ಬೆಂಗಳೂರು: ಚಿಯರ್ ಫಾರ್ ಇಂಡಿಯಾ ಧ್ಯೇಯವಾಕ್ಯದಡಿ ಸೈಕಲ್ ರ್ಯಾಲಿಗೆ ವಿಧಾನಸೌಧ ಮುಂಭಾಗ ಅಂಬೇಡ್ಕರ್ ಪ್ರತಿಮೆ ಬಳಿ ಭಾನುವಾರ ಮುಂಜಾನೆ ಚಾಲನೆ ದೊರೆಯಿತು. ಒಲಿಂಪಿಕ್ ಕ್ರೀಡಾಪಟುಗಳಿಗೆ ವಿಧಾನಸೌಧದಿಂದಲೇ ಆಲ್ ದಿ ಬೆಸ್ಟ್ ಹೇಳಿದ ಸಿಎಂ ಹೇಳಿದರು. ಸೈಕಲ್ ರ್ಯಾಲಿಯಲ್ಲಿ 300ಕ್ಕೂ ಯುವಕ ಯುವತಿಯರು ಭಾಗಿಯಾಗಿದ್ದರು.
ಯುವಕರು ಕರ್ನಾಟಕದ ಭವಿಷ್ಯ, ಇಂದು ದೇಶದಲ್ಲಿ 56 ಸಾವಿರ ಜನರು ಸೈಕಲಿಂಗ್ ಮಾಡುತ್ತಿದ್ದಾರೆ. ಯುವಕರಲ್ಲಿ ಎನರ್ಜಿ ಇರುತ್ತೆ, ಆದರೆ ಡಿಸಿಪ್ಲಿನ್ ಬೇಕು, ಹೀಗಾಗಿ ಸೈಕಲ್ ರ್ಯಾಲಿ ಆಯೋಜನೆ ಮಾಡಿರುವುದು ಒಳ್ಳೆಯ ಅವಕಾಶ ಎಂದು ಸಿ.ಎಂ ಬಸವರಾಜ್ ಬೊಮ್ಮಾಯಿ ಕಿವಿಮಾತು ಹೇಳಿದರು.
ಬಿಜೆಪಿ ಯುವ ಮೋರ್ಚಾದಿಂದ ಕಾರ್ಯಕ್ರಮ ಆಯೋಜನೆಗೊಂಡಿತ್ತು. ರ್ಯಾಲಿಗೆ ಸಿ.ಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ವಿಧಾನಸೌಧ ಮುಂಭಾಗದ ಅಂಬೇಡ್ಕರ್ ವೀದಿಯಿಂದ ರ್ಯಾಲಿಗೆ ಪ್ರಾರಂಭವಾಯಿತು.
ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಮಾಜಿ ಸಚಿವ ಡಿ.ವಿ ಸದಾನಂದ ಗೌಡ ಹಾಗೂ ಮಾಜಿ ಸಚಿವ ಸುಧಾಕರ್ ಭಾಗಿಯಾಗಿದ್ದರು. ಸಂಸದ ಪಿ.ಸಿ ಮೋಹನ್ ಕೂಡ ಭಾಗವಹಿಸಿದ್ದರು. ಸಿಎಂ ಆದ ಬಳಿಕ ಮೊದಲ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಾವಹಿಸಿದ್ದರು.
ಒಲಂಪಿಕ್ಸ್ ನಲ್ಲಿ ಭಾಗವಹಿಸಿದ ದೇಶದ ಕ್ರೀಡಾಪಟುಗಳಿಗೆ ಸಪೋರ್ಟ್ ಮಾಡಲು ಸೈಕಲ್ ರ್ಯಾಲಿ ಆಯೋಜನೆ ಮಾಡಲಾಗಿತ್ತು. ಚಿಯರ್ ಫಾರ್ ಇಂಡಿಯಾ ಧ್ಯೇಯವಾಕ್ಯದಡಿ ಸೈಕಲ್ ರ್ಯಾಲಿಯಲ್ಲಿ 300ಕ್ಕೂ ಹೆಚ್ಚು ಯುವಕರು ಭಾಗಿಯಾಗಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಮನುಷ್ಯ ಕೆಲವುಗಳನ್ನು ಬಹಳ ಸುಲಭವಾಗಿ ರೂಡಿಸಿಕೊಳ್ಳುತ್ತಾನೆ, ಇದರಲ್ಲಿ ಸೈಕ್ಲಿಂಗ್ ಕೂಡ ಒಂದು. ಸೈಕಲ್ ನಿಂದ ನಮ್ಮ ದೇಹ ಕಂಫರ್ಟ್ ಆಗಿ ಇರುತ್ತದೆ. ಪ್ರತಿಯೊಬ್ಬರಿಗೂ ಸೈಕಲ್ ಬಗೆಗೆ ಒಂದು ರೀತಿಯ ಅಟಾಚ್ ಮೆಂಟ್ ಇರುತ್ತದೆ ಎಂದರು.
ಈ ಹಿನ್ನಲೆಯಲ್ಲಿ ಯುವಕರಲ್ಲಿ ಸ್ಫೂರ್ತಿ ತುಂಬುವ ಕೆಲಸ ಪ್ರಧಾನಿ ಮೋದಿ ಕೂಡ ಮಾಡುತ್ತಿದ್ದಾರೆ. ಒಲಂಪಿಕ್ ನಲ್ಲಿ ಭಾಗವಹಿಸಿದವರಿಗೆ ಸ್ಫೋರ್ತಿ ಸಿಗಲಿ ಎಂದು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.