ಬೆಂಗಳೂರು: ವಿಧಾನಸಭೆ ಸ್ಪೀಕರ್ ಆಗಿ ಕಾಂಗ್ರೆಸ್ ಹಿರಿಯ ಶಾಸಕ ಯು.ಟಿ. ಖಾದರ್ ಆಯ್ಕೆಯಾಗಿದ್ದಾರೆ.
ವಿಧಾನಸಭೆಯಲ್ಲಿಂದು ನಡೆದ ಸ್ಪೀಕರ್ ಆಯ್ಕೆ ಪ್ರಕ್ರಿಯೆ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯು.ಟಿ.ಖಾದರ್ ಹೆಸರನ್ನು ಪ್ರಸ್ತಾಪಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅನುಮೋದಿಸಿದರು. ಪ್ರತಿಪಕ್ಷಗಳಿಂದ ಯಾರೂ ಸ್ಪರ್ಧಿಗಳು ಇಲ್ಕದಿದ್ದುದರಿಂದ ಕಾಂಗ್ರೆಸ್ ಪಕ್ಷದ ಶಾಸಕ ಯು.ಟಿ.ಖಾದರ್ ಅವರು ಆಯ್ಕೆಯಾದರು. ಹಂಗಾಮಿ ಸ್ಪೀಕರ್ ದೇಶಪಾಂಡೆ ಅವರು ಯುಟಿ.ಖಾದರ್ ಅವರನ್ನು ವಿಧಾನಸಭಾಧ್ಯಕ್ಷರನ್ನಾಗಿ ಘೋಷಿಸಿದ ಬಳಿಕ ಖಾದರ್ ಅವರು ಸ್ಪೀಕರ್ ಆಸನದತ್ತ ತೆರಳಿ ಅಧಿಕಾರ ವಹಿಸಿಕೊಂಡರು.
23ನೇ ಸ್ಪೀಕರ್ ಆಗಿ ಆಯ್ಕೆಯಾದ ಯು.ಟಿ. ಖಾದರ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಮುಸಲ್ಮಾನ ಸಮುದಾಯದವರೊಬ್ಬರು ಸಭಾಪತಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಮುಸಲ್ಮಾನ ಸಮುದಾಯದವರೊಬ್ಬರು ಸಭಾಪತಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ.ಅದರಲ್ಲೂ ವಿಶೇಷವಾಗಿ ಮಾನ್ಯ ಯು.ಟಿ ಖಾದರ್ ರವರು ಈ ಸ್ಥಾನ ಅಲಂಕರಿಸಿರುವುದು ವಿಧಾನಸಭೆಗು ಒಂದು ಭೂಷಣ.
ಕೆಲವರ ಬಾಯಿಂದ 'ಮಾನ್ಯ ಅಧ್ಯಕ್ಷರೆ' ಎಂಬ ಸಂಬೋಧನೆಯನ್ನು ಕೇಳಲು ಉತ್ಸುಕಳಾಗಿದ್ದೇನೆ.
1/2 pic.twitter.com/7JwMpDGYJI— Najma Nazeer Chikkanerale (@najmanazeerINC) May 23, 2023
ನೂತನ ಸಭಾಧ್ಯಕ್ಷರಾಗಿ ಆಯ್ಕೆ ಬಗ್ಗೆ ಸಂತಸ ಹಂಚಿಕೊಂಡಿರುವ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಸಾಂವಿಧಾನಿಕ ಮೌಲ್ಯಗಳನ್ನ ಎತ್ತಿಹಿಡಿಯುವ ಮೂಲಕ ಯು.ಟಿ.ಖಾದರ್ ಅವರಿಂದ ಸ್ಪೀಕರ್ ಹುದ್ದೆಗೆ ಘನತೆ, ಗೌರವ ತರುವಂತಾಗಲಿ ಎಂದು ಆಶಿಸಿದ್ದಾರೆ.
ವಿಧಾನಸಭೆಯ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿರುವ ಶ್ರೀ @utkhader ಅವರಿಗೆ ಅಭಿನಂದನೆಗಳು.
ಸಾಂವಿಧಾನಿಕ ಮೌಲ್ಯಗಳನ್ನ ಎತ್ತಿಹಿಡಿಯುವ ಮೂಲಕ ಸ್ಪೀಕರ್ ಹುದ್ದೆಗೆ ಘನತೆ, ಗೌರವ ತರುವಂತಾಗಲಿ ಎಂದು ಶುಭ ಕೋರುತ್ತೇನೆ. pic.twitter.com/Uv3rbDE3RC
— Hariprasad.B.K. (@HariprasadBK2) May 24, 2023
ವಿಧಾನಸಭೆಯ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಯು.ಟಿ. ಖಾದರ್ ಅವರಿಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿಯವರು ಅಭಿನಂದನೆ ಸಲ್ಲಿಸಿದ್ದಾರೆ. ‘ನಿಮ್ಮ ಅಧ್ಯಕ್ಷತೆಯಲ್ಲಿ ರಾಜ್ಯ ವಿಧಾನಸಭೆಯ ಕಲಾಪಗಳು ಸುಗಮವಾಗಿ ನಡೆದು, ಮೌಲ್ಯಯುತ ಚರ್ಚೆಗಳು ನಡೆದು, ನಾಡಿನ ಸಮಸ್ಯೆಗಳಿಗೆ ಈ ಸದನದ ಮೂಲಕ ಸೂಕ್ತ ನ್ಯಾಯ ದೊರಕುವಂತಾಗಲಿ’ ಎಂದು ಬೊಮ್ಮಾಯಿ ಆಶಿಸಿದ್ದಾರೆ.
ವಿಧಾನಸಭೆಯ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಯು.ಟಿ. ಖಾದರ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.
ನಿಮ್ಮ ಅಧ್ಯಕ್ಷತೆಯಲ್ಲಿ ರಾಜ್ಯ ವಿಧಾನಸಭೆಯ ಕಲಾಪಗಳು ಸುಗಮವಾಗಿ ನಡೆದು, ಮೌಲ್ಯಯುತ ಚರ್ಚೆಗಳು ನಡೆದು, ನಾಡಿನ ಸಮಸ್ಯೆಗಳಿಗೆ ಈ ಸದನದ ಮೂಲಕ ಸೂಕ್ತ ನ್ಯಾಯ ದೊರಕುವಂತಾಗಲಿ. pic.twitter.com/qpHbIkT3jU
— Basavaraj S Bommai (Modi Ka Parivar) (@BSBommai) May 24, 2023