ಬೆಂಗಳೂರು: ಸಿಡಿ ಪ್ರಸಾರ ಮಾಡದಂತೆ ತಾವು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದಾಗಿ ಮಾಧ್ಯಮವೊಂದರಲ್ಲಿ ಪ್ರಕಟವಾಗಿರುವ ಸುದ್ದಿ ಸುಳ್ಳು ಎಂದು ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇನೆ ಎಂದು ವೆಬ್ ಸೈಟ್ ಒಂದು ಸುದ್ದಿ ಮಾಡಿರುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಂತಹ ಅಗತ್ಯವೂ ನನಗಿಲ್ಲ ಎಂದಿದ್ದಾರೆ.
ನಾನು ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇನೆ ಎಂದು ಖಾಸಗಿ ವೆಬ್ ಸೈಟ್ ಒಂದು ಸುದ್ದಿ ಮಾಡಿರುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಂತಹ ಅಗತ್ಯವೂ ನನಗಿಲ್ಲ.
(1/5)— Dr. Murugesh R Nirani (@NiraniMurugesh) July 18, 2021
ಕೆಲವು ಕುಚೋದ್ಯದ ಸಂಗತಿಗಳನ್ನು ಮುಂದಿಟ್ಟುಕೊಂಡು ನಾನು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದೇನೆ ಎಂದು ಕೆಲವರು ಹಸಿಬಿಸಿ ಸುದ್ದಿಗಳನ್ನು ಹಬ್ಬುಸುತ್ತಿರುವುದು ನನ್ನ ಮನಸ್ಸಿಗೆ ಅತ್ಯಂತ ನೋವು ತಂದಿದೆ ಎಂದವರು ಹೇಳಿದ್ದಾರೆ.
ಕೆಲವು ಕುಚೋದ್ಯದ ಸಂಗತಿಗಳನ್ನು ಮುಂದಿಟ್ಟುಕೊಂಡು ನಾನು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದೇನೆ ಎಂದು ಕೆಲವರು ಹಸಿಬಿಸಿ ಸುದ್ದಿಗಳನ್ನು ಹಬ್ಬುಸುತ್ತಿರುವುದು ನನ್ನ ಮನಸ್ಸಿಗೆ ಅತ್ಯಂತ ನೋವು ತಂದಿದೆ.
(2/5)— Dr. Murugesh R Nirani (@NiraniMurugesh) July 18, 2021
2020 ರಲ್ಲಿ ನಾನು ಪ್ರಕರಣವೊಂದರ ಸಂಬಂಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದನ್ನು ಈಗ ಏಕೆ? ಪ್ರಸ್ತಾಪಿಸುತ್ತಿದ್ದಾರೆ ಎಂಬ ಹುನ್ನಾರವೂ ನನಗೆ ಅರ್ಥವಾಗುತ್ತಿಲ್ಲ ಎಂದು ನಿರಾಣಿ ಹೇಳಿದ್ದಾರೆ.
2020 ರಲ್ಲಿ ನಾನು ಪ್ರಕರಣವೊಂದರ ಸಂಬಂಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದನ್ನು ಈಗ ಏಕೆ? ಪ್ರಸ್ತಾಪಿಸುತ್ತಿದ್ದಾರೆ ಎಂಬ ಹುನ್ನಾರವೂ ನನಗೆ ಅರ್ಥವಾಗುತ್ತಿಲ್ಲ.
(3/5)— Dr. Murugesh R Nirani (@NiraniMurugesh) July 18, 2021
ಕಳೆದ ಮೂರು ದಶಕಕ್ಕೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ನನ್ನ ಮೇಲೆ ಆಗಾಗ್ಗೆ ಇಂತಹ ಆಧಾರರಹಿತ ಆರೋಪಗಳನ್ನು ಕೆಲವು ಕಾಣದ ಕೈಗಳು ಮಾಡುತ್ತಲೇ ಬಂದಿದ್ದರೂ ನಾನು ಎದೆಗುಂದಿಲ್ಲ ಎಂದು ನಿರಾಣಿ ಹೇಳಿದ್ದಾರೆ.
ಕಳೆದ ಮೂರು ದಶಕಕ್ಕೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ನನ್ನ ಮೇಲೆ ಆಗಾಗ್ಗೆ ಇಂತಹ ಆಧಾರರಹಿತ ಆರೋಪಗಳನ್ನು ಕೆಲವು ಕಾಣದ ಕೈಗಳು ಮಾಡುತ್ತಲೇ ಬಂದಿದ್ದರೂ ನಾನು ಎದೆಗುಂದಿಲ್ಲ.
(4/5)— Dr. Murugesh R Nirani (@NiraniMurugesh) July 18, 2021
ಸಾರ್ವಜನಿಕ ಜೀವನದಲ್ಲಿದ್ದಾಗ ಕೆಲವು ಸಂದರ್ಭಗಳಲ್ಲಿ ಇಂತಹ ಆಧಾರರಹಿತ ವದಂತಿಗಳು ಹಬ್ಬುವುದು ಸರ್ವೇಸಾಮಾನ್ಯ. ನನ್ನ ಹಿತೈಷಿಗಳು ಹಾಗೂ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ ಕಾರ್ಯಕರ್ತರು ದೃತಿಗೇಡಬಾರದೆಂದು ನಿರಾಣಿ ಸಲಹೆ ಮಾಡಿದ್ದಾರೆ.
ಸಾರ್ವಜನಿಕ ಜೀವನದಲ್ಲಿದ್ದಾಗ ಕೆಲವು ಸಂದರ್ಭಗಳಲ್ಲಿ ಇಂತಹ ಆಧಾರರಹಿತ ವದಂತಿಗಳು ಹಬ್ಬುವುದು ಸರ್ವೇಸಾಮಾನ್ಯ. ನನ್ನ ಹಿತೈಷಿಗಳು ಹಾಗೂ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ ಕಾರ್ಯಕರ್ತರು ದೃತಿಗೇಡಬಾರದೆಂದು ನನ್ನ ಕಳಕಳಿ
(5/5)— Dr. Murugesh R Nirani (@NiraniMurugesh) July 18, 2021