ಮಂಗಳೂರು: ಗೋವಾದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪರಮ ಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಮೇ 14, 2023ರಂದು ಸಂಜೆ 5.30 ಗಂಟೆಗೆ ತಮ್ಮ ಮೂಲ್ಕಿ ಮೊಕ್ಕಂನಿಂದ ಮಂಗಳೂರಿಗೆ ಆಗಮಿಸಲಿದ್ದಾರೆ.
ಪುರ ಪ್ರವೇಶ ಮೆರವಣಿಗೆಯು ವಿ.ಟಿ.ರಸ್ತೆಯ ಚೇತನ ಶಾಲೆಯಿಂದ ಸಂಜೆ 6.00 ಗಂಟೆಗೆ ಆರಂಭವಾಗಿ 7.30ಕ್ಕೆ ಗೋಕರ್ಣ ಮಠ, ಕಾರ್ಸ್ಟ್ರೀಟ್ ತಲುಪಲಿದೆ. ಸಂಸ್ಥಾನದ ಮಠಾಧಿಪತಿಯಾದ ನಂತರ ಸ್ವಾಮೀಜಿಯವರು ಪ್ರಥಮ ಬಾರಿಗೆ ಮಂಗಳೂರಿನ ಕಾರ್ಸ್ಟ್ರೀಟ್ನಲ್ಲಿರುವ ತಮ್ಮ ಸ್ವಮಠಕ್ಕೆ ಭೇಟಿ ನೀಡುತ್ತಿದ್ದಾರೆ. 2023 ರ ಮೇ 14 ರಿಂದ 21 ರವರೆಗೆ ಸ್ವಾಮೀಜಿಯವರ ಮೊಕ್ಕಾಂನಲ್ಲಿ ಹಲವಾರು ಧಾರ್ಮಿಕ ಆಚರಣೆಗಳು, ಹವನಗಳು, ಮುದ್ರಾಧಾರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.





























































