ಕಳೆದುಹೋದ ಹಸುವಿನ ಕಿವಿಯೊಲೆಯ ಇನ್ಸೂರೆನ್ಸ್.. ಹಸು ಸಾವನ್ನಪ್ಪಿದ್ದಾಗ ಇನ್ಸೂರೆನ್ಸ್ ಹಣ ನೀಡಲು ಬಮೂಲ್ ನಿರಾಕರಣೆ..
ದೊಡ್ಡಬಳ್ಳಾಪುರ : ಪಶು ಸಂಗೋಪನೆಯಿಂದ ಜೀವನ ನಡೆಸುತ್ತಿರುವ ಬಡ ಕುಟುಂಬಕ್ಜೆ ಬಮೂಲ್ ಶಾಕ್ ನೀಡಿದೆ. ಹಾಲು ಕರೆಯುತ್ತಿದ್ದ ಹಸು ಹಾವು ಕಡಿತದಿಂದ ಇದಕ್ಕಿದಂತೆ ಸಾವನ್ನಪ್ಪಿದೆ. ಹಸುವಿನ ಕಿವಿಯೊಲೆ ಕಳೆದುಹೋಗಿದ್ದರಿಂದ ಇನ್ಸೂರೆನ್ಸ್ ಹಣ ನೀಡಲು ಬಮೂಲ್ ಅಧಿಕಾರಿಗಳು ನಿರಕಾರಿಸಿದ್ದಾರೆ. ಇದರಿಂದ ಬಡ ಕುಟುಂಬ ಸಂಕಷ್ಟಕ್ಕೆ ತುತ್ತಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರದ ಮುನಿಯಮ್ಮ ಕುಟುಂಬಕ್ಕೆ ಹಸು ಸಾಕಣಿಕೆ ಪ್ರಮುಖ ಉದ್ಯೋಗ. ಪಶು ಸಂಗೋಪನೆಯಿಂದ ಜೀವನ ನಡೆಯುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಮುನಿಯಮ್ಮನವರ 5 ಹಸುಗಳು ಇದಕ್ಕಿದಂತೆ ಸಾವನ್ನಪ್ಪಿದವು. ಆದರೆ ಇಲ್ಲಿಯವರೆಗೂ ಇನ್ಸೂರೆನ್ಸ್ ಹಣ ಮಾತ್ರ ಮುನಿಯಮ್ಮರವರ ಕೈಗೆ ಸಿಕ್ಕಿಲ್ಲ. ಲಕ್ಷ ಲಕ್ಷ ಬೆಲೆ ಬಾಳುವ ಹಸುವನ್ನ ಕಳೆದುಕೊಂಡ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
ಒಂದೂವರೆ ವರ್ಷದ ಹಿಂದೆ ಒಂದು ಲಕ್ಷ ಮೌಲ್ಯದ ಹೆಚ್ ಎಫ್ ಎಕ್ಸ್ ತಳಿಯ ಹಸುವೊಂದು ಇದಕ್ಕಿದಂತೆ ಸಾವನ್ನಪ್ಪಿದೆ. ಹಾವು ಕಡಿತದಿಂದ ಸಾವನ್ನಪ್ಪಿರುವ ಸಂಶಯ ಇದ್ದು, ಇದೇ ಹಸುವಿಗೆ ಮುನಿಯಮ್ಮ ಬಮೂಲ್ ಗುಂಪು ರಾಸುಗಳ ಮರಣ ಪರಿಹಾರದಲ್ಲಿ 60 ಸಾವಿರ ಇನ್ಸೂರೆನ್ಸ್ ಮಾಡಿಸಿದರು. ಹಸುವಿನ ನಂಬರ್ ಬಂದಿದ್ದು ಇನ್ಸೂರೆನ್ಸ್ ಕಿವಿಯೊಲೆಯನ್ನು ಹಸುವಿಗೆ ಹಾಕಲಾಗಿತ್ತು. ಹಸುವಿನ ಕಳೆಬರಹವನ್ನ ಮಣ್ಣು ಮಾಡುವ ಕಾರಣಕ್ಕೆ ಬೇರೆದೊಂದು ಸ್ಥಳಕ್ಕೆ ವರ್ಗಾವಣೆ ಮಾಡುವಾಗ ಇನ್ಸೂರೆನ್ಸ್ ಕಿವಿಯೊಲೆ ಕಳೆದು ಹೋಗಿದೆ. ಇನ್ನೂರೆನ್ಸ್ ಹಣಕ್ಕಾಗಿ ಬಮೂಲ್ ಅಧಿಕಾರಿಗಳನ್ನ ಸಂಪರ್ಕಿಸಿದ್ದಾಗ, ಕಿವಿಯೊಲೆ ಇದ್ದರೆ ಮಾತ್ರ ಇನ್ಸೂರೆನ್ಸ್ ಹಣ ಕೊಡುವುದ್ದಾಗಿ ಹೇಳಿದ್ದಾರೆ.
ಬಮೂಲ್ ನಿರ್ದೇಶಕರಾದ ಬಿ.ಸಿ.ಆನಂದ್, ಹಾಲಿನ ಡೈರಿಯ ಕಾರ್ಯದರ್ಶಿ, ಪಶು ವೈದ್ಯರ ಬಳಿಯು ಸಾವನ್ನಪ್ಪಿರುವ ಹಸುವಿನ ಇನ್ಸೂರೆನ್ಸ್ ನಂಬರ್ ಗೊತ್ತಿದ್ದು, ಇವರೆಲ್ಲಾ ಸಾವನ್ನಪ್ಪಿರುವ ಹಸು ಇದೆಯೆಂದು ಹೇಳಿದ್ದಾರೆ. ಇನ್ಸೂರೆನ್ಸ್ ಹಣ ಬಡ ಕುಟುಂಬಕ್ಕೆ ಸಿಗಲಿದೆ. ಆದರೆ ಕಳೆದ ಒಂದೂವರೆ ವರ್ಷದಿಂದ ಇನ್ಸೂರೆನ್ಸ್ ಹಣಕ್ಕಾಗಿ ಮುನಿಯಮ್ಮ ಬಮೂಲ್ ನಿರ್ದೇಶಕರ ಕಚೇರಿಗೆ ಅಲೆಯುತ್ತಿದ್ದರೂ ಬಡ ಮಹಿಳೆಯ ಕಷ್ಟಕ್ಕೆ ಕನಿಕರ ಸಹ ತೋರಿಸದೆ ದಿನಗಳನ್ನ ದೂಡುತ್ತಿದ್ದಾರೆ.
ಎರಡು ವರ್ಷದಲ್ಲಿ ಲಕ್ಷಾಂತರ ಬೆಲೆಯ 5 ಹಸುಗಳನ್ನ ಕಳೆದು ಕೊಂಡಿರುವ ಮುನಿಯಮ್ಮ, ಬರುವ ಇನ್ಸೂರೆನ್ಸ್ ಹಣದಲ್ಲಿ ಮತ್ತೊಂದು ಹಸುವನ್ನ ಖರೀದಿ ಜೀವನ ನಡೆಸುವ ಆಸೆಯಲ್ಲಿದ್ದಾರೆ, ಆದರೆ ಯಾವ ಅಧಿಕಾರಿಯೂ ಆಕೆಯ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿಲ್ಲ.