ಆಸ್ತಿಗಾಗಿ ದಾಯಾದಿಗಳ ಕಲಹ, ಆಹಾರ ಇಲ್ಲದೆ ವನವಾಸ ಅನುಭವಿಸುತ್ತಿರುವ ಜಾನುವಾರು.. ರಾತ್ರೋರಾತ್ರಿ ಮೇವಿನ ಬಣವಿಗೆ ಬೆಂಕಿ, ಧಗಧಗನೇ ಹೊತ್ತೆ ಉರಿದ ಬಣವಿಗಳು.. ನ್ಯಾಯ ಕೇಳಲು ಪೊಲೀಸ ಠಾಣೆಗೆ ಬಂದ್ ಜಾನುವಾರುಗಳು..
ವರದಿ: ಶ್ವೇತಾ,ಎಸ್ ಕೊಣ್ಣೂರ
ಗದಗ: ಆಸ್ತಿಗಾಗಿ ನಡೆದ ದಾಯಾದಿಗಳ ಕಲಹದಿಂದ ಮೂಖ ಪ್ರಾಣಿಗಳು ವನವಾಸ ಅನುಭವಿಸುವಂತಾಗಿದೆ. ವರ್ಷದುದ್ದಕ್ಕೂ ಆಗುವಷ್ಟು ಆಹಾರವನ್ನು ಶೇಖರಣೆ ಮಾಡಿದ್ದ, ಬಣವಿಗೆ ಬೆಂಕಿ ಇಡಲಾಗಿದೆ. ಹೀಗಾಗಿ ಜಾನುವಾರು ಸಮೇತವಾಗಿ ಪೊಲೀಸ ಠಾಣೆಗೆ ನ್ಯಾಯ ಕೆಳಲು ಬಂದಿದೆ ನೊಂದ ಕುಟುಂಬ.
ಗದಗ ಜಿಲ್ಲೆ ನರಗುಂದ ತಾಲೂಕಿನ ಹುಣಶೀಕಟ್ಟಿ ಗ್ರಾಮದ ನಿವಾಸಿಯಾದ ಹನಮಂತಗೌಡ ಹೆಬ್ಬಳ್ಳಿ ಎನ್ನುವವರಿಗೆ ಸೇರಿದ ಮೇವಿನ ಬಣವಿಗಳಿಗೆ ಬೆಂಕಿ ಕಚ್ಚಲಾಗಿದೆ.
ಹುಣಶೀಕಟ್ಟಿ ಗ್ರಾಮದಲ್ಲಿ ಸುಮಾರು 12 ಎಕರೆ ಜಮೀನಿನ ವಿಷಯದಲ್ಲಿ ಹನಮಂತಗೌಡ ಹಾಗೂ ಬಸವನಗೌಡ ಹೆಬ್ಬಳ್ಳಿ ನಡುವೆ ಕಲಹ ಉಂಟಾಗಿದೆ. ಕೋರ್ಟ್ನಲ್ಲಿರುವ ಕೇಸ್ ವಾಪಾಸ್ಸ್ ಪಡೆಯುವಂತೆ ನಾಲ್ಕೈದು ದಿನಗಳ ಹಿಂದೆ. ಹನಮಂತಗೌಡ ಹೆಬ್ಬಳ್ಳಿ ಮೇಲೆ, ಬಸವನಗೌಡ ಹೆಬ್ಬಳ್ಳಿ ಕುಟುಂಬ ಸಮೇತವಾಗಿ ಬಂದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ರು ಎನ್ನಲಾಗಿದೆ. ಆದಾದ ಮೇಲೆ ನಿನ್ನೆ ರಾತ್ರಿ ಮತ್ತೇ ಬಸವನಗೌಡ ಹೆಬ್ಬಳ್ಳಿ ಹಾಗೂ ಅವರ ಕುಟುಂಬ ಸದಸ್ಯರು ಜಾನುವಾರುಗಳಿಗೆ ಶೇಖರಣೆ ಮಾಡಿದ, ನಾಲ್ಕು ಮೇವಿನ ಬಣವಿಗಳಿಗೆ ಬೆಂಕಿ ಹಚ್ವಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಜಾನುವಾರುಗಳಿಗೆ ಹಾಕಲು ಆಹಾರ ಇಲ್ಲಾ ನಮಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಠಾಣೆಗೆ ಬಂದಿದ್ದಾರೆ.
ಸುಮಾರು ಮೂರು ಲಕ್ಷ ಮೌಲ್ಯದ ಮೇವಿನ ಬಣವಿ ಹಾಗೂ ಕೃಷಿಗೆ ಉಪಯೋಗಿಸಿ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಹೊತ್ತಿಗೆ ಸುಟ್ಟು ಭಸ್ಮವಾಗಿವೆ.
ಹನಮಂತಗೌಡ ಹೆಬ್ಬಳ್ಳಿ ಮೇಲೆ ಕಳೆದ ಮೂರು ದಿನಗಳ ಹಿಂದೆ ಬಸವನಗೌಡ ಹೆಬ್ಬಳ್ಳಿ ಹಲ್ಲೆ ಮಾಡಿದ್ದಕ್ಕೆ, ನರಗುಂದ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದರ ನಡುವೆ ಈಗ ಜಾನುವಾರುಗಳ ಮೇವು ಸುಟ್ಟಿರೋದರಿಂದ ಕುಟುಂಬ ಕಂಗಾಲಾಗಿದೆ. ಹೀಗಾಗಿ ನಮಗೆ ಆತ್ಮಹತ್ಯೆ ಒಂದೇ ದಾರಿ ಅಂತಿದ್ದಾರೆ ನೊಂದ ಕುಟುಂಬ. ನಮಗೆ ನ್ಯಾಯಕೊಡಿಸಿ ಎಂದು ಅಂಗಲಾಚುತ್ತಿದೆ.
ಈ ಕುರಿತು ನರಗುಂದ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿತರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.