ರಾಜ್ಯದ ಮುಜರಾಯಿ ಇಲಾಖೆ ಚರಿತ್ರಾರ್ಹ ಸಾಧನೆ ಮಾಡಿದೆ. ಆಸ್ತಿಕರಿಗೆ ಆಸರೆ ಕಲ್ಪಿಸುತ್ತಿರುವ ಮುಜರಾಯಿ ಇಲಾಖೆ ರಾಜ್ಯದ ದೇಗುಲಗಳ ಅಭಿವೃದ್ಧಿ ವಿಚಾರದಲ್ಲಿ ಕ್ರಾಂತಿಕಾರಿ ಕ್ರಮ ಕೈಗೊಡಿದ್ದು, ಭಕ್ತರ ಹಾಗೂ ಯಾತ್ರಾರ್ಥಿಗಳ ವಿಚಾರದಲ್ಲೂ ಗಮನ ಕೇಂದ್ರೀಕರಿಸಿದೆ. ಇಡೀ ದೇಶದಲ್ಲೇ ಈ ರೀತಿಯ ಹೆಜ್ಜೆ ಇಡಲು ಕಾರಣವಾಗಿದ್ದೇ ಸಚಿವ ರಾಮಲಿಂಗ ರೆಡ್ಡಿ ಎಂಬುದು ಆಸ್ತಿಕರ ಅಂಬೋಣ.
ಕರ್ನಾಟಕ ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಇದೀಗ ಒಂದು ಗಾಂಭೀರ್ಯ ಹಾಗೂ ಘನತೆ ಬಂದಿದೆ ಎಂಬುದು ದೇಗುಲಗಳ ಮೇಲ್ವಿಚಾರಕರ ಹಾಗೂ ಅರ್ಚಕರ ಸಮೂಹದ ಪ್ರತಿಪಾದನೆ. ಇದಕ್ಕೆ ಕಾರಣವೂ ಇದೆ. ರಾಮಲಿಂಗ ರೆಡ್ಡಿಯವರು ಮುಜರಾಯಿ ಇಲಾಖೆಯ ಸಚಿವರಾದ ನಂತರ ಬಹುತೇಕ ವಿಭಾಗಗಳಲ್ಲಿ ಪರಿವರ್ತನೆಗೆ ಮುನ್ನುಡಿ ಬರೆದಿದ್ದಾರೆ. ಇವರು ಈ ಖಾತೆಯನ್ನು ವಹಿಸಿಕೊಂಡ ಮೇಲೆ ಅನೇಕ ರೀತಿಯ ಹೊಸ ಹೊಸ ಕಾರ್ಯಕ್ರಮಗಳನ್ನು ನೀಡಿ ಅರ್ಚಕರಿಗೆ ಮತ್ತು ಭಕ್ತರಿಗೆ, ದೇವಾಲಯ ಸಿಬ್ಬಂದಿಗೆ ಸಾಕಷ್ಟು ಉತ್ತಮವ ಯೋಜನೆಗಳನ್ನು ಜಾರಿಗೊಳಿಸಿ ಧಾರ್ಮಿಕ ಕ್ಷೇತ್ರದಲ್ಲಿ ದುಡಿಯುವವರ ಬದುಕಿಗೆ ಪೂರ ವಾತಾವರಣ ನಿರ್ಮಾಣ ಮಾಡಿದ್ದಾರೆ. ಅರ್ಚಕರಿಗೆ ಆರೋಗ್ಯ ಸಂಬಂಧಪಟ್ಟ ಯೋಜನೆ, ಅವರ ಮರಣದ ಸಂದರ್ಭದಲ್ಲಿ ಕುಟುಂಬದವರಿಗೆ ಆರ್ಥಿಕ ನೆರವು, ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹದ ದನ, ಇತ್ಯಾದಿ ಕ್ರಮಗಳು ಮಾನವೀಯ ಹೆಜ್ಜೆಗಳೇ ಆಗಿವೆ.
ರಾಜಕೀಯ ಪಕ್ಷ ಯಾವುದೇ ಇರಲಿ, ರಾಜಕೀಯ ಸಿದ್ದಂತ ಏನೇ ಇರಲಿ, ಧಾರ್ಮಿಕ ಕೈಂಕರ್ಯಕ್ಕೆ ಶಕ್ತಿಯೆನಿಸಿರುವ ದೇಗುಲಗಳ ಅಭ್ಭಿವೃದ್ದಿ ಹಾಗೂ ಕೈಂಕರ್ಯ ನಿರಂತರ ಕ್ಷೆಯೊಭಿವೃದ್ದಿಗೆ ನಿಷ್ಪಕ್ಷಪಾತ ಕ್ರಮ ಕೈಗೊಂಡ ಕಾರಣಕ್ಕಾಗಿಯೇ ಮುಜರಾಯಿ ಮಂತ್ರಿ ರಾಮಲಿಂಗ ರೆಡ್ಡಿ ದೇವಾಲಯಗಳ ಸೇವಕರಿಗೆ ಅತ್ಯಂತ ಪ್ರಿಯರಾಗಿದ್ದಾರೆ.
ಅಯೋಧ್ಯೆಯ ಶ್ರೀ ರಾಮ ದೇಗುಲದ ಉದ್ಘಾಟನೆ ಸಂದರ್ಭದಲ್ಲಿ ಮಂದಿರ ನಿರ್ಮಾಣವು ತಮ್ಮವರ ಹೋರಾಟದ ಫಲ ರಾಜಕೀಯ ಪಕ್ಷಗಳು ಗುನುಗುತ್ತಿದ್ದರೂ ರಾಜ್ಯದ ಮುಜರಾಯಿ ಸಚಿವರು ಇದೇ ತಿಂಗಳ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮದೇವರ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಕರ್ನಾಟಕದ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸ ಬೇಕೆಂದು ನಿರ್ದೇಶಿಸಿ ‘ನಮ್ಮೊಳಗಿನ ರಾಮ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸರ್ಕಾರದ ಧಾರ್ಮಿಕ ಶ್ರದ್ಧೆಯನ್ನು ಮತ್ತು ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ತನ್ನ ಪಕ್ಷಕ್ಕೆ ಇರುವ ಬದ್ಧತೆಯನ್ನು ಎತ್ತಿ ಹಿಡಿದಿರುವ ಸಚಿವರ ಈ ನಿರ್ಧಾರವನ್ನು ಸ್ವಾಗತಿಸಿರುವ ಜನರು ಇವರನ್ನು ‘ನಮ್ಮೊಳಗಿನ ರಾಮ’ ಎಂದೇ ಗುಣಗಾನ ಮಾಡಿದ್ದಾರೆ.
ಹುಂಡಿ ಹಣ ಅಪಬಳಕೆಗೆ ಬ್ರೇಕ್..!
ಮುಜರಾಯಿ ದೇವಾಲಯದ ಹುಂಡಿಯ ಹಣ ಅನ್ಯ ಧರ್ಮದ ಅಭಿವೃದ್ಧಿಗೆ ಬಳಸಲಾಗುತ್ತಿದೆ ಎಂಬ ಆರೋಪಗಳಿಗೆ ಸೂಕ್ತ ಉತ್ತರ ಎಂಬಂತೆ ಸಚಿವ ರಾಮಲಿಂಗ ರೆಡ್ಡಿಯವರು ಹೊಸದಾಗಿ ಆದೇಶ ಹೊರಡಿಸಿ ಮಂಗಳ ಹಾಡಿದ್ದಾರೆ. ರಾಜ್ಯದ ಮುಜರಾಯಿ ದೇವಾಲಯಗಳ ಹುಂಡಿಯ ಹಣವನ್ನು ಆಯಾ ದೇಗುಲಗಳ ಅಭಿವೃದ್ಧಿಗೆ ಬಳಸಬೇಕೆಂಬ ನಿರ್ದೇಶನಕ್ಕೆ ವ್ಯಕ್ತವಾಗಿದೆ.
ಹಿಂದಿನ ಸರ್ಕಾರಗಳಲ್ಲಿ ಸಚಿವರಾಗಿದ್ದವರು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾಗದ ಅನೇಕ ಕಾರ್ಯಕ್ರಮಗಳನ್ನು ರಾಮಲಿಂಗ ರೆಡ್ಡಿ ರವರು ರೂಪಿಸಿ ಮುಜರಾಯಿ ಇಲಾಖೆಯ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ. ಈ ನಡೆ ನಿಜಕ್ಕೂ ಇಡೀ ಮಂತ್ರಿಮಂಡಲಕ್ಕೆ ಮಾದರಿಯಾಗಿದ್ದಾರೆ ಎಂಬ ಶ್ಲಾಘನೆಯೂ ವ್ಯಕ್ತವಾಗಿದೆ.
ಮುಜರಾಯಿ ಇಲಾಖೆಯ ಕ್ರಾಂತಿಕಾರಿ ಕಾರ್ಯಕ್ರಮಗಳು:
ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರಾ: ಅತ್ಯಂತ ಕಡಿಮೆ ವೆಚ್ಚದಲ್ಲಿ ರಾಮೇಶ್ವರ, ಕನ್ಯಾಕುಮಾರಿ, ಮಧುರೈ, ತಿರುವನಂತಪುರಂ ಕ್ಷೇತ್ರಗಳಿಗೆ 6 ದಿನಗಳ ಯಾತ್ರೆ. 3 ಟೈರ್ ಎಸಿ ರೈಲು ಪ್ರಯಾಣ, ತಿಂಡಿ-ಊಟ, ವಸತಿ ಮತ್ತು ದರ್ಶನ ವ್ಯವಸ್ಥೆಯ ಈ ಯಾತ್ರೆಯ ಒಟ್ಟು ಪ್ಯಾಕೇಜ್ ಮೊತ್ತ 15,000 ರೂಪಾಯಿ. ಇದಕ್ಕೆ ರಾಜದಯ ಸರ್ಕಾರ 5,000 ರೂಪಾಯಿ ಸಹಾಯ ಧನ ನೀಡಲಿದ್ದು, ಯಾತ್ರೆ ಅಪೇಕ್ಷಿತರು 10,000 ಮಾತ್ರ ಪಾವತಿಸಬೇಕು. ಬೆಳಗಾವಿ, ಹುಬ್ಬಳ್ಳಿ, ಬೀರೂರು, ತುಮಕೂರು, ಹಾವೇರಿ, ದಾವಣಗೆರೆ, ಯಶವಂತಪುರ ನಿಲ್ದಾಣಗಳಿಂದ ರೈಲು ವ್ಯವಸ್ಥೆ ಇದೆ.
ಉಚಿತ ಯಾತ್ರೆ: ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಪ್ರವರ್ಗ ‘ಸಿ’ ಅಧಿಸೂಚಿತ ದೇವಾಲಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಪಕರು / ನೌಕರರನ್ನು ಕರ್ನಾಟಕ ಭಾರತ್ ಗೌರವ್ ಕಾಶಿ-ಗಯಾ ದರ್ಶನ ಯೋಜನೆಯಡಿ ಹಾಗೂ ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರೆ ಯೋಜನೆಯಡಿ ವಾರ್ಷಿಕವಾಗಿ ಅರ್ಚಕರು/ನೌಕರರು ಮತ್ತು ಅವರ ಕುಟುಂಬದ ಒಬ್ಬ ಸದಸ್ಯರು (ಪತ್ನಿ) ಒಟ್ಟು 2,400 ಮಂದಿಗೆ ಉಚಿತವಾಗಿ ಯಾತ್ರೆಗೆ ಕಳುಹಿಸಲಾಗುತ್ತಿದೆ.
ವಿದ್ಯಾರ್ಥಿ ವೇತನ: ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ದೇವಾಲಯ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು/ನೌಕರರ ಮಕ್ಕಳಿದ ವಿದ್ಯಾಭ್ಯಾಸಕ್ಕಾಗಿ ವಾರ್ಷಿಕ ಪ್ರೋತ್ಸಾಹ ಧನ ವಿತರಿಸಲಾಗುವುದು. ಮುಜರಾಯಿ ಇಲಾಖೆಯ ಇತಿಹಾಸದಲ್ಲೇ ಅರ್ಚಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿ ವರ್ಷ ರೂ.5000 ದಿಂದ ರೂ.1 ಲಕ್ಷ ದವರೆಗೆ ಸಹಾಯ ಧನ ವಿತರಿಸಲಾಗುವುದು. ಇದಕ್ಕಾಗಿ ಅಭ್ಯರ್ಥಿಗಳು ಸಂಬಂಧಪಟ್ಟ ತಹಶೀಲ್ದಾರ್ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ಮುಜರಾಯಿಯ ಶಾಖೆ ಹಾಗೂ ಕೇಂದ್ರ ಕಚೇರಿಯಲ್ಲಿ 31-01-2024ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಮೃತ ಅರ್ಚಕರು/ನೌಕರರ ಕುಟುಂಬಕ್ಕೆ ಪರಿಹಾರ: ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು/ನೌಕರರು ಮೃತಪಟ್ಟಲ್ಲಿ ಮೃತರ ಕುಟುಂಬಕ್ಕೆ ರೂ.2.00 ಲಕ್ಷ ಪರಿಹಾರ ನೀಡಲಾ ಗುತ್ತಿದೆ. ಇದಕ್ಕಾಗಿ ತಹಶೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಮುಜರಾಯಿ ಶಾಖೆ ಹಾಗೂ ಕೇಂದ್ರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.
ವಸತಿ ಯೋಜನೆ: ಸರ್ಕಾರದ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಆಯ್ಕೆಯಾಗುವ ‘ಸಿ’ ವರ್ಗದ ದೇವಾಲಯಗಳ ಅರ್ಚಕರು ಹಾಗೂ ನೌಕರರು ಪಾವತಸಿಬೇಕಾದ ವಂತಿಗೆಯನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಿ ಪಾವತಿಸಲಾಗುವುದು.
ಮಾಂಗಲ್ಯ ಭಾಗ್ಯ” ಯೋಜನೆ: ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಪ್ರವರ್ಗ ‘ಎ’ ಮತ್ತು ‘ಬಿ’ ಅಧಿಸೂಚಿತ ದೇವಾಲಯಗಳಲ್ಲಿ ‘ಮಾಂಗಲ್ಯ ಭಾಗ್ಯ’ ಯೋಜನೆಯಡಿ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ಈ ಯೋಜನೆಯಡಿ ವಧು-ವರರಿಗೆ ರೂ.55,000 ಪ್ರೋತ್ಸಾಹ ಧನವನ್ನು ಆಯಾಯ ದೇವಾಲಯಗಳ ನಿಧಿಯಿಂದ ಪಾವತಿಸಲಾಗುವುದು. ಆದಾಯ ಕಡಿಮೆ ಇರುವ ದೇವಾಲಯಗಳಲ್ಲಿ ಪದರಿ ಪ್ರೋತ್ಸಾಹ ಧನವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ನೀಡಲಾಗುವುದು.
‘ಶಕ್ತಿ’ಯ ಜೊತೆ ‘ಯುಕ್ತಿ’
ದೇಗುಲಗಳ ವಲಯವಷ್ಟೇ ಅಲ್ಲ, ಸಾರಿಗೆ ಮಂತ್ರಿಯಾಗಿ ಆ ಕ್ಷೇತ್ರದಲ್ಲೂ ಪ್ರಗತಿಗೆ ಬರೆದಿದ್ದಾರೆ. ಸಾರಿಗೆ ನಿಗಮಗಳ ಚಾಲಕರ ಮತ್ತು ನಿರ್ವಾಹಕರ ವಿಚಾರದಲ್ಲಿ ಕೈಗೊಂಡ ಕ್ರಮ ಇಡೀ ದೇಶದ ಗಮನಸೆಳೆದಿದೆ. ‘ಶಕ್ತಿ’ ಯೋಜನೆ ಅನುಷ್ಠಾನ ಮೂಲಕ ಸರ್ಕಾರದ ಸಾಧನೆ ಅನಾವರಣವಾಗಿದೆ. ಸರ್ಕಾರದ ಯೋಜನೆಯಾಗಿದ್ದರೂ ಅದರ ಜಾರಿಯ ಪರಿಪೂರ್ಣತೆಯ ಹಿಂದಿರುವುದು ಚಾಣಾಕ್ಷರ ಯುಕ್ತಿ. ಇದು ಸಾರಥ್ಯದಲ್ಲಿ ಆಗಿದೆ ಎಂಬುದು ಸಾರಿಗೆ ವಲಯದ ಪ್ರಮುಖರ ಅಭಿಪ್ರಾಯ.
ಹೊಸದಾಗಿ ಅನೇಕ ಭಾಗಗಳಿಗೆ ಬಸ್ ಸೌಲಭ್ಯ, ಸಾವಿರಾರು ಸಿಬ್ಬಂದಿಯ ನೇಮಕ, ಹೊಸ ಬಸ್’ಗಳ ಸೇರ್ಪಡೆ, ಜನಸ್ನೇಹಿ ಸಾರಿಗೆ ವ್ಯವಸ್ಥೆಗೆ ಅಡಿಪಾಯ, ಮೃತ ನೌಕರರ ಕುಟುಂಬಕ್ಕೆ ವಿಮಾ ಸೌಲಭ್ಯ ಕಲ್ಪಿಸಿರುವ ಕ್ರಮವಷ್ಟೇ ಅಲ್ಲ, ಉತ್ತಮ ಆಡಳಿತ ವ್ಯವಸ್ಥೆಗೂ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಸಿಕ್ಕಿವೆ. ರಾಮಲಿಂಗ ರೆಡ್ಡಿ ಅವರು ಸಾರಿಗೆ ಸಚಿವರಾದ ನಂತರ 7 ತಿಂಗಳಲ್ಲಿ ಬರೋಬ್ಬರಿ 49 ಪ್ರಶಸ್ತಿಗಳು KSRTC ಸಮೂಹಕ್ಕೆ ಸಿಕ್ಕಿರುವುದು ಇಲಾಖೆಯ ಸಾಧನೆಗೆ ಸಿಕ್ಕಿರುವ ಸರ್ಟಿಫಿಕೇಟ್ ಅಲ್ಲದೆ ಮತ್ತಿನ್ನೇನೂ ಅಲ್ಲ. ಇದೆಲ್ಲದರ ಜೊತೆ ಜನರಿಗೆ ಸೂಕ್ತ ಸರಕು ಸೇವೆ ಒದಗಿಸಲು ಹಾಗೂ ಸಾರಿಗೆ ಸಂಸ್ಥೆಗಳ ಆದಾಯ ಉತ್ತೇಜನಕ್ಕಾಗಿ ಆರಂಭಿಸಿರುವ ‘ಕಾರ್ಗೋ’ ಸೇವೆ ಕೂಡಾ ಗಮನಸೆಳೆದಿದೆ.