📝ಎಸ್ ನಾವೂರ್
ಸಂಘ ಸಂಸ್ಥೆ, ಸಂಘಟನೆ ಅನ್ನೋದು ಕೇವಲ ಒಂದು ಪದವಲ್ಲ, ಅದೊಂದು ಶಕ್ತಿ. ಅದು ಸಕಾರತ್ಮಕವಾಗಿಯೂ ಇರಬಹುದು ನಕಾರಾತ್ಮಕವಾಗಿಯೂ ಇರಬಹುದು. ಅದು ಬೇರೆ ವಿಚಾರ. ಆದರೆ ಅಯ್ಕೆ ಹಾಗೂ ಯಾವುದನ್ನೂ ಬೆಳೆಸಬೇಕು, ಯಾವುದನ್ನು ಬೆಳೆಸಬಾರದು, ಸೇರಬೇಕು-ಸೇರಬಾರದು, ಬೆಳೆಸಿದರೆ ಪರಿಣಾಮಗಳೇನು ಎಂಬುದು ಪ್ರಜ್ಞಾವಂತ ಸಮಾಜದ ಮೇಲೆ ನಿಂತಿದೆ.
ಭಾರತವನ್ನು ಸೇರಿಸಿ ವಿಶ್ವದ ವಿವಿಧ ದೇಶದ ಸ್ವತಂತ್ರ ಹೋರಾಟಗಳ ಹಿಂದೆ ಸಂಘಟನೆಗಳ ಪಾತ್ರ ಬಹುದೊಡ್ಡದಿದೆ. ಇಂದು ಸಮಾಜದಲ್ಲಿ ದೇಶದಲ್ಲಿ ಅದೆಷ್ಟೋ ಸಂಘಟನೆಗಳನ್ನು ಕಾಣಬಹುದು. ಅವುಗಳು, ಅವುಗಳ ಮೂಲ ಉದ್ದೇಶ ಸಾಧಿಸಲು, ದುಡಿಯುತ್ತಿದೆ-ದುಡಿಯುತ್ತವೆ ಕೂಡ.
ಸಂಘ ಸಂಘಟನೆ ಸಂಸ್ಥೆಯ ಪ್ರಭಾವಗಳ ವಿಶ್ಲೇಷಣೆ ಮಾಡುತ್ತಾ ಹೋದರೆ ಜಗತ್ತಿನ ವಿವಿಧ ದೇಶಗಳ ಸ್ವತಂತ್ರ ಹೋರಾಟಗಳ ಹಿಂದೆ ಸಂಘ ಸಂಸ್ಥೆ ಸಂಘಟನೆಗಳ ಪ್ರಭಾವ ಇದೆ. ವಿಶೇಷವಾಗಿ ಭಾರತದ ಸ್ವತಂತ್ರದ ಹೋರಾಟವನ್ನು ಗಮನಿಸಿದಾಗ ಇಲ್ಲಿ ಸಂಘ ಸಂಸ್ಥೆ ಸಂಘಟನೆಗಳ ಬಹುದೊಡ್ಡ ಪಾತ್ರವನ್ನು ನೋಡಬಹುದು.
ಹಿಂದೆ ಸ್ವತಂತ್ರ ಹೋರಾಟಕ್ಕೆ ದುಡಿದ ಸಂಘಟನೆಗಳು ಮುಂದೆ ರಾಜಕೀಯ ಪಕ್ಷಗಳಾಗಿ ರೂಪು ಪಡೆದದ್ದು ಇಂದು ಮತ್ತೊಂದು ಅಧ್ಯಾಯ, ಅದು ಇರಲಿ. ಮಾನವ ಸಂಘ ಜೀವಿ,ಸಮಾಜಿಕ ನೆಲೆಗಟ್ಟಿನಲ್ಲಿ ನೋಡಿದಾಗ ಸಂಘ, ಸಂಘಟನೆ ರೂಪುಗೊಳ್ಳಲು ಮಾನವ ಸಂಪನ್ಮೂಲ ಬಹು ಅಗತ್ಯ. ಇಲ್ಲಿ ನಾವು ಗಮನಿಸಬೇಕಾದ ವಿಚಾರ ಮಾನವ ದೇಹ ಹಾಗೂ ಮಾನವ ಸಂಪನ್ಮೂಲಗಳ ನಡುವಿನ ವ್ಯತ್ಯಾಸ, ಮಾನವ ದೇಹವನ್ನು ಮಾನವ ಸಂಪನ್ಮೂಲವಾಗಿ ರೂಪಿಸುವುದು. ದೇಶದ ಮಾನವ ಸಂಪನ್ಮೂಲಗಳ ಕೌಶಲ್ಯದ ಬೆಳವಣಿಗೆ, ತರಬೇತಿ, ಸಮರ್ಪಕವಾದ ಬಳಕೆ, ಸಮಾಜ ಹಾಗೂ ರಾಷ್ಟ್ರದ ಹಿತ ದೃಷ್ಟಿಗೆ ಪೂರಕವಾಗುವಂತೆ, ಪ್ರೇರಣೆ ಹಾಗೂ ನಿಗಾ ವಹಿಸುವುದು,
ಮಾನವ ಸಂಪನ್ಮೂಲ ಒಂದು ದೇಶದ ಅಭಿವೃದ್ಧಿಯಲ್ಲಿ ಬಹುದೊಡ್ಡ ಪಾತ್ರವನ್ನು ನಿರ್ವಹಣೆ ಮಾಡುತ್ತಿದೆ. ಹಾಗೆಯೇ ಸಂಘ, ಸಂಘಟನೆಯಲ್ಲಿ ಮಾನವ ಸಂಪನ್ಮೂಲ ಬಹುದೊಡ್ಡ ಪಾತ್ರವನ್ನು ನಿರ್ವಹಿಸುವ ಜೊತೆಗೆ ಸಂಘ-ಸಂಘಟನೆ ಅಳಿವು-ಉಳಿವಿನ ಭವಿಷ್ಯಗಳು ಕೂಡ ಸಂಘ ಸಂಘಟನೆಯಲ್ಲಿ ಮಾನವ ಸಂಪನ್ಮೂಲದ ಮೇಲೆ ನಿಂತಿದೆ.
ಸಂಘ ಸಂಘಟನೆಗಳು ಸಂಘ ಸಂಘಟನೆಯೊಳಗಿನ ಸದಸ್ಯರ ಸಂಘ ಸಂಘಟನೆಯ ಪ್ರಮುಖರ ವ್ಯಕ್ತಿತ್ವ, ವ್ಯವಹಾರಗಳು, ವೈಯಕ್ತಿಕ ವರ್ಚಸ್ಸುಗಳು, ಕೂಡ ಸಂಘ ಸಂಘಟನೆಯ ಭವಿಷ್ಯ, ಅಭಿವೃದ್ಧಿ,ಸಂಘ ಹಾಗೂ ಸಂಘಟನೆಯ ಮೇಲೆ ಇರುವ ನಂಬಿಕೆ ವಿಶ್ವಾಸಗಳನ್ನು ನಿರ್ಧರಿಸುತ್ತದೆ. ಸಮಾಜದಲ್ಲಿರುವ ವಿವಿಧ ಸಂಘ ಸಂಘಟನೆಗಳಿಗೆ ತನ್ನದೇ ಆದ ವಿವಿಧ ನಾಮಪದಗಳಿವೆ.ಅದು ವಿವಿಧ ಕ್ಷೇತ್ರದಲ್ಲಿ ಸಾಧಕರು ಎನಿಸಿಕೊಂಡ ವ್ಯಕ್ತಿಗಳ ನಾಮಪದ ಇರಬಹುದು ದೇವರ ದೈವದ ನಾಮಪದ ಇರಬಹುದು ಅಥವಾ ಒಂದು ಸ್ಥಳದ ನಾಮಪದ ಇರುಬಹುದು. ಅ ನಾಮಪದದಿಂದಲೇ ಸಂಘ ಸಂಘಟನೆಯ ವರ್ಚಸ್ಸು, ಪ್ರಚಾರ, ಹೆಚ್ಚಿರಬಹುದು. ಕಾರಣ ಸಂಘ ಸಂಘಟನೆಗೆ ಇಟ್ಟಿರುವ ನಾಮಪದಗಳ ತೂಕಗಳು ಕೂಡ ಸಂಘ ಸಂಘಟನೆಯ ತೂಕವನ್ನು ಹೆಚ್ಚಿಸಿರಬಹುದು.
ಇಲ್ಲಿ ಗಮನಿಸಬೇಕಾದ ವಿಷಯ ಪ್ರತಿಯೊಂದು ನಾಮಪದಗಳಿಗೆ ತನ್ನದೇ ಆದ ವರ್ಚಸ್ಸುಗಳಿವೆ, ಘನತೆಗಳಿವೆ, ಹೆಸರು ಇಟ್ಟ ನಾಮ ಪದಗಳಿಗೆ ಚ್ಯುತಿ ಬರದ ಹಾಗೆ ವ್ಯವಹರಿಸುವುದು ಕೂಡ ಸಂಘ ಸಂಘಟನೆಯ ಜವಾಬ್ದಾರಿಯ ಆಗಿರುತ್ತದೆ. ಎಂಬುದು ಚಿಂತನೆಯ ವಿಚಾರಧಾರೆಗಳು.
ಸಂಘ ಸಂಘಟನೆ ಅನ್ನೋದು ಒಂದು ಗುಂಪು.
ಒಬ್ಬ ಒಬ್ಬರು ಸದಸ್ಯರು ಸೇರಿ ಒಂದು ಸಂಘ ಸಂಘಟನೆ ನಿರ್ಮಾಣವಾಗುವುದು. ನಂಬಿಕೆ ವಿಶ್ವಾಸ ಹೊಂದಾಣಿಕೆಗಳು ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಉದಾ: ಸಂಘ ಸಂಸ್ಥೆಯಲ್ಲಿ ಬರುವ ಟ್ರಸ್ಟ್ ಎಂಬ ಸಂಸ್ಥೆ, ಟ್ರಸ್ಟ್ ಅಂದರೆ ಒಂದು ಅರ್ಥದಲ್ಲಿ ನಂಬಿಕೆ. ಟ್ರಸ್ಟ್ ನ ಮುಖ್ಯ ಪದಾಧಿಕಾರಿಗಳಿಗೆ ಟ್ರಸ್ಟಿ ಎಂಬ ಪದ ಪ್ರಯೋಗ. ಟ್ರಸ್ಟಿ ಅಂದರೆ ನಂಬಿಕಸ್ತ ಎಂಬ ಅರ್ಥವನ್ನು ನೀಡುವುದು ಎಂಬುದನ್ನು ಬಹಳ ಅಳವಾಗಿ ಗಮನಿಸುವಂತದ್ದು. ಸಂಘ ಸಂಘಟನೆ ಹಲವು ಮಂದಿಗಳ ಒಗ್ಗಟ್ಟು, ಈ ಒಗ್ಗಟ್ಟುಗಳು ಸಂಘ ಸಂಘಟನೆಯ ಕಾರ್ಯಚಟುವಟಿಕೆಗಳಲ್ಲಿ ಹೊರ ಹೊಮ್ಮಿದಾಗ ಸಂಘ ಸಂಘಟನೆಯು ನಾವು ನಮ್ಮದೆಂಬ ಗಟ್ಟಿ ಭಾಂಧ್ಯವ್ಯಗಳು ಬೆಳೆಯುತ್ತದೆ. ತಮ್ಮ ತಮ್ಮ ವೈಯಕ್ತಿಕ ಶ್ರಮಗಳು ಕೂಡ ಜೊತೆಯಾಗಿ ಸಾಗುತ್ತಿರುವುದರಿಂದ ಭವಿಷ್ಯದಲ್ಲಿ ಸಂಘ ಸಂಘಟನೆ ಯೋಜನೆ ಯೋಚನೆಗೆ ಪೂರಕವಾಗಿ ಸೂಕ್ಷ್ಮವಾಗಿ ಗಮನಿಸುತ್ತಿರುವ ಸಮಾಜವು ಒಗ್ಗಟ್ಟು ,ಸಮಾಜಮುಖಿ ಕಾರ್ಯದ ಆಧಾರದಲ್ಲಿ ಸಕಾರಾತ್ಮಕ ಸ್ಪಂದನೆಯನ್ನು ನೀಡಲು ಸಮಾಜದ ಮನಸ್ಸು ಹತ್ತಿರ.
ವೈಯಕ್ತಿಕ ಪ್ರಚಾರ,ಕೇವಲ ವೈಯಕ್ತಿಕ ವರ್ಚಸ್ಸಿನ ಬಯಕೆ,ವೈಯಕ್ತಿಕ ಹಿತಾಸಕ್ತಿ, ಇವುಗಳು ಪ್ರತ್ಯಕ್ಷ ಪರೋಕ್ಷವಾಗಿ ಸಂಘ ಸಂಘಟನೆಯ ಅಭಿವೃದ್ಧಿ, ವರ್ಚಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ಕೊನೆಯ ಮಾತು:
ಅಂದು ಊರಿನಲ್ಲಿ ಒಂದು ಸಂಘ ಸಂಘಟನೆಗಳು ಇದ್ದರೆ ಸಾಕು ಅದು ಅ ಊರಿಗೆ ಒಂದು ಊರಿಗೆ ಬಹುದೊಡ್ಡ ಬಲ ಇದ್ದ ಹಾಗೆ. ಇಂದು ಜನಸಂಖ್ಯೆಯೂ ಬೆಳೆದಿದೆ ಸಂಘ ಸಂಘಟನೆ ಮಾಡಬೇಕು ಸಮಾಜಕ್ಕೆ, ದೇಶಕ್ಕೆ, ಏನಾದರೂ ಸಹಾಯ ಮಾಡಬೇಕು, ಕೆಲವು ಕಡೆ, ಕೆಲವು ಸಂಘ ಸಂಘಟನೆಯ ಪ್ರೇರಣೆಗಳು, ಕೆಲವು ಕಡೆ ಒಟ್ಟಾಗಿದ್ದ ಸಂಘ ಸಂಘಟನೆ ಒಡೆದು ಮತ್ತೊಂದು ಸಂಘ ಸಂಘಟನೆಯ ಉದಯ, ಹೀಗೆ ವಿವಿಧ ಕಾರಣಗಳೊಂದಿಗೆ ಸಮಾಜದಲ್ಲಿ ಬೇರೆ ಬೇರೆ ಸಂಘ ಸಂಘಟನೆಗಳು ಬೆಳೆಯುತ್ತಿರುತ್ತವೆ.
ಸಮಾಜಿಕ ಜಾಲತಾಣದ ಪ್ರಭಾವ ಹೆಚ್ಚಿದಂತೆ ಜನಗಳು ಪಕ್ಕ ಸಂಪರ್ಕಕ್ಕೆ ಸಿಗುವ ಕಾರಣ ಒಂದು ತಂಡ ರಚನೆಯಾಯಿತು, ಹೆಸರು ಇಟ್ಟು ಆಯಿತು. ಇವುಗಳು ಸಂಪರ್ಕಕ್ಕಾಗಿ ಕಾರ್ಯಚಟುವಟಿಕೆಗೆ ಸಂಘನಾಟತ್ಮಾಕವಾಗಿ ಸಮಾಜವನ್ನು ಸಂಘಟಿಸಲು ಬಹಳ ಒಳ್ಳೆಯ ಬೆಳವಣಿಗೆ. ಆದರೆ ಯಾವುದೇ ಸಂಘ ಸಂಘಟನೆಗಳು ಸ್ಥಂಸೆಗಳು ಕೇವಲ ವೈಯಕ್ತಿಕ ಸ್ವಾರ್ಥ ಅಥವಾ ಸಂಘ-ಸಂಘಟನೆ ಸಂಸ್ಥೆಗಳು ಕೇವಲ ಸಮಾಜದ ತೋರ್ಪಡಿಕೆ, ವ್ಯಕ್ತಿ ಪೂಜೆಗೆ ಸೀಮಿತಗೊಂಡರೆ ಸಂಘ ಸಂಘಟನೆ ಸಂಸ್ಥೆ ಒಂದು ಕ್ಷಣಕ್ಕೆ ಎತ್ತರಕ್ಕೆ ಏರಿದರೂ ಸಂಘ, ಸಂಸ್ಥೆ, ಸಂಘಟನೆಗಳು ತೆಗೆದುಕೊಳ್ಳುವ ನಿರ್ಧಾರಗಳು ನ್ಯಾಯ ಸಮ್ಮತ ಹೊಂದಾಣಿಕೆಯ ಮಹತ್ವದ ಮೇಲೆ ನಿಂತಿರುವುದರಿಂದ ಸಂಘ ಸಂಸ್ಥೆ ಸಂಘಟನೆಯ ಭವಿಷ್ಯ ಅಭಿವೃದ್ಧಿಗಳು ಗೊಂದಲದಲ್ಲಿಯೇ ಇರುವ ಪ್ರಮೇಯಗಳು ಎದುರಾಗುವ ಸಾಧ್ಯತೆ ಹೆಚ್ಚು. ಕೆಲವೊಂದು ಸಂಘ ಸಂಸ್ಥೆ ಸಂಘಟನೆಗಳ ತಪ್ಪುಗಳು ಸೃಷ್ಟಿಸುವ ಸಮಸ್ಯೆಗಳು ಸಮಾಜಮುಖಿಯಾಗಿರುವ ಸಂಘ ಸಂಸ್ಥೆ ಸಂಘಟನೆಗಳ ಮೇಲೆ ಕೂಡ ಪರಿಣಾಮ ಬೀರಬಹುದು. ಇದರಿಂದಾಗಿ ತಪ್ಪು ಹಾಗೂ ಸಮಸ್ಯೆ ಸೃಷ್ಟಿಸಿದ ಸಂಘ ಸಂಘಟನೆಯ ಜೊತೆಗೆ ಸಮಾಜಮುಖಿಯಾಗಿರುವ ಸಂಘಟನೆ ಮೇಲೆ ಕೂಡ ಕೆಟ್ಟ ಪರಿಣಾಮ ಬೀರಬಹುದು ಇದರಿಂದಾಗಿ ಸಮಾಜಕ್ಕೆ ಸಮಾಜಮುಖಿಯಾಗಿರುವ ಸಂಘ ಸಂಸ್ಥೆ ಸಂಘಟನೆ ಅಗತ್ಯತೆಯಿಂದ ಸಮಾಜ ವಂಚಿತವಾಗಬಹುದು, ಇದು ಸಮಾಜಕ್ಕೆ ಬಹುದೊಡ್ಡ ನಷ್ಟವು ಹೌದು ಎಂಬುದು ಒಂದು ಆಯಾಮದ ಚಿಂತನೆಯೊಳಗೆ. ಸಂಘ ಸಂಸ್ಥೆ ಸಂಘಟನೆಗಳ ಬೆಳವಣಿಗೆಗಳು ಒಂದು ರೀತಿಯಲ್ಲಿ ಸಮಾಜದ ಅಭಿವೃದ್ಧಿಯಲ್ಲಿ ತನ್ನದೇ ಆದ ಸಹಕಾರವನ್ನು ಸಮಾಜಕ್ಕೆ ನೀಡಲು ಸಹಕಾರಿ. ಸಂಘ ಸಂಸ್ಥೆ ಸಂಘಟನೆಗಳ ಕಾರ್ಯ ಚಟುವಟಿಕೆಗಳು ಉದ್ದೇಶಗಳು ಸಮಾಜ ರಾಷ್ಟ್ರಕ್ಕೆ ಪೂರಕವಾಗಿದ್ದರೆ ಮಾತ್ರ. ಅದೇ ಸಂಘ ಸಂಸ್ಥೆ ಸಂಘಟನೆಯ ಕಾರ್ಯಚಟುವಟಿಕೆ ಉದ್ದೇಶಗಳು ಸಮಾಜಕ್ಕೆ ದೇಶದ ಹಿತದೃಷ್ಟಿಗೆ ಮಾರಕವಾಗಿದ್ದರೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.ಅ ದೃಷ್ಟಿಯಿಂದ ಸಮಾಜವು ಯಾವುದೇ ಸಂಘ ಸಂಸ್ಥೆ ಸಂಘಟನೆಗಳನ್ನು ಪ್ರೋತ್ಸಾಹಿಸುವ ಮೊದಲು ಅವುಗಳ ನಿಜವಾದ ಮೂಲ ಉದ್ದೇಶಗಳ ಬಗ್ಗೆ ತಿಳಿಯುವುದು ಒಂದು ವೇಳೆ ಸಮಾಜಕ್ಕೆ ರಾಷ್ಟ್ರಕ್ಕೆ ಕಂಟಕವಾಗುತ್ತಿದೆ ಅಂದಾಗ ಅವುಗಳಿಂದ ಅಂತರ ಕಾಯ್ದು ಕೊಂಡು ಅಂಥವರಿಗೆ ಅಂಥವುಗಳಿಗೆ ಯಾವುದೇ ಸಹಕಾರ ನೀಡದೆ ಅವುಗಳು ಬೆಳೆಯದಂತೆ ನೋಡಿಕೊಳ್ಳುವುದು, ಸರಕಾರಗಳು ಪಕ್ಷತೀತಾವಾಗಿ ನೋಡಿ ಕಠೋರವಾದ ಕಾನೂನು ಕಟ್ಟಳೆಗಳಿಗೆ ಒಳಪಡಿಸಿ ಮತ್ತೆ ಹೆಡೆ ಎತ್ತದಂತೆ ನೋಡಿಕೊಳ್ಳುವುದು, ಇಂಥವರ ಮೇಲೆ ಯಾರಾದರೂ ಕಠಿಣ ಕ್ರಮ ಕೈಗೊಂಡರೆ ಅಲ್ಲಿ ಸ್ವಾರ್ಥ ನೋಡದೆ, ರಾಜಕೀಯ ಮಾಡದೆ, ನೈಜತೆ ಒಪ್ಪಿಕೊಂಡು ನಿಲುವು ನಿರ್ಧಾರವನ್ನು ಬೆಂಬಲಿಸುವುದು ಇವುಗಳು ಮುಂದೆ ಸಮಾಜ ದೇಶಕ್ಕೆ ಬರಬಹುದಾದ ಬಹುದೊಡ್ಡ ಅಪತ್ತಿನಿಂದ ಪಾರು ಮಾಡಿದಂತೆ.ಯಾಕೆಂದರೆ ಜನನಿ ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲು.