ಮಂಗಳೂರು: ಎರಡು ವರ್ಷಗಳ ಹಿಂದೆ ನವೀಕರಣ ಮೂಲಕ ದೇಶದ ಗಮನಸೆಳೆದ ಪುರಾಣ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಮುಂಬರುವ 2021ರ ಫೆಬ್ರವರಿ 17ರಂದು ದೃಢಕಳಸದ ಕೈಂಕರ್ಯ ನೆರವೇರಲಿದೆ.
ಈ ಮತ್ತೊಂದು ಮಹಾ ಉತ್ಸವಕ್ಕೆ ತಯಾರಿ ಸಾಗಿದ್ದು, ಬಂಟ್ವಾಳ ಸಮೀಪದ ಪೊಳಲಿ ಕ್ಷೇತ್ರದಲ್ಲಿ ಇಂದು ಮಹತ್ವದ ಸಭೆ ನಡೆಯಿತು. ಶ್ರೀ ಕ್ಷೇತ್ರ ಪೊಳಲಿಯಲ್ಲಿ ನಡೆಯಲಿರುವ ದೃಡಕಲಶದ ಪೂರ್ವತಯಾರಿಯ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ದೇವಾಲಯದ ಪ್ರಮುಖರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಕೈಂಕರ್ಯದ ರೂಪುರೇಷೆ ಸಿದ್ದಪಡಿಸಲಾಯಿತು.
ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಪ್ರಮುಖರು, ಸಂಸದ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲು ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಸಹಮತದೊಂದಿಗೆ ಕಾರ್ಯಕ್ರಮಕ್ಕೆ ತಯಾರಿ ನಡೆಸಲು ತೀರ್ಮಾನಿಸಿದರು. ದೇಗುಲದ ಅನುವಂಶೀಯ ಮೋಕ್ತೇಸರರು, ತಂತ್ರಿವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.