ಗದಗ್: ಆಶ್ರಯ ಮನೆಯ ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಹೆಜ್ಜೇನು ದಾಳಿಯ ಘಟನೆ ಪಟ್ಟಣದ ಗದಗ ಜಿಲ್ಲೆ ರೋಣದಲ್ಲಿ ನಡೆದಿದೆ.
ರೋಣ ತಾಲೂಕಿನ ಗಾಡಗೋಳಿ ಗ್ರಾಮಸ್ಥರು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಆಶ್ರಯ ಮನೆಯ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ಆರಂಭವಾಗಿ ಕೆಲವೇ ಸಮಯದಲ್ಲಿ ಗೋಡೆಗೆ ಅಂಟಿಕೊಂಡಿದ್ದ ಹೇನುಹುಳುಗಳು ದಾಳಿ ನಡೆಸಿದವು.
ಜೇನುಹುಳುಗಳ ದಾಳಿಗೆ ಹೆದರಿ, ಪ್ರತಿಭಟನಾನಿರತರು, ವರದಿಗೆ ಆಗಮಿಸಿದ್ದ ಪತ್ರಕರ್ತರು ಹಾಗೂ ಪೊಲೀಸ್ ಸಿಬ್ಬಂದಿಯೂ ಪರದಾಡುವಂತಾಯಿತು.
ಜೇನುಹುಳುಗಳು ಕಚ್ಚಿದ್ದರಿಂದ ಹಲವರು ಗಾಯಗೊಂಡಿದ್ದು, ಕೂಡಲೇ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. .