ಬೆಂಗಳೂರು: ರಾಜಧಾನಿ ಬೆಂಗಳೂರಿನ ವಿಶೇಷ ಮೇಲ್ಸೇತುವೆ ದೇಶದ ಗಮನಸೆಳೆದಿದೆ. ಭಾರತದಲ್ಲೇ ವಿಶೇಷ ಎಂಬಂತೆ ನಿರ್ಮಾಣಗೊಂಡಿರುವ ಸಿಲಿಕಾನ್ ಸಿಟಿಯ ಮಾರೇನಹಳ್ಳಿಯಿಂದ ಸಿಲ್ಕ್ ಬೋರ್ಡ್ ವರೆಗೂ ನಿರ್ಮಾಣವಾಗಿರುವ 2 ಲೆವರಲ್ ಫ್ಲೈ ಓವರ್, ತೀವ್ರ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಂಡಿದೆ. ಸಂಚಾರ ದಟ್ಟನೆ ತಗ್ಗಿಸಲು ಪ್ರಯತ್ನಗಳು ನಿರಂತರವಾಗಿ ನಡೆದಿದೆ. ಇದೀಗ 2 ಲೆವೆಲ್ ಫ್ಲೈ ಓವರ್ ಪ್ರಾಯೋಗಿಕ ಸಂಚಾರಕ್ಕೆ ಅವಕಾಶ ಕೊಟ್ಟು ಒಂದು ರಸ್ತೆ ಮೆಟ್ರೋ ಕಾರ್ಯಾಚರಣೆಗೆ ಮತ್ತೊಂದು ರಸ್ತೆ ಇತರೆ ವಾಹನಗಳ ಸಂಚಾರಕ್ಕೆ ಅನುವಾಗಲಿದೆ.


ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿರವರ ದೂರದೃಷ್ಟಿಯ ಬದ್ಧತೆಯ ಯೋಜನೆಯಾಗಿ ಬೆಂಗಳೂರು ನಗರದಲ್ಲಿ ಈ ವಿಶೇಷ 2 ಲೆವೆಲ್ ಫ್ಲೈ ಓವರ್ ನಿರ್ಮಾಣಗೊಂಡಿದೆ ಎಂದು ಬಿಬಿಎಂಪಿ ನಿವೃತ್ತ ಮುಖ್ಯ ಇಂಜಿನಿಯರ್ ಕೆ.ಟಿ.ನಾಗರಾಜ್ ಹೇಳಿದ್ದಾರೆ.
ಜುಲೈ 17, ಬುಧವಾರ ಮಧ್ಯಾಹ್ನ ಡಿಸಿಎಂ.ಡಿ.ಕೆ ಶಿವಕುಮಾರ್ ಅವರು ಈ ಡಬ್ಬಲ್ ಡೆಕ್ಕರ್ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಿದ್ದಾರೆ.
ಸಚಿವ ರಾಮಲಿಂಗಾ ರೆಡ್ಡಿ ಅವರು ರಿಂಗ್ ರೋಡ್ ಮತ್ತು ಸಿಲ್ಕ್ ಬೋರ್ಡ್ ಕಡೆ ಪರಿವೀಕ್ಷಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಯಾವ ರೀತಿ ಜನಸಂದಣಿಯನ್ನು ಕಡಿಮೆ ಮಾಡಬೇಕು ಎಂದು ಸಮಾಲೋಚನೆ ನಡೆಸುತ್ತಿದ್ಧಾಗ ಗಮನಕ್ಕೆ ಬಂದ ಯೋಜನೆ 2 ಲೇಯರ್ ಫ್ಲೈ ಓವರ್ ಅದಾಗಲೇ ಕೇಂದ್ರ ಸಚಿವ ಗಡ್ಕರಿ ಅವರು ಪ್ರತಿನಿಧಿಸುವ ನಾಗಪುರ ಕ್ಷೇತ್ರದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದರು. ಇದನ್ನು ಮನಗಂಡ ಸಚಿವರು ಕೂಡಲೇ ಮೆಟ್ರೋ ಎಂಡಿ ಯಾಗಿದ್ದ ಪ್ರದೀಪ್ ಸಿಂಗ್ ಕರೋಲ ಅವರೊಂದಿಗೆ ಮಾತನಾಡಿ, ಒಂದು ಕಡೆ ಮೆಟ್ರೋ ಕಾರ್ಯಾಚರಣೆ ಇನ್ನೊಂದೆಡೆ ವಾಹನಗಳ ಕಾರ್ಯಚರಣೆಗೆ ಅನುವಾಗುವಂತೆ, ಮಲ್ಟಿಲೆವೆಲ್ ಫ್ಲೈ ಓವರ್ ಮಾಡೋಣ, ಇದರಿಂದ land acquisition ಕೂಡ ಕಡಿಮೆ ಆಗುತ್ತದೆ ಅದಕ್ಕೆ ತಗಲುವ ವೆಚ್ಚ ಕೂಡ ಗಣನೀಯವಾಗಿ ಇಳಿಕೆಯಾಗುತ್ತದೆ ಎಂದು ತಿಳಿಸಿದರು. ಕೂಡಲೇ ಕರೋಲ ರವರು ಇನ್ನು ಮೆಟ್ರೋ ಕಾಮಗಾರಿ design ಹಂತದಲ್ಲಿಯೇ ಇರುವುದರಿಂದ ಇದನ್ನು ನಾವು ಮಾಡಬಹುದು ಎಂದು ಸಕಾರಾತ್ಮಕವಾಗಿ ತಿಳಿಸಿದರು. ಕೂಡಲೇ ಮಾನ್ಯ ಸಚಿವರು ನಗರೋತ್ತಾನ ಯೋಜನೆಯಡಿ ರೂ. 300 ಕೋಟಿ ಮೀಸಲಿರಿಸಿ, ಆರ್.ವಿ ರಸ್ತೆ, ಬೊಮ್ಮಸಂದ್ರ ಮಾರ್ಗದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೆ 3.3 ಕಿ.ಮೀ ದೂರದ ಫ್ಲೈ ಓವರ್ ಯೋಜನೆಗೆ ಅನುಮತಿ ಎಂದು ಯೋಜನೆ ಆರಂಭ ಕಾಲದಲ್ಲಿ ಬಿಬಿಎಂಪಿ ಮುಖ್ಯ ಅಭಿಯಂತರರಾಗಿದ್ದ, ಈಗಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರೂ ಆಗಿರುವ ಟಿ.ನಾಗರಾಜ್ ವಿವರಿಸಿದ್ದಾರೆ.
ರಾಮಲಿಂಗಾ ರೆಡ್ಡಿ ಅವರು ಕಡಿಮೆ ವೆಚ್ಚದಲ್ಲಿ ಜನರ ಆಸ್ತಿ ಪಾಸ್ತಿಗಳಿಗೂ ಹೆಚ್ಚು ಹಾನಿಯಾಗದಂತೆ, ಜನದಟ್ಟಣೆ ಕಡಿಮೆಯಾಗುವಂತೆ ಮಾಡುವ ಈ ಯೋಜನೆಯು ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಸುಗಮ ಸಂಚಾರಕ್ಕೆ ಅನುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.