ಬೆಂಗಳೂರು: ಹೈಕಮಾಂಡ್ ಸೂಚಿಸಿದ ತಕ್ಷಣವೇ ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಹೈಕಮಾಂಡ್ ಸೂಚಿಸಿದ ತಕ್ಷಣವೇ ರಾಜೀನಾಮೆ ನೀಡುತ್ತೇನೆ ಎಂದರು.
‘ಎಲ್ಲಿಯವರೆಗೂ ದೆಹಲಿ ಹೈಕಮಾಂಡ್ಗೆ ವಿಶ್ವಾಸವಿರುತ್ತೋ ಅಲ್ಲಿವರೆಗೆ ಮುಂದುವರಿಯುತ್ತೇನೆ. ಯಾವ ದಿವಸ ಬೇಡ ಯಡಿಯೂರಪ್ಪನವರೇ ಎಂದು ಹೇಳ್ತಾರೋ ಆ ದಿವಸ ರಾಜೀನಾಮೆ ಕೊಟ್ಟು ರಾಜ್ಯದ ಅಭಿವೃದ್ಧಿಗಾಗಿ ಹಗಲು ರಾತ್ರಿ ಕೆಲಸ ಮಾಡುತ್ತೇನೆ’ ಎಂದರು.
‘ಯಾವುದೇ ಗೊಂದಲದಲ್ಲಿ ನಾನಿಲ್ಲ. ನನಗೊಂದು ಅವಕಾಶ ಮಾಡಿಕೊಟ್ಟಿದ್ದಾರೆ. ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ. ಹೈಕಮಾಂಡ್ ವಿಶ್ವಾಸ ಇಟ್ಟುಕೊಳ್ಳುವವರೆಗೆ ಸಿಎಂ ಆಗಿ ಮುಂದುವರಿಯುತ್ತೇನೆ’ ಎಂದರು.