು ಉಪಸ್ಥಿತರಿದ್ದರು.

























































