ಬೆಂಗಳೂರು : ತೀವ್ರ ಜಿದ್ದಾಜಿದ್ದಿನ ಐಪಿಎಲ್ ಅಖಾಡಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೂಡಾ ಕ್ರಿಕೆಟ್ ಅಭಿಮಾನಿಗಳ ಫೆವರೇಟ್ ತಂಡವಾಗಿದೆ. ಆದರೆ ತವರು ನೆಲದಲ್ಲೇ ಸತತ ಸೋಲುಂಡಿರುವ RCB ಇದೀಗ ನಾಲ್ಕು ಪಂದ್ಯಗಲ್ಲಷ್ಟೇ ಗೆಲುವು ಸಾಧಿಸಿದ್ದು ಪ್ಲೇಆಫ್ಗೇರುವ ಸಾಧ್ಯತೆಗಳಿವೆಯೇ ಎಂಬ ಚಿಂತೆ ಅಭಿಮಾನಿಗಳನ್ನು ಕಾಡತೊಡಗಿದೆ.
ಈ ಬಾರಿಯ ಐಪಿಎಲ್ ಸೆಣಸಾಟದ ಮೊದಲಾರ್ಧ ಪೂರ್ಣಗೊಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇನ್ನು ಮುಂದೆ ದ್ವಿತೀಯಾರ್ಧವನ್ನು ಕ್ರಮಿಸಲಿದೆ. ಶುಕ್ರವಾರ ತನ್ನ ವಿರುದ್ಧ ಗೆದ್ದು ಬೀಗಿದ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ತಿಂಗಳ 20 ರಂದು ದ್ವಿತೀಯಾರ್ಧವನ್ನು ಆರಂಭಿಸಲಿದೆ.
ಆರ್ಸಿಬಿ ತಂಡಕ್ಕೆ ದ್ವಿತೀಯಾರ್ಧದಲ್ಲಿ 7 ಪಂದ್ಯಗಳ ಸವಾಲು ಇದ್ದು ಪ್ಲೇಆಫ್ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲು 16 ಅಂಕಗಳ ಅವಶ್ಯಕತೆಯಿದೆ. ಸದ್ಯ 8 ಅಂಕಗಳನ್ನು ಪಡೆದಿರುವ ಆರ್ಸಿಬಿ ತಂಡ ಈ ದ್ವಿತೀಯಾರ್ಧದಲ್ಲಿ 4 ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಈ 7 ಪಂದ್ಯಗಳಲ್ಲಿ 4 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ತವರು ನೆಲವಾದರೂ ಈವರೆಗಿನ ಪಂದ್ಯಗಳಲ್ಲಿ ಸತತ ಸೋಲು ಕಂಡಿರುವ ಆರ್ಸಿಬಿ ಮುಂಬರುವ ಪಂದ್ಯಗಳಲ್ಲಿ ಯಾವ ರೀತಿ ಪ್ರದರ್ಶನ ನೀಡಬಹುದು ಎಂಬ ಕುತೂಹಲ. ಆದರೆ, ತಾಯ್ನಾಡಿನಲ್ಲಿನ ಮುಂಬರುವ ಪಂದ್ಯಗಳಲ್ಲಿ ಆರ್ಸಿಬಿ ಗೆದ್ದು ಪ್ಲೇಆಫ್ಗೇರಲಿದೆ ಎಂದು ಫ್ಯಾನ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.