ದೊಡ್ಡಬಳ್ಳಾಪುರ : ರಾಜ್ಯ ಸರ್ಕಾರದ ವಿನೂತನ ಕಾರ್ಯಕ್ರಮ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಆರ್ ಅಶೋಕ್ ಚಾಲನೆ ನೀಡಿದರು, ಈ ಮೂಲಕ ಏಕ ಕಾಲದಲ್ಲಿ ರಾಜ್ಯದ 227 ಕಡೆ ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರತಿ ತಿಂಗಳ 3ನೇ ಶನಿವಾರದಂದ್ದು ತಾಲೂಕಿನ ಹಿಂದುಳಿದ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ನಡೆ ಕಾರ್ಯಕ್ರಮ ನಡೆಯಲಿದೆ, ಅದರ ಉದ್ಘಾಟನಾ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಕಂದಾಯ ಸಚಿವ ಆರ್, ಅಶೋಕ್ ಚಾಲನೆ ನೀಡಿದರು.
ಸಿಂಗಾರಗೊಂಡ ಎತ್ತಿನಗಾಡಿಯಲ್ಲಿ ಕಂದಾಯ ಸಚಿವರನ್ನು ಬರಮಾಡಿಕೊಂಡ ಗ್ರಾಮಸ್ಥರು.
ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದ ಉದ್ಘಾಟನೆಗೆ ಹೊಸಹಳ್ಳಿಯ ಆಗಮಿಸಿದ ಕಂದಾಯ ಸಚಿವ ಆರ್ ಅಶೋಕ್ ರವರನ್ನು ಸಿಂಗಾರಗೊಂಡ ಎತ್ತಿನಗಾಡಿಯಲ್ಲಿ ಬರಮಾಡಿಕೊಂಡರು. ಸಚಿವರ ಜೊತೆಯಲ್ಲಿ ಶಾಸಕ ಟಿ ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಸಾಥ್ ನೀಡಿದರು. ಎತ್ತಿನಗಾಡಿಯಲ್ಲಿ ಬಂದ ಸಚಿವರಿಗೆ ತಮಟೆ ವಾದನ ಮತ್ತು ಪೂರ್ಣಕುಂಭ ಸ್ವಾಗತ ಕೋರಿದರು. ನಂತರ ಹೊಸಹಳ್ಳಿ ಗ್ರಾಮದೇವತೆ ಮಾರಮ್ಮ ಮತ್ತು ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ದೇವರ ದರ್ಶನ ಪಡೆದರು.
ದಲಿತರ ಕಾಲೋನಿಗೆ ಭೇಟಿ ನೀಡಿದ ಸಚಿವರು ದಲಿತರ ಸಮಸ್ಯೆಗಳನ್ನ ಅಲಿಸಿದರು. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಯುವತಿ ಲಾವಣ್ಯ ಮನವಿ ಮಾಡಿದರು, ಕ್ರಮ ತೆಗೆದು ಕೊಳ್ಳುವ ಭರವಸೆ ನೀಡಿದರು, ಭಾಗ್ಯಮ್ಮ ಕಳೆದ 20 ವರ್ಷದಿಂದ ಗಂಡನನ್ನು ಬಿಟ್ಟು ತಾಯಿ ಮನೆಯಲ್ಲಿದ್ದು ತಮಗೆ ನಿವೇಶನ ಕೊಡುವಂತೆ ಮನವಿ ಮಾಡಿದರು, ಮಹಿಳೆಯ ಮನವಿಗೆ ಸ್ಪಂದಿಸಿದ ಸಚಿವರು ಸ್ಥಳದಲ್ಲೇ ಮಹಿಳೆಗೆ ಮನಸ್ವಿನಿ ಯೋಜನೆಯಲ್ಲಿ ಪಿಂಚಣಿ ನೀಡುವಂತೆ ಮತ್ತು ನಿವೇಶನ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು, ದಿವ್ಯಾ ಎಂಬ ಮಹಿಳೆ ತಮ್ಮ ಅಂಗವಿಕಲ ಮಗಳ ಸಮಸ್ಯೆಯನ್ನು ಹೇಳಿಕೊಂಡು ಕಣ್ಣಿರು ಹಾಕಿದ್ದರು, ಮಹಿಳೆ ಕಣ್ಣಿರಿಗೆ ಕರಗಿದ ಸಚಿವರು ಸ್ಥಳದಲ್ಲೇ ವೀಲ್ ಚೇರ್ ಕೊಡಿಸಿದರು, ಗ್ರಾಮಸ್ಥರ ಸ್ಮಶಾನಕ್ಕೆ ಜಾಗ ನೀಡುವಂತೆ ಮನವಿ ಮಾಡಿದ್ದಾಗ . ಸ್ಮಶಾನ ಜಾಗಕ್ಕೆ ಸರ್ವೆ ಮಾಡುವಂತೆ ಹೇಳಿದರು, ಒಂದೊಂದು ಮನೆಯಲ್ಲಿ ಐದಾರು ಸಂಸಾರ ವಾಸವಿದ್ದು ನಿವೇಶನಕ್ಕೆ ಮಾನವಿ ಮಾಡಿದರು, ನಿವೇಶನಕ್ಕಾಗಿ 5 ಎಕರೆ ಜಾಗವನ್ನು ಮಿಸಲಿಟ್ಟು ಅರ್ಹ ಫಲಾನುಭವಿಗಳಿಗೆ 400 ನಿವೇಶನ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕ ಸಮಸ್ಯೆ ಅಲಿಸಿದ ನಂತರ ಮಾತನಾಡಿದ ಸಚಿವರು ಹೊಸಹಳ್ಳಿಯಲ್ಲಿ ಹೊಸತನ ತರಲು ಗ್ರಾಮಕ್ಕೆ ಬಂದಿದ್ದೇನೆ, ಕಂದಾಯ ಇಲಾಖೆಯ ಹಲವು ಕಾರ್ಯಕ್ರಮಗಳನ್ನ ಜನರಿಗೆ ತಲುಪಿಸಲು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಮಾಡಲಾಗಿದೆ, ಬಹಳ ದಿನಗಳ ಹಿಂದಿನಿಂದ ಸರ್ಕಾರ ಒಂದು ಕಡೆ, ಜನರು ಒಂದು ಕಡೆ ಇರುವಂತೆ ಆಗಿದೆ, ಅಧಿಕಾರಿಗಳು ಒಂದು ತೀರ ಜನರು ಒಂದು ತೀರದಂತೆ ಆಗಿದೆ, ಪ್ರತಿ ತಿಂಗಳ ಮೂರನೇ ಶನಿವಾರ ಗ್ರಾಮದಲ್ಲಿ ವಾಸ್ಧವ್ಯ ಮಾಡುವ ಮೂಲಕ ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆ ಅಲಿಸುವ ಕೆಲಸ ಮಾಡಲಾಗಿದೆ. ಈ ಯೋಜನೆಯಿಂದ ಜನ ಕಂದಾಯ ಇಲಾಖೆಗೆ ಅಲೆಯುವುದನ್ನ ತಪ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಸರಕಾರಿ ಅಧಿಕಾರಿ, ಜನಪ್ರತಿನಿಧಿಗಳು ಜನರ ಸೇವಕರು. ಅವರ ಸೇವೆ ಮಾಡುವುದು ನಮ್ಮ ಕರ್ತವ್ಯ, ಆಗ ಮಾತ್ರ ಗಾಂಧಿಯ ರಾಮರಾಜ್ಯ ಕನಸು ನೆರವೇರಲು ಸಾಧ್ಯ. ಹೀಗಾಗಿ ಎಲ್ಲಾ ಜಿಲ್ಲೆಯಲ್ಲೂ ಅಧಿಕಾರಿಗಳು ಹಳ್ಳಿಗೆ ಹೋಗಿದ್ದಾರೆ. ಇಂದು ಸ್ಥಳದಲ್ಲಿಯೇ 400 ಜನಕ್ಕೆ ಸೈಟ್ ಕೊಡಲು ಆದೇಶ ಮಾಡಿದ್ದೇನೆ. ಈಗಾಗಲೇ ಜಾಗ ಗುರುತಿಸಿ ಆದೇಶ ಮಾಡಲಾಗಿದೆ. ಗ್ರಾಮದಲ್ಲಿ ಸ್ಮಶಾನ ಒತ್ತುವರಿಯಾಗಿತ್ತು, ಇದಾಗಲೇ ಸ್ಮಶಾನದ ಸರ್ವೇ ಕಾರ್ಯ ಆರಂಭವಾಗಿದೆ.ಇನ್ನು ಎರಡು ಗಂಟೆಗಳಲ್ಲಿ ಸರ್ವೇ ಕಾರ್ಯ ಮುಗಿಯಲಿದೆ. ಇಂದು ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಹಲವು ಸಮಸ್ಯೆಗಳು ಸ್ಥಳದಲ್ಲಿಯೇ ಬಗೆಹರಿಸಿದ್ದೇವೆ ಎಂದರು.