ದೆಹಲಿ: ಕೇಂದ್ರ ಸಂಪುಟ ಸೇರಿರುವ ರಾಜ್ಯದ ಸಚಿವರಿಗೆ ಮಹತ್ವದ ಖಾತೆಗಳನ್ನೇ ಪ್ರಧಾನಿ ಮೋದಿಯವರು ಹಂಚಿಕೆ ಮಾಡಿದ್ದಾರೆ. ಶೋಭಾ ಕರಾಂದ್ಲಾಜೆ ಅವರಿಗೆ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯನ್ನು ಹಂಚಿಕೆ ಮಾಡಲಾಗಿದ್ದು, ಎ.ನಾರಾಯಣ ಸ್ವಾಮಿ ಅವರಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯನ್ನು ವಹಿಸಲಾಗಿದೆ. ರಾಜೀವ್ ಚಂದ್ರಶೇಖರ್ ಅವರಿಗೆ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆಯನ್ನು ಹಂಚಿಕೆ ಮಾಡಲಾಗಿದ್ದು, ಭಗವಂತ ಖೂಬಾ ಅವರಿಗೆ ಹೊಸ ಮತ್ತು ನವೀಕರಿಸಬಹುದಾದ ಇಂಧನ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆಯನ್ನು ವಹಿಸಲಾಗಿದೆ.
ಸಚಿವರ ಪಟ್ಟಿ, ಮತ್ತು ಅವರ ಖಾತೆಗಳು:
- ರಾಜನಾಥ್ ಸಿಂಗ್: ರಕ್ಷಣಾ ಖಾತೆ
- ಅಮಿತ್ ಶಾ: ಗೃಹ, ಸಹಕಾರ ಖಾತೆ
- ನಿತಿನ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ
- ನಿರ್ಮಲಾ ಸೀತಾರಾಮನ್: ಹಣಕಾಸು, ಕಾರ್ಪೊರೇಟ್ ವ್ಯವಹಾರಗಳ
- ನರೇಂದ್ರ ಸಿಂಗ್ ತೋಮರ್: ಕೃಷಿ ಮತ್ತು ರೈತ ಕಲ್ಯಾಣ ಸಚಿವ
- ಎಸ್ ಜೈಶಂಕರ್: ವಿದೇಶಾಂಗ ಸಚಿವ
- ಅರ್ಜುನ್ ಮುಂಡಾ: ಬುಡಕಟ್ಟು ವ್ಯವಹಾರಗಳ ಸಚಿವ
- ಸ್ಮೃತಿ ಇರಾನಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ
- ಪಿಯೂಷ್ ಗೋಯಲ್: ವಾಣಿಜ್ಯ ಮತ್ತು ಕೈಗಾರಿಕಾ, ಗ್ರಾಹಕ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣಾ, ಜವಳಿ ಸಚಿವ
- ಧರ್ಮೇಂದ್ರ ಪ್ರಧಾನ್: ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ
ಪ್ರಲ್ಹಾದ್ ಜೋಶಿ: ಸಂಸದೀಯ ವ್ಯವಹಾರ, ಕಲ್ಲಿದ್ದಲು, ಗಣಿ - ನಾರಾಯಣ್ ರಾಣೆ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಖಾತೆ
ಸರ್ಬಾನಂದ ಸೋನೊವಾಲ್: ಬಂದರು, ಹಡಗು ಮತ್ತು ಜಲಮಾರ್ಗ, ಆಯುಷ್
ಮುಖ್ತಾರ್ ಅಬ್ಬಾಸ್ ನಖ್ವಿ: ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ. - ಡಾ.ವಿರೇಂದ್ರ ಕುಮಾರ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಗಿರಿರಾಜ್ ಸಿಂಗ್: ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಖಾತೆ - ಜ್ಯೋತಿರಾಧಿತ್ಯ ಸಿಂಧಿಯಾ: ನಾಗರಿಕ ವಿಮಾನಯಾನ ಸಚಿವ
- ರಾಮಚಂದ್ರ ಪ್ರಸಾದ್ ಸಿಂಗ್: ಉಕ್ಕಿನ ಸಚಿವ
- ಅಶ್ವಿನಿ ವೈಷ್ಣವ್: ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ
- ಪಶುಪತಿ ಕುಮಾರ್ ಪಾರಸ್: ಆಹಾರ ಸಂಸ್ಕರಣಾ ಕೈಗಾರಿಕೆ ಸಚಿವ
- ಗಜೇಂದ್ರ ಸಿಂಗ್ ಶೇಖಾವತ್: ಜಲ ಶಕ್ತಿ ಸಚಿವ
- ಕಿರನ್ ರಿಜಿಜು: ಕಾನೂನು ಮತ್ತು ನ್ಯಾಯ ಮಂತ್ರಿ
- ರಾಜ್ ಕುಮಾರ್ ಸಿಂಗ್: ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ
- ಹರ್ದೀಪ್ ಸಿಂಗ್ ಪುರಿ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಸತಿ ಮತ್ತು ನಗರ ವ್ಯವಹಾರಗಳ ಸಚಿವ
- ಮನ್ಸುಖ್ ಮಾಂಡವಿಯಾ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ
- ಭೂಪೇಂದರ್ ಯಾದವ್: ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಕಾರ್ಮಿಕ ಮತ್ತು ಉದ್ಯೋಗ ಸಚಿವ
- ಮಹೇಂದ್ರ ನಾಥ್ ಪಾಂಡೆ: ಭಾರಿ ಕೈಗಾರಿಕಾ ಸಚಿವ
- ಪರ್ಶೋತ್ತಮ್ ರೂಪಾಲ: ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರ ಸಚಿವ
- ಜಿ ಕಿಶನ್ ರೆಡ್ಡಿ: ಸಂಸ್ಕೃತಿ, ಪ್ರವಾಸೋದ್ಯಮ, ಈಶಾನ್ಯ ಅಭಿವೃದ್ಧಿ ಸಚಿವ
- ಅನುರಾಗ್ ಠಾಕೂರ್: ಮಾಹಿತಿ ಮತ್ತು ಪ್ರಸಾರ, ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ
ರಾಜ್ಯ ಸಚಿವರ ಪಟ್ಟಿ ಮತ್ತು ಅವರ ಖಾತೆಗಳು:
- ಶ್ರೀಪಾದ್ ಯೆಸ್ಸೊ ನಾಯಕ್: ಬಂದರುಗಳು, ಸಾಗಣೆ ಮತ್ತು ಜಲಮಾರ್ಗಗಳು; ಪ್ರವಾಸೋದ್ಯಮ ಸಚಿವ
- ಫಗ್ಗನ್ಸಿಂಗ್ ಕುಲಸ್ತೆ: ಉಕ್ಕು, ಗ್ರಾಮೀಣಾಭಿವೃದ್ಧಿ
- ಪ್ರಹಲಾದ್ ಸಿಂಗ್ ಪಟೇಲ್: ಜಲಶಕ್ತಿ, ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ
- ಅಶ್ವಿನಿ ಕುಮಾರ್ ಚೌಬೆ: ಗ್ರಾಹಕ ವ್ಯವಹಾರ; ಆಹಾರ ಮತ್ತು ಸಾರ್ವಜನಿಕ ವಿತರಣೆ; ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ
- ಅರ್ಜುನ್ ರಾಮ್ ಮೇಘವಾಲ್: ಸಂಸದೀಯ ವ್ಯವಹಾರಗಳು, ಸಂಸ್ಕೃತಿ ಖಾತೆ
- ವಿ ಕೆ ಸಿಂಗ್: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ನಾಗರಿಕ ವಿಮಾನಯಾನ ಖಾತೆ
- ಕ್ರಿಶನ್ ಪಾಲ್: ಪವರ್, ಹೆವಿ ಇಂಡಸ್ಟ್ರೀಸ್
ಡ್ಯಾನ್ವೆ ರೌಸಾಹೇಬ್ ದಾದರಾವ್: ರೈಲ್ವೆ, ಕಲ್ಲಿದ್ದಲು, ಗಣಿ ಸಚಿವ - ರಾಮದಾಸ್ ಅಥಾವಾಲೆ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ
- ಸಾಧ್ವಿ ನಿರಂಜನ್ ಜ್ಯೋತಿ: ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಗ್ರಾಮೀಣಾಭಿವೃದ್ಧಿ ಖಾತೆ
- ಸಂಜೀವ್ ಕುಮಾರ್ ಬಾಲ್ಯನ್: ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ ಸಚಿವ
- ನಿತ್ಯಾನಂದ್ ರೈ: ಗೃಹ ವ್ಯವಹಾರ
ಪಂಕಜ್ ಚೌಧರಿ: ಹಣಕಾಸು ಸಚಿವ - ಅನುಪ್ರಿಯಾ ಸಿಂಗ್ ಪಟೇಲ್: ವಾಣಿಜ್ಯ ಮತ್ತು ಕೈಗಾರಿಕೆಗಳ ಖಾತೆ
- ಎಸ್ ಪಿ ಸಿಂಗ್ ಬಾಗೆಲ್: ಕಾನೂನು ಮತ್ತು ನ್ಯಾಯ ಖಾತೆ
- ರಾಜೀವ್ ಚಂದ್ರಶೇಖರ್: ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆ
- ಶೋಭಾ ಕರಂದ್ಲಾಜೆ: ಕೃಷಿ ಮತ್ತು ರೈತರ ಕಲ್ಯಾಣ ಖಾತೆ
- ಭಾನು ಪ್ರತಾಪ್ ಸಿಂಗ್ ವರ್ಮಾ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಖಾತೆ
- ದರ್ಶನಾ ವಿಕ್ರಮ್ ಜರ್ದೋಷ್: ಜವಳಿ, ರೈಲ್ವೆ ಸಚಿವ
- ವಿ ಮುರಲೀಧರನ್: ವಿದೇಶಾಂಗ ವ್ಯವಹಾರಗಳು, ಸಂಸದೀಯ ವ್ಯವಹಾರಗಳ ಖಾತೆ
- ಮೀನಾಕ್ಷಿ ಲೇಖಿ: ವಿದೇಶಾಂಗ ವ್ಯವಹಾರ, ಸಂಸ್ಕೃತಿ ಖಾತೆ
- ಸೋಮ್ ಪ್ರಕಾಶ್: ವಾಣಿಜ್ಯ ಮತ್ತು ಕೈಗಾರಿಕೆ ಖಾತೆ
- ರೇಣುಕಾ ಸಿಂಗ್ ಸಾರುಟಾ: ಬುಡಕಟ್ಟು ವ್ಯವಹಾರ ಖಾತೆ
- ರಾಮೇಶ್ವರ ತೆಲಿ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಕಾರ್ಮಿಕ ಮತ್ತು ಉದ್ಯೋಗ ಖಾತೆ
- ಕೈಲಾಶ್ ಚೌಧರಿ: ಕೃಷಿ ಮತ್ತು ರೈತರ ಕಲ್ಯಾಣ ಖಾತೆ
- ಅನ್ನಪೂರ್ಣ ದೇವಿ: ಶಿಕ್ಷಣ ಖಾತೆ
- ಎ ನಾರಾಯಣಸ್ವಾಮಿ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ
- ಕೌಶಲ್ ಕಿಶೋರ್: ವಸತಿ ಮತ್ತು ನಗರ ವ್ಯವಹಾರಗಳ ಖಾತೆ
- ಅಜಯ್ ಭಟ್: ರಕ್ಷಣಾ, ಪ್ರವಾಸೋದ್ಯಮ
ಬಿ ಎಲ್ ವರ್ಮಾ: ಈಶಾನ್ಯ ಪ್ರದೇಶದ ಅಭಿವೃದ್ಧಿ, ಸಹಕಾರ ಖಾಾತೆ - ಅಜಯ್ ಕುಮಾರ್: ಗೃಹ ವ್ಯವಹಾರ
ದೇವುಸಿಂಹ ಚೌಹಾನ್: ಸಂವಹನ ಖಾತೆ - ಭಗವಂತ್ ಖುಬಾ: ಹೊಸ ಮತ್ತು ನವೀಕರಿಸಬಹುದಾದ ಶಕ್ತಿ, ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಖಾತೆ
- ಕಪಿಲ್ ಮೊರೇಶ್ವರ ಪಾಟೀಲ್: ಪಂಚಾಯತ್ ರಾಜ್ ಖಾತೆ
- ಪ್ರತಿಮಾ ಭೂಮಿಕ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ
- ಸುಭಾಸ್ ಸರ್ಕಾರ್: ಶಿಕ್ಷಣ ಖಾತೆ
- ಭಗವತ್ ಕಿಶನ್ರಾವ್ ಕರಡ್: ಹಣಕಾಸು ಖಾತೆ
- ರಾಜ್ಕುಮಾರ್ ರಂಜನ್ ಸಿಂಗ್: ವಿದೇಶಾಂಗ, ಶಿಕ್ಷಣ ಖಾತೆ
- ಭಾರತಿ ಪ್ರವೀಣ್ ಪವಾರ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ
- ಬಿಶ್ವೇಶ್ವರ ತುಡು: ಬುಡಕಟ್ಟು ವ್ಯವಹಾರ, ಜಲ ಶಕ್ತಿ ಖಾತೆ
- ಶಾಂತನು ಠಾಕೂರ್: ಬಂದರುಗಳು, ಸಾಗಣೆ ಮತ್ತು ಜಲಮಾರ್ಗಗಳ ಖಾತೆ
- ಮುಂಜಾಪರ ಮಹೇಂದ್ರಭಾಯ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆಯುಷ್ ಖಾತೆ
- ಜಾನ್ ಬಾರ್ಲಾ: ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ
- ಎಲ್ ಮುರುಗನ್: ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ, ಮಾಹಿತಿ ಮತ್ತು ಪ್ರಸಾರ ಖಾತೆ
- ನಿಸಿತ್ ಪ್ರಮಣಿಕ್: ಗೃಹ ವ್ಯವಹಾರ, ಯುವ ವ್ಯವಹಾರ ಮತ್ತು ಕ್ರೀಡೆ ಖಾತೆ