ಸೌದಿ ದೊರೆ ಮತ್ತು ಧರ್ಮ ನಿಂದನೆ ಆರೋಪದಡಿ ಬಂಧನಕ್ಕೋಳಗಾಗಿದ್ದ ಹರೀಶ್ ಬಂಗೇರ
ಉಡುಪಿ: ಸೌದಿ ದೊರೆ ಮತ್ತು ಧರ್ಮ ನಿಂದನೆ ಆರೋಪದಡಿ ಬಂಧನಕ್ಕೋಳಗಾಗಿದ್ದ ಹರೀಶ್ ಬಂಗೇರ ಇದೀಗ ಬಿಡುಗಡೆಯಾಗಿ ತವರಿಗೆ ಮರಳಿದ್ದಾರೆ.
ಹರೀಶ್ ಬಂಗೇರ ಹೆಸರಿನ ನಕಲಿ ಫೆಸ್ಬುಕ್ ಖಾತೆಯಿಂದ ಅವಹೇಳನಕಾರಿ ಪೋಸ್ಟ್ ಹಾಕಲಾಗಿತ್ತು. ಮೂಡಬಿದಿರೆ ಮೂಲದ ಮುಸ್ಲಿಂ ಸಹೋದರರು ಈ ಕೃತ್ಯ ನಡೆಸಿದ್ದಾರೆನ್ನಲಾಗಿದೆ. ಆದರೆ ಫೇಸ್ಬುಕ್ನಲ್ಲಿ ಹರಸರಿದೆ ಎಂಬ ಕಾರಣಕ್ಕೆ ಹರೀಶ್ ಬಂಗೇರ ಅವರನ್ನು ಸೌದಿ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು.
ಇತ್ತ, ಉಡುಪಿ ಸೆನ್ ಠಾಣೆಯಲ್ಲೂ ಈ ಕುರಿತು ಪ್ರಕರಣ ದಾಖಲಾಗಿತ್ತ. ಉಡುಪಿ ಪೊಲೀಸರ ತನಿಖೆಯ ವೇಳೆ ಕೃತ್ಯ ನಡೆಸಿರುವ ಆರೋಪಿಗಳು ಯಾರೆಂಬ ಬಗ್ಗೆ ಗೊತ್ತಾಗಿದೆ. ಈ ವರದಿಯನ್ನು ಮುಂದಿಟ್ಟು ಕೇಂದ್ರ ಸಚಿವಾಲಯದ ಮೂಲಕ ಪ್ರಕರಣದ ಕುರಿತು ಸೌದಿ ಅಧಿಕಾರಗಳ ಜೊತೆ ನಿರಂತರ ಮಾತುಕತೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ, ಎರಡು ವರ್ಷಗಳ ಬಳಿಕ ಸೌದಿ ಜೈಲಿನಿಂದ ಬಿಡುಗಡೆಗೊಂಡು ಹರೀಶ್ ಬಂಗೇರ ಅವರು ತಾಯ್ನಾಡಿಗೆ ಮರಳಿದ್ದಾರೆ.
ಬೆಂಗಳೂರು ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಹರೀಶ್ ಬಂಗೇರ ಅವರನ್ನು ಕುಟುಂಬ ಸದಸ್ಯರು ಬರಮಾಡಿಕೊಂಡರು.