ಮಂಗಳೂರು: ಕರಾವಳಿಯಲ್ಲೀಗ ಜನಪದ ಕ್ರೀಡೋತ್ಸವ ‘ಕಂಬಳ’ ಸುಗ್ಗಿ. ದೇಶದ ಗಮನ ಸೆಳೆದಿರುವ ಗ್ರಾಮೀಣ ಸೊಗಡಿನ ಸ್ಪರ್ದೆಯಂತಿರುವ ಕಂಬಳವು ಕ್ರೀಢ ಮಾತ್ರವಲ್ಲ, ಜನಪದ ಜಾತ್ರೆಯೂ ಹೌದು. ಇದೀಗ ಮಂಗಳೂರಿನ ‘ರಾಮ-ಲಕ್ಷ್ಮಣ’ ಕಂಬಳ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ.
ಬಂದರು ನಗರ ಹೊರವಲಯದ ಬಂಗ್ರ ಕೂಳೂರು ಗೋಲ್ಡ್ಫಿಂಚ್ ಸಿಟಿಯಲ್ಲಿ ಜ.22 ರಂದು 6ನೇ ವರ್ಷದ ‘ರಾಮ-ಲಕ್ಷ್ಮಣ’ ಜೋಡುಕರೆ ಕಂಬಳ ನಡೆಯಲಿದೆ. ಸುಮಾರು 150 ಜತೆ ಕಂಬಳ ಕೋಣಗಳು ಆಗಮಿಸುವ ನಿರೀಕ್ಷೆ ಇದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಕ್ಯಾ.ಬೃಜೇಶ್ ಚೌಟ ತಿಳಿಸಿದ್ದಾರೆ.
ಜ.21ರಂದು ಬೆಳಗ್ಗೆ 8.30ಕ್ಕೆ ಎಂಆರ್ಜಿ ಗ್ರೂಪ್ನ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ಅವರ ಗೌರವ ಅಧ್ಯಕ್ಷತೆಯಲ್ಲಿ, ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಧ್ಯಕ್ಷ ಕೆ.ಚಿತ್ತರಂಜನ್ ಅವರು ಉದ್ಘಾಟಿಸುವ ಮೂಲಕ ಈ ಕಂಬಳೋತ್ಸವಕ್ಕೆ ಮುನ್ನುಡಿ ಬರೆದಿದ್ದು, ಕದ್ರಿ ಮಠಾಧೀಶ ರಾಜ ಯೋಗಿ ಶ್ರೀ ನಿರ್ಮಲ್ನಾಥ್ ಜಿ ಮಹಾರಾಜ್, ರಾಮಕೃಷ್ಣ ಮಠದ ಸ್ವಾಮಿ ಏಕಗಮ್ಯಾನಂದ ಸ್ವಾಮೀಜಿ, ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು ದಿವ್ಯ ಉಪಸ್ಥಿತಿ ಮೆರಗುಪಡೆದಿದೆ.
ಸಂಜೆ 6 ಗಂಟೆಗೆ ಕಂಬಳ ಸಮಿತಿ ಗೌರವಾಧ್ಯಕ್ಷ ಹಾಗೂ ಎಂಆರ್ಜಿ ಗ್ರೂಪ್ನ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮದಲ್ಲಿ, ಸಚಿವರಾದ ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಶಾಸಕರಾದ ವೇದವ್ಯಾಸ ಕಾಮತ್, ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಡಾ. ಭರತ್ ಶೆಟ್ಟಿ ಮೊದಲಾದವರು ಭಾಗವಹಿಸುವಿಕೆ ತುಳು ಸಂಸ್ಕೃತಿಯ ಇತಿಹಾಸದಲ್ಲೊಂದು ಮೈಲುಗಲ್ಲು.
ಚಲನಚಿತ್ರ ನಟ ಅಭಿಷೇಕ್ ಅಂಬರೀಶ್, ನಿರ್ದೇಶಕ- ನಟ ರಾಜ್ ಬಹಿ ಶೆಟ್ಟಿ, ಬಿಗ್ಬಾಸ್ ತಾರೆ ರೂಪೇಶ್ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಸಿನಿಲೋಕದ ಗಣ್ಯರು, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದ ಪ್ರಮುಖರೂ ಭಾಗಿಯಾಗಲಿಧದಾರೆ.
ಜ.23 ರಂದು ಬೆಳಗ್ಗೆ 8.30 ಗಂಟೆಗೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.
ವರ್ಣ ಚಿತ್ರ- ಛಾಯಾಚಿತ್ರ ಸ್ಪರ್ಧೆ
ಮಕ್ಕಳಿಗಾಗಿ ಮೂರು ವಿಭಾಗಗಳಲ್ಲಿ ‘ಕಲಂ ಕರೂಟ’ ಎಂಬ ಚಿತ್ರಕಲೆ ಸ್ಪರ್ಧೆ ನಡೆಯಲಿದೆ.ರೀಲ್ಸ್ ಹಾಗೂ ಫೋಟೋಗ್ರಫಿ ಸ್ಪರ್ದೆಯೂ ಆಯೋಜಿತವಾಗಿದೆ
ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸುವವರು ಕಂಬಳದ ಚಿತ್ರ ತೆಗೆದು ಇನ್ಸ್ಟ್ರಾಗ್ರಾಂನಲ್ಲಿ ಮಂಗಳೂರು ಕಂಬಳ ಸಮಿತಿಗೆ ಟ್ಯಾಗ್ ಮಾಡಬೇಕು. ಅಥವಾ 200 ಎಂಬಿಗಿಂತ ಒಳಗಿನ ಗಾತ್ರದ ಚಿತ್ರವನ್ನು ಮೇಲ್ ಮಾಡಬೇಕು. ಅದನ್ನು ತೀರ್ಪುಗಾರರು ಗಮನಿಸಿ ವಿಜೇತರನ್ನು ಆಯ್ಕೆ ಮಾಡಿ ಭಾನುವಾರ ಬೆಳಗ್ಗೆ ಬಹುಮಾನ ವಿತರಿಸಲಾಗುವುದು ಎಂದು ಕಂಬಳ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.
ಮಂಗಳೂರು ಕಂಬಳ ಸಮಿತಿ ಗೌರವ ಸಲಹೆಗಾರರಾದ ವಿಜಯಕುಮಾರ್ ಕಂಗಿನಮನೆ, ಅಭಿಷೆಕ್ತೀರ್ಥಹಳ್ಳಿ, ಈಶ್ವರ್ ಶೆಟ್ಟಿ . ಪಿಆರ್ ಶೆಟ್ಟಿ ಕೂಳೂರು ಪೊಯೈಲ್, ಸುಧಕರ್ ಶೆಟ್ಟಿ ಮುಗೆರೋಡಿ, ಮಂಗಳೂರು ಕಂಬಳ ಸಮಿತಿ ಉಪಾಧ್ಯಕ್ಷ ಸಂಜಯ್, ಈಶ್ವರ್ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್ ಮಂಗಲ್ಪಾಡಿ ಮೊದಲಾದ ಪ್ರಮುಖರ ಉಸ್ತುವಾರಿಯಲ್ಲಿ ವಿವಿಧ ಕಾರ್ಯಕ್ರಮಗಳು ಏರ್ಪಾಡಾಗಿವೆ.
ಕಂಬಳದ ಆಕರ್ಷಣೆ ಹೀಗಿದೆ..
-
ಆಧುನಿಕ ರೀತಿಯಲ್ಲಿ ಕಂಬಳ ನಡೆಯುವುದಾದರೂ ಈ ಬಾರಿ ಸಾಂಪ್ರದಾಯಿಕ ಸ್ವರೂಪದಂತೆ ಕಂಬಳ ಸ್ಪರ್ಧೆ ಆರಂಭಕ್ಕೆ ಮೊದಲು ಹಿರಿಯ ಕೋಣಗಳನ್ನು ಕರೆಗೆ ಇಳಿಸಲಾಗುತ್ತೆ.
-
150ಕ್ಕೂ ಹೆಚ್ಚು ಬಹುಮಾನ ಪಡೆದಿರುವ ಚೆನ್ನ ಹಾಗೂ ಬೊಳ್ಳೆ ಈ ಕಂಬಳದ ವಿಶೇಷ ಆಕರ್ಷಣೆ.
-
ನೇಗಿಲು ಹಿರಿಯ ಹಾಗೂ ಕಿರಿಯ, ಹಗ್ಗ ಹಿರಿಯ ಹಾಗೂ ಕಿರಿಯ, ಕನಹಲಕೆ, ಅಡ್ಡಹಲಗೆ ಎಂಬ ಆರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.