ಬೆಂಗಳೂರು: ಐದರ ಮಗ್ಗಿಯನ್ನು ಶಾಲೆಯಲ್ಲೇ ಕಲಿಸಲಾಗುತ್ತದೆ. ಆದರೆ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರಿಗೆ ಐದರ ಪಾಠವನ್ನು ಕಲಿಸಿದ್ದು ಆಟೋ ಡ್ರೈವರ್. ಅದೂ ಕೂಡಾ ಬೆಂಗಳೂರಿನ ಲಾಲ್ಭಾಗ್ ಬಳಿ.
ಇಂದು ಮುಂಜಾನೆ ಆಟೋ ಚಾಲಕನೊಬ್ಬ ಲಾಲ್ಬಾಗ್ ಬಳಿ ಬೀದಿ ಬದಿ ತರಕಾರಿ ವ್ಯಾಪಾರಿಗಳಿಗೆ ಐದು ಮಾಸ್ಕ್ ಹಂಚಿದ್ದಾನೆ. ಈತನ ಈ ಐದರ ವಿಚಾರವನ್ನು ಕಂಡ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ್ ರಾವ್ ಪುಳಕಿತರಾದರು.
ಯಾಕಿದು? ಏನಿದು ಐದು ಮಾಸ್ಕಿನ ಕಥೆ ಎಂದು ಭಾಸ್ಕರ್ ರಾವ್ ಆ ಬಡಪಾಯಿ ಆಟೋ ಚಾಲಕನನ್ನು ಪ್ರಶ್ನಿಸಿದರು. ‘ಈ ವ್ಯಾಪಾರಿಗಳು ತಾವಾಗಿಯೇ ಮಾಸ್ಕ್ ಖರೀದಿಸೋಲ್ಲ. ಹಾಗಾಗಿ ತನ್ನದೊಂದು ಈ ರೀತಿ ಅಭಿಮಾನದ ಅಭಿಯಾನ ಎಂದು ಆಟೋ ಡ್ರೈವರ್ ಹೇಳಿಕೊಂಡಿದ್ದಾನೆ.
ಈತನ ಸಮಾಜಮುಖಿ ನಡೆ ಭಾಸ್ಕರ್ ರಾವ್ ಅವರಿಗೂ ಐದರ ಮಗ್ಗಿಯ ಪಾಠ ಹೇಳಿದಂತಿತ್ತಂತೆ. ಆತನಿಂದ ಪ್ರೇರೇಪಿತರಾದ ಭಾಸ್ಕರ್ ರಾವ್, ತಾವೂ ಐದು ಮಾಸ್ಕ್ ಹಂಚಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಎಲ್ಲರೂ ಹೀಗೆ ಐದೈದು ಮಾಸ್ಕ್ ಹಂಚೋಣ ಎಂದವರು ಹೇಳಿಕೊಂಡಿದ್ದಾರೆ.
ಇದೇ ಸಂದೇಶವನ್ನು ಅವರು ಟ್ವೀಟ್ ಮಾಡಿ ನಾಡಿನ ಗಮನ ಸೆಳೆದಿದ್ದಾರೆ.
https://mobile.twitter.com/deepolice12/status/1383693628619378692