ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ಈ ಬಾರಿಯ ಚೌತಿ ಸಂದರ್ಭದಲ್ಲಿ ಗುಡ್ ನ್ಯೂಸ್ ಸಿಕ್ಕಿದೆ. ‘ರಾಬರ್ಟ್’ ಸಿನಿಮಾ ನಂತರ ಇದೀಗ ಹೊಸ ‘ಕ್ರಾಂತಿ’ಗ ಮುನ್ನುಡಿ ಬರೆಯಲಾಗಿದೆ.
ಗಣೇಶೋತ್ಸವ ಸಂದರ್ಭದಲ್ಲಿ ‘ಕ್ರಾಂತಿ’ ಚಿತ್ರದ ಟೈಟಲ್ ಘೋಷಿಸಲಾಗಿದೆ. ಈ ಸಂಗತಿಯನ್ನು ಸ್ವತಃ ನಟ ದರ್ಶನ್ ಅವರೇ ಸಾರಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ನಟ ದರ್ಶನ್, ‘ನಮ್ಮ ಮುಂದಿನ ಚಿತ್ರಕ್ಕೆ ‘ಕ್ರಾಂತಿ’ ಎಂಬ ಶೀರ್ಷಿಕೆ ಅಂತಿಮಗೊಳಿಸಲಾಗಿದೆ’ ಎಂದು ಖುಷಿ ಹಂಚಿಕೊಂಡಿದ್ದಾರೆ.
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
ನಮ್ಮ ಮುಂದಿನ ಚಿತ್ರಕ್ಕೆ 'ಕ್ರಾಂತಿ' ಎಂಬ ಶೀರ್ಷಿಕೆ ಅಂತಿಮಗೊಳಿಸಲಾಗಿದೆ.#KrantiBegins #Kranti #D55 #ಕ್ರಾಂತಿ pic.twitter.com/YsJfvwvSyh— Darshan Thoogudeepa (@dasadarshan) September 10, 2021
‘ಕ್ರಾಂತಿ’ಯ ಹೈಲೈಟ್ಸ್..
- ‘ಕ್ರಾಂತಿ’ ದರ್ಶನ್ ಅವರ 55ನೇ ಸಿನಿಮಾ.
- ‘ಕುರುಕ್ಷೇತ್ರ’, ‘ರಾಬರ್ಟ್’ ರೀತಿಯಲ್ಲೇ ‘ಕ್ರಾಂತಿ’ಯ ಕಿಚ್ಚು.
- ಕನ್ನಡದಲ್ಲಿ ‘ಕ್ರಾಂತಿ’ ಮುನ್ನುಡಿ..
- ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ‘ಕ್ರಾಂತಿ’.
- ದರ್ಶನ್ರನ್ನು’ಯಜಮಾನ’ರಾಗಿಸಿರುವ ಶೈಲಜಾ ನಾಗ್ ಮತ್ತು ಬಿ ಸುರೇಶ್ ಅವರೇ ಈ ಚಿತ್ರಕ್ಕೂ ನಿರ್ಮಾಪಕರು.
- ಆ್ಯಕ್ಷನ್ ಕಟ್ ಹೇಳುವವರು ವಿ. ಹರಿಕೃಷ್ಣ.
- ‘ಕ್ರಾಂತಿ’ ವಿ.ಹರಿಕೃಷ್ಣಗೆ ನಿರ್ದೇಶಕರಾಗಿ ಎರಡನೇ ಸಿನಿಮಾ.
- ‘ಕ್ರಾಂತಿ’ ಗೀತೆಯ ಸಂಗೀತಗಾರರೂ ಅವರೇ..
#KrantiBegins #Kranti #D55 #ಕ್ರಾಂತಿ pic.twitter.com/G5a5N2ZjTB
— Darshan Thoogudeepa (@dasadarshan) September 10, 2021