ಬೆಂಗಳೂರು: ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇದರ ಚುನಾವಣೆಯಲ್ಲಿ ಹಿರಿಯ ಪತ್ರಕರ್ತ ಆರ್.ಶ್ರೀಧರ್ ಪುನರಾಯ್ಕೆಯಾಗಿದ್ದಾರೆ.
2024-25ನೇ ಸಾಲಿನ ಚುನಾವಣೆ ಭಾನುವಾರ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಧ್ಯಾನಪೂಣಚ್ಚ, ಶ್ರೀಧರ್ ಆರ್.ಮತ್ತು ಸುಭಾಶ್ ಹೂಗಾರ್ ಸ್ಪರ್ಧಿಸಿದ್ದರು.ಉಪಾಧ್ಯಕ್ಷ ಸ್ಥಾನ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ , ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು 6 ಕಮಿಟಿ ಸದಸ್ಯರುಗಳು ಮತ್ತು ಮಹಿಳಾ ಮೀಸಲು ಸ್ಥಾನಗಳಿಗೆ ಚುನಾವಣೆ ನಡೆಯಿತು. .
ಫಲಿತಾಂಶ ಹೀಗಿದೆ:
-
ಶ್ರೀಧರ್ ಆರ್ ಅವರು 404ಮತಗಳೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾದರು.
-
ವಿ.ಎನ್.ಮೋಹನ್ ಕುಮಾರ್ ಅವರು 417 ಮತಗಳೊಂದಿಗೆ ಉಪಾಧ್ಯಕ್ಷರಾಗಿ ಚುನಾಯಿತರಾದರು.
-
ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ್ ಬೆಳ್ಳಿತಟ್ಟೆ ಆಯ್ಕೆಯಾದರು,
-
ಕಾರ್ಯದರ್ಶಿಯಾಗಿ ಜಿ.ವೈ.ಮಂಜುನಾಥ್, ಜಂಟಿ ಕಾರ್ಯದರ್ಶಿಯಾಗಿ ಧರಣೇಶ್, ಖಜಾಂಚಿಯಾಗಿ ಜಿ.ಗಣೇಶ್ ಆಯ್ಕೆಯಾಗಿದ್ದಾರೆ.
-
ಮಹಿಳಾ ಸ್ಥಾನಕ್ಕೆ ಮಿನಿ ತೇಜಸ್ವಿ ಆಯ್ಕೆಯಾದರೆ, 6 ಕಮಿಟಿ ಸದಸ್ಯರಾಗಿ ಶಿವಣ್ಣ, ಶರಣಬಸಪ್ಪ, ಯಾಸ್ನಿಫ್ ಮುಸ್ತಾಕ್, ಮುತ್ತಾಜ್ ಅಲೀಮ್, ರೋಹಿಣಿ ಅಡಿಗ, ಮಂಜುನಾಥ್ ಆಯ್ಕೆಯಾಗುವ ಮೂಲಕ ಹೊಸ ಸಮಿತಿ ಅಸ್ತಿತ್ವಕ್ಕೆ ಬಂದಿದೆ.