ಮಂಗಳೂರು: ಕಡಲತಡಿಯ ನಗರಿ ಮಂಗಳೂರಿನ ಸಂಘನಿಕೇತನದಲ್ಲಿ ಅಮೃತ ಮಹೋತ್ಸವ ಸಂಭ್ರಮಾಚರಣೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿವಿಧತೆಯಿಂದ ನಾಡಿನ ಗಮನಸೆಳೆದಿದೆ. ಧರ್ಮ-ಸಂಸ್ಕೃತಿಯ ಶಕ್ತಿಕೇಂದ್ರವಾಗಿರುವ ಸಂಘನಿಕೇತನದಲ್ಲಿ ವಿಘ್ನ ನಿವಾರಕನ ಕೈಂಕರ್ಯದ ಜೊತೆ, ಸಾಂಸ್ಕೃತಿಕ ಮಹಾವೈಭವ ಕೂಡಾ ಮೇಳೈಸಿದೆ.

ಗಣೇಶೋತ್ಸವ ಅಮೃತ ಮಹೋತ್ಸವ ಪ್ರಯುಕ್ತ ಲೋಕ ಕಲ್ಯಾಣಾರ್ಥ ಶ್ರೀನಿವಾಸ ನಿಗಮಾಗಮ ಪಾಠಶಾಲೆಯ ವಿದ್ಯಾರ್ಥಿಗಳಿಂದ ಶ್ರೀ ಗಣೇಶ ಅಷ್ಟೋತ್ತರ ಶತನಾಮ, ಅಥರ್ವಶೀರ್ಷ ಜಪ ನೆರವೇರಿತು. ಸಹಸ್ರ ಮೋದಕ ಹವನ ಕೈಂಕರ್ಯವು ವೇದಮೂರ್ತಿ ಯಸ್ ಸುಧಾಕರ್ ಭಟ್ ಮುಂದಾಳುತ್ವದಲ್ಲಿ ನೆರವೇರಿತು .
ಸಾಂಸ್ಕ್ರತಿಕ ಕಾರ್ಯಕ್ರಮಗಳು ಈ ಮಹೋತ್ಸವಕ್ಕೆ ಆಕರ್ಷಣೆ ತುಂಬಿದೆ. ಭವ್ಯ ವೇದಿಕೆಯಲ್ಲಿ ಆಳ್ವಾಸ್ ಸಾಂಸ್ಕ್ರತಿಕ ವೈಭವ ಕಾರ್ಯಕ್ರಮ ಗಮನಕೇಂದ್ರೀಕರಿಸಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿ ನಡೆಸಿಕೊಟ್ಟ ಈ ನೃತ್ಯ ಕಾರ್ಯಕ್ರಮ ಗಣೇಶ ಭಕ್ತರ ಮೆಚ್ಚುಗೆಗೆ ಪಾಯ್ರವಾಯಿತು.
ಈ ಕಾರ್ಯಕ್ರಮಗಳಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸತೀಶ್ ಪ್ರಭು, ಸುರೇಶ ಕಾಮತ್ , ಉಪಾಧ್ಯಕ್ಷರಾದ ಜೆ.ಕೆ ರಾವ್, ಆನಂದ ಪಾಂಗಳ, ಕೆ.ಪಿ.ಟೈಲಾರ್, ಅಭಿಷೇಕ್ ಭಂಡಾರಿ, ಜೀವನರಾಜ್ ಶೆಣೈ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ವಿನೋದ್ ಶೆಣೈ, ರಘುವೀರ್ ಕಾಮತ್, ಎಸ್.ಆರ್.ಕುಡ್ವ , ಗಣೇಶ್ ಪ್ರಸಾದ್, ಜಯಪ್ರಕಾಶ್ ಮಂಗಳಾದೇವಿ ಸ್ವಾಮಿಪ್ರಸಾದ್ ಸಹಿತ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು
