ಬೆಂಗಳೂರು: ಕಳೆದ ಹಲವಾರು ದಶಕಗಳಲ್ಲಿ ಬಿಜೆಪಿಯ ಭದ್ರಕೋಟೆ ಎನಿಸಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಇದೀಗ ಚಿತ್ರಣ ಬದಲಾಗಿದೆ. ಕಾಂಗ್ರೆಸ್ ಹುರಿಯಾಳಾಗಿ ಸ್ಪರ್ಧೆಗಿಳಿದಿರುವ ಸೌಮ್ಯ ರೆಡ್ಡಿ ಅವರು ಮೇನಿಯಾ ಸೃಷ್ಟಿಸಿದ್ದಾರೆ. ಪ್ರಚಾರದುದ್ದಕ್ಕೂ ವ್ಯಕ್ತವಾಗುತ್ತಿರುವ ಜನರ ಒಲವು ಸೌಮ್ಯ ಮೊಗದಲ್ಲಿ ಮಂದಹಾಸ ಮೂಡಿಸುವಂತಿದೆ.
ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಅವರ ನಂತರ ತೇಜಸ್ವಿ ಸೂರ್ಯ ಅವರು ಸಂಸದರಾಗಿ ಆಯ್ಕೆಯಾಗಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಗೆ ಹಾದಿ ಸುಲಭವಿಲ್ಲ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಅವರು ಕ್ಷೇತ್ರದುದ್ದಕ್ಕೂ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಪ್ರಚಾರದ ಅಖಾಡದಲ್ಲಿ ಜನಸಾಗರವೇ ಜಮಾಯಿಸುತ್ತಿದೆ.
ಜಯನಗರ, ಬಸವನಗುಡಿ, ಬೊಮ್ಮನಹಳ್ಳಿ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೂ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿರುವ ತೇಜಸ್ವಿ ಸೂರ್ಯ ಅವರಿಗೆ ಪ್ರಚಾರ ವೇಳೆ ಹಿನ್ನಡೆಯಾಗುತ್ತಿದೆ ಎಂದು ಸ್ವತಃ ಬಿಜೆಪಿ ನಾಯಕರೇ ಅಳಲು ತೋಡಿಕೊಳ್ಳುತ್ತಿದ್ದಾರೆ. ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಬೆಂಗಳೂರಿನ ಈ ಕ್ಷೇತ್ರದ ಮೇಲಿರುವ ಹಿಡಿತ, ಹಾಗೂ ಬಿಜೆಪಿ ನಾಯಕರ ಮುನಿಸಿನ ಕಾರಣದಿಂದಾಗಿ ಸೌಮ್ಯಾ ಪರವಾಗಿ ಅಲೆ ಎದ್ದಿದೆ ಎಂಬುದು ಕಾಂಗ್ರೆಸ್ ನಾಯಕರ ವಿಶ್ಲೇಷಣೆ.
‘ಕೈ’ ರೋಡ್ ಶೋಗಳಲ್ಲಿ ಜನಸಾಗರ:
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಾದ್ಯಂತ ತಂದೆ, ಸಚಿವ ರಾಮಲಿಂಗ ರೆಡ್ಡಿ ಜೊತೆ ನಿರಂತರ ಸವಾರಿ ಕೈಗೊಂಡಿರುವ ‘ಕೈ’ ಹುರಿಯಾಳು ಸೌಮ್ಯ ರೆಡ್ಡಿ ಅವರ ಪ್ರಚಾರ ವೈಖರಿಗೆ ಜನರು ‘ಜೈ’ ಎನ್ನುತ್ತಿದ್ದಾರೆ. ಪ್ರಚಾರದುದ್ದಕ್ಕೂ ಜನಸಾಗರವೇ ಸೌಮ್ಯಾ ರೆಡ್ಡಿಯವರಿಗೆ ಸಾಥ್ ನೀಡುತ್ತಿರುವ ದೃಶ್ಯಗಳು ಕುತೂಹಲಕಾರಿ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿವೆ.
ಶುಕ್ರವಾರ ಕೂಡಾ ಬೆಂಗಳೂರಿನ ವಿಜಯನಗರ ಕ್ಷೇತ್ರದಲ್ಲಿನಡೆಸಿದ ರೋಡ ಶೋ ಕಾಂಗ್ರೆಸ್ ಪಕ್ಷದ ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾಯಿತು. ಜನಸ್ತೋಮದ ನಡುವೆ ವೀರಗಾಸೆ ಹಾಗೂ ಡೊಳ್ಳುಕುಣಿತ ಕಲಾವಿದರ ನೃತ್ಯವು ಪ್ರಚಾರಕ್ಕೆ ರಂಗು ತಂದಿತು. ಮಾಜಿ ಸಚಿವ ಕೃಷ್ಣಪ್ಪ ಅವರೂ ಸೌಮ್ಯ ರೆಡ್ಡಿಯವರ ಪ್ರಚಾರಕ್ಕೆ ಸಾತ್ ನೀಡಿದರು. ಬೃಹತ್ ರೋಡ್ ಶೋನಲ್ಲಿ ಭಾಗಿಯಾದ ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ವರನ್ನು ಗೆಲ್ಲಿಸಿದರೆ ಇಡೀ ಕ್ಷೇತ್ರ ಅಭಿವೃದ್ಧಿಯಾಗಲಿದೆ ಎಂದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವಿಜಯನಗರದಾದ್ಯಂತ ಇಂದು ಚುನಾವಣಾ ಪ್ರಚಾರ ಭಾಗವಾಗಿ ಬೃಹತ್ ರೋಡ್ ಶೋ ನಡೆಸಿದೆ.
ಈ ಸಂದರ್ಭ ಸರಳ, ಸಜ್ಜನ ರಾಜಕಾರಿಣಿ, ವಿಜಯನಗರದ ಶಾಸಕರಾದ ಶ್ರೀ @mkrishnappa_MLA ನವರು ಜೊತೆಗಿದ್ದು ನನ್ನನ್ನು ಬೆಂಬಲಿಸುವಂತೆ ಪರ ಕ್ಷೇತ್ರದ ಜನತೆಗೆ ವಿನಂತಿಸಿದರು. ವಿಜಯನಗರ ಕ್ಷೇತ್ರದ ಅಭಿವೃದ್ಧಿಗೆ ಕೃಷ್ಣಪ್ಪ… pic.twitter.com/fJ1Il0F17f