ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಕೈಗೊಂಡಿರುವ ಬಸ್ಗಳ ಬ್ರಾಂಡಿಂಗ್ ಉಪಕ್ರಮಕ್ಕೆ ಬಳಕೆದಾರರ ಅನುಭವವನ್ನು ಹೆಚ್ಚಿಸುವಲ್ಲಿ ಸಾಧನೆಗೈದ ಕಾರಣಕ್ಕಾಗಿ ಇಕಾನಾಮಿಕ್ ಟೈಮ್ಸ್ ಪಿಎಸ್ಯು ಲೀಡರ್ಶಿಪ್ ಅಂಡ್ ಎಕ್ಸಲೆನ್ಸ್ ಅವಾರ್ಡ್ 2025 ಪುರಸ್ಕಾರ ದೊರಕಿದೆ. ಈ ಪ್ರಶಸ್ತಿಯನ್ನು ಹೈಯಟ್ ರಿಜೆನ್ಸಿ ಹೋಟೆಲ್, ನವದೆಹಲಿಯಲ್ಲಿ 2025ರ ಜೂನ್ 19ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಲಾಯಿತು.
ಈ ಪುರಸ್ಕಾರವನ್ನು ಕೇಂದ್ರ ಸರ್ಕಾರದ ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ (NIC) ಡೈರೆಕ್ಟರ್ ಜನರಲ್ ಇಂದರ್ ಪಾಲ್ ಸಿಂಗ್ ಸೇಥಿ ಅವರು ಪ್ರದಾನ ಮಾಡಿದರು.
KSRTC ನಿಗಮದ ಪರವಾಗಿ ಮುಖ್ಯ ಕಾನೂನು ಅಧಿಕಾರಿ ವೆಂಕಟೇಶ್ ಟಿ ಹಾಗೂ ಮುಖ್ಯ ಕಾಮಗಾರಿ ಅಭಿಯಂತರ ಕುತ್ಬುದ್ದೀನ್ ಹವಾಲ್ದಾರ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.