ಚಾಮರಾಜನಗರ: ಹನೂರು ತಾಲೂಕಿನ ಆಡಳಿತ ಅಧಿಕಾರಿ ವೈ ಕೆ ಗುರುಪ್ರಸಾದ್ ಅಧ್ಯಕ್ಷತೆಯಲ್ಲಿ ಹನೂರು ಪಟ್ಟಣ ಪಂಚಾಯತಿಯ 2024-2025 ನೇ ಸಾಲಿನ ಆಯ-ವ್ಯಯ ಪೂರ್ವಭಾವಿ ಸಭೆ ನಡೆಯಿತು.
ಪಟ್ಟಣ ಪಂಚಾಯಿತಿ ಸದಸ್ಯ ಗಿರೀಶ್ ಮಾತನಾಡಿ ತಳ್ಳುವ ಗಾಡಿಗಳು ಹಾಗೂ ಬಸ್ಸ್ ಗಳ ಸುಂಕ ವಸಲಿಗಾಗಿ ಅತಿಜರೂರು ಹರಾಜು ಪ್ರಕ್ರಿಯೆ ಮಾಡಿದರೆ ಪಟ್ಟಣ ಪಂಚಾಯಿತಿಗೆ ಆದಾಯ ಬರುತ್ತದೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆಗೆ ವಾಹನಗಳ ಅವಶ್ಯಕತೆವಿದ್ದು, ಇರುವ ವಾಹನಗಳು ಸಹ ರಿಪೇರಿಯಾಗಿದ್ದು ಇದರ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು .
ಪಟ್ಟಣ ಪಂಚಾಯಿತಿ ಸದಸ್ಯರಾದ ಹರೀಶ್ ಕುಮಾರ್ ಮಾತನಾಡಿ ಪಟ್ಟಣ ಪಂಚಾಯಿತಿಯಲ್ಲಿ ಕಳೆದ ಆರೇಳು ತಿಂಗಳಿನಿಂದಲೂ ಯಾವುದೇ ಈ ಸ್ವತ್ತು ,ಉದ್ದಿಮೆಪರವಾನಿಗೆ , ಜನನ ಮರಣ ಪ್ರಮಾಣ ಪತ್ರ, ಕಟ್ಟಡ ಪರವಾನಿಗೆ ಸೇರಿದಂತೆ ಯಾವುದೇ ದಾಖಲಾತಿಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಇದಕ್ಕೆ ಕಾರಣ ಅಧಿಕಾರಿಗಳ ವರ್ಗಾವಣೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಪಟ್ಟಣ ಪಂಚಾಯಿತಿಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದರಿಂದ ಪಟ್ಟಣ ಪಂಚಾಯಿತಿಗೆ ಬರುವ ಅಧಿಕಾರಿಗಳು 3-4 ತಿಂಗಳುಗಳಲ್ಲಿ ವರ್ಗಾವಣೆಯಾಗುತ್ತಿದ್ದಾರೆ ,ಮುಂದಿನ ದಿನಗಳಲ್ಲಿ ಮುಖ್ಯಾಧಿಕಾರಿ ಹಾಗೂ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಸಾಮೂಹಿಕವಾಗಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಮಹಾದೇಶ್ ಮಾತನಾಡಿ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಈ ಬಾರಿ 5 ಲಕ್ಷ ಅನುದಾನ ಮೀಸಲಿಟ್ಟು ಪತ್ರಕರ್ತರಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.
ಮುಖಂಡರಾದ ನಟರಾಜುರವರು ಮಾತನಾಡಿ ಹನೂರು ಖಾಸಗಿ ಬಸ್ ನಿಲ್ದಾಣದಿಂದ ಜಿ ವಿ ಗೌಡ ಪದವಿ ಪೂರ್ವ ಕಾಲೇಜುರವರೆಗೆ ರಸ್ತೆಯೂ ತೀವ್ರವಾಗಿ ಹಾಳಾಗಿದ್ದು ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಮಕ್ಕಳು ಶಾಲಾ ಕಾಲೇಜಿಗೆ ಓಡಾಡುತ್ತಿದ್ದು ಅವರಿಗೆ ತುಂಬಾ ತೊಂದರೆಯಾಗುತ್ತಿದೆ ಆದ್ದರಿಂದ ರಸ್ತೆಗೆ ತೇಪೆ ಹಾಕುವುದಕ್ಕೆ ಸೂಕ್ತ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಮಹೇಶ್ ರವರು ಮಾತಾಡಿ ಕೆಸಿಫ್ ರಸ್ತೆಗೆ ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಿದ್ದು ಉಳಿಕೆ ಜಾಗದಲ್ಲಿ ವಾಣಿಜ್ಯಗಳಿಗೆ ನಿರ್ಮಾಣ ಮಾಡಿದರೆ ಪಟ್ಟಣ ಪಂಚಾಯತಿಗೆ ಆದಾಯ ಬರುತ್ತದೆ ಎಂದು ಸಲಹೆ ನೀಡಿದರು.
ಮುಖಂಡರಾದ ಕಿರಣ್ ಮಾತನಾಡಿ ಪಟ್ಟಣದ 13 ವಾರ್ಡ್ ಗಳಿಗೆ ಸಮರ್ಪಕವಾಗಿ ಕಾವೇರಿ ನೀರನ್ನು ಪೂರೈಸಿದರೆ ಸಾರ್ವಜನಿಕರು ನೀರಿನ ಕಂದಾಯವನ್ನು ಕಟ್ಟುತ್ತಾರೆ, ಹಾಗೂ ಸಾರ್ವಜನಿಕರಲ್ಲಿ ನಲ್ಲಿ ಕಂದಾಯ ಕಟ್ಟಲು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಸುದೇಶ್ ಅವರು ಮಾತನಾಡಿ ಹನೂರು ಪಟ್ಟಣದಲ್ಲಿ ಸಾಮೂಹಿಕವಾಗಿ ವಿದ್ಯುತ್ ಚಿತಗಾರಕ್ಕೆ ಅನುದಾನ ಮೀಸಲಿಡಬೇಕು ಎಂದು ಸಲಹೆ ನೀಡಿದರು.
ಮುಖಂಡರಾದ ಸತೀಶ್ ಮಾತನಾಡಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಂಥಾಲಯವನ್ನು ಸ್ಥಾಪಿಸಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಅಶೋಕ್,ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಆನಂದ್, ಮಹೇಶ್, ಪವಿತ್ರ ,ಮಮ್ತಾಜ್ ಬಾನು, ಸಂಪತ್ ಕುಮಾರ್ ಮಂಜುಳಾ , ಮುಖಂಡರುಗಳಾದ ಸಿದ್ಧೇಗೌಡ ,ಪ್ರಸನ್ನ ,ಮೇಘರಾಜ್, ಮಂಜುನಾಥ್ ,ಸಾಗರ್ , ಅಖಿಲ ಕರ್ನಾಟಕ ಒಕ್ಕಲಿಗ ಸಂಘದ ಅಧ್ಯಕ್ಷ ಎಲ್ ನಾಗೇಂದ್ರ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಾದ ಭರತ್ ,ಸುನಿಲ್ ,ಸುಷ್ಮಾ, ದೇವಿಕಾ , ಮಾದೇಶ್ ಮೊದಲಾದವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.