ಮಂಗಳೂರು : ಬಂರು ನಗರಿ ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಶ ಮಹೋತ್ಸವ ಸನ್ನಿವೇಶ ನಾಡಿನ ಗಮನ ಸೆಳೆಯಿತು.
ವೈಕುಂಟ ಏಕಾದಶಿ ಪರ್ವ ದಿನಂದಂದು ಶ್ರೀ ದೇವರಿಗೆ ವಿಶೇಷ ಅಲಂಕಾರ ಹಾಗು ಪೂಜಾ ಪುನಸ್ಕಾರಗಳು ನೆರವೇರಿದವು. ಸಹಸ್ರಾರು ಭಜಕರು ಈ ಸನ್ನಿವೇಶಕ್ಕೆ ಸಾಕ್ಷಿಯಾದರು.
ವಿಜೃಂಭಣೆಯಿಂದ ಜರಗಿದ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ವೀರ ವೆಂಕಟೇಶ ಭಜನಾ ಮಂಡಳಿಯ ಸಹಭಾಗಿತ್ವ ದಲ್ಲಿ ನಡೆಯುವ ವಾರ್ಷಿಕ ಏಕಾಹ ಭಜನಾ ಕಾರ್ಯಕ್ರಮ ಈ ಉತ್ಸವಕ್ಕೆ ವೈಭವದ ಕಳೆ ತಂದಿತು.

ಮಾರ್ಗಶಿರ ಮಾಸದ ಶು.ಏಕಾದಶಿ ತಾ. 25/12/2020 ಶುಕ್ರವಾರ ದಂದು ಪ್ರಾತಃ 6 ಫಂಟೆಗೆ ಕೈಂಕರ್ಯಗಳು ಪ್ರಾರಂಭಗೊಂಡಿತು. ಅಹೊರಾತ್ರಿ ಭಜನೆ ಸೇವೆಯಲ್ಲೂ ಸುಮಾರು 30 ಭಜನಾ ಮಂಡಳಿಗಳು ಸೇವೆ ವಿಶೇಷತೆಗೆ ಸಾಕ್ಷಿಯಾಯಿತು.
ಶನಿವಾರ ಪ್ರಾತಃ 5.30ಫಂಟೆಗೆ ಮಂಗಲದ ಬಳಿಕ ಶ್ರೀ ದೇವರ ಕೆರೆ ಸ್ನಾನ, ಪೇಟೆ ಉತ್ಸವ ನೆರವೇರಲಿದೆ.
ಮೊಕ್ತೇಸರರಾದ ಸಿ ಎಲ್ ಶೆಣೈ , ಕೆ ಪಿ ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ ಮೊದಲಾದ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ಸಾಗಿದೆ.