ಬೆಂಗಳೂರು: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಕೇಂದ್ರ ಕಚೇರಿ ‘ಸೌಹಾರ್ದ ಸಹಕಾರಿ ಸೌಧ’ಕ್ಕೆ ದಿನಾಂಕ 31ಡಿಸೆಂಬರ್ 2022ರಂದು ಮಾನ್ಯ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾರವರು ಭೇಟಿ ನೀಡಿ, ಸೌಹಾರ್ದ ಸಹಕಾರಿ ಕ್ಷೆತ್ರದ ಚಟುವಟಿಕೆ ಗಳನ್ನು ಅಧ್ಯಯನ ಮಾಡಿದರು.
ಸೌಹಾರ್ದ ಸಹಕಾರಿ ಕ್ಷೇತ್ರ ಹುಟ್ಟು, ಬೆಳವಣಿಗೆ ಸಂಯುಕ್ತ ಸೌಹಾರ್ದ ಸಹಕಾರಿ ಕ್ಷೆತ್ರದ ಬೆವಣಿಗೆಯ ವಿವರಗಳನ್ನು ಪಿಪಿಟಿಯ ಮೂಲಕ ಮಾನ್ಯ ಸಚಿವರಿಗೆ ವಿವರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ರಾಷ್ಟದಲ್ಲಿ ಸಹಕಾರ ಚಳುವಳಿಗೆ ಒಂದು ಉತ್ತಮ ದಿಕ್ಸೂಚಿಯನ್ನು ನ್ನು ಸಿದ್ಧಪಡಿಸಲಾಗುತ್ತಿದೇ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಒಂದೇ ಮಾದರಿಯ ಉಪವಿಧಿಗಳು, ಒಂದೇ ಮಾದರಿಯ ಕಾಮನ್ ಸಾಫ್ಟ್ವೇರ್, ಗ್ಯಾಸ್ ಏಜೇನ್ಸಿ ಮೂಲಕ ವಿತರಿಸಲು, ನೀರು ಸರಬರಾಜು ವ್ಯವಸ್ಥೆ ಹೀಗೆ ವಿಸ್ತೃತ ಚಟುವಟಿಕೆಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸಹಕಾರ ಸಚಿವಾಲಯ ಕಾರ್ಯನಿರ್ವಹಿಸುತ್ತಿರುವ ಸಂಯುಕ್ತ ಸಹಕಾರ ಚಳುವಳಿಯ ಅಭಿವೃದ್ಧಿ ನೀಲನಕ್ಷೆಯ ಬಗ್ಗೆ ಚಿಂತನೆ ಮಾಡೋಣ ಎಂದರು.
ಸಹಕಾರ ಕ್ಷೇತ್ರವನ್ನು ಪರಿಶುದ್ಧತೆಯತ್ತ ಸಾಗಿಸೋಣ, ಪ್ರತಿಯೊಂದು ಪಂಚಾಯಿತಿಗೆ ಒಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅವಶ್ಯಕ, ಅದನ್ನು ಕಾರ್ಯಗತ ಮಾಡೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಎಸ್.ಟಿ. ಸೋಮಶೇಖರ್, ಡಾ||ಸಿ.ಎನ್. ಅಶ್ವಥನಾರಾಯಣ, ಅರಗ ಜ್ಞಾನೇಂದ್ರ, ಮುರುಗೇಶ್ ನಿರಾಣಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್, ಸಂಸದರಾದ ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಉಪಸ್ಥಿತರಿದ್ದರು.





















































