ಉಡುಪಿ : ರಿಪೇನ್ಸ್ ಹೆಲ್ತ್ಕೇರ್ ಪ್ರೈವೇಟ್ ಲಿಮಿಟೆಡ್, ಎಸ್.ಡಿ.ಪಿ ರೂರಲ್ ಅಭಿವೃದ್ಧಿ ಸಂಸ್ಥೆ ಸೊಸೈಟಿ, ನಗರ ಪೋಲಿಸ್ ಠಾಣಾಧಿಕಾರಿಗಳ ಕಚೇರಿ ಬ್ರಹ್ಮವಾರ ಇವರ ಆಶ್ರಯದಲ್ಲಿ “ಪ್ಲ್ಯಾಂಟ್ ಪೋರ್ ದಿ ನೇಶನ್” (ಸ್ಯಾಂಡಲ್ ವುಡ್ ಪ್ಲ್ಯಾಂಟೇಶನ್) ವಿನೂತನ ಕಾರ್ಯಕ್ರಮ ಗಮನಸೆಳೆಯಿತು. ಬ್ರಹ್ಮಾವರ ಪೊಲೀಸ್ ಸ್ಟೇಶನ್ ನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆ ನೆರವೇರಿತು.
ಉಡುಪಿ ಜಿಲ್ಲಾ ವಲಯ ಅರಣ್ಯ ಅಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಬ್ರಹ್ಮಾವರ ಪೊಲೀಸ್ ಸ್ಟೇಶನ್ ಉಪ ನಿರೀಕ್ಷಕ ಗುರುನಾಥ್ ಬಿ ಹಾದಿಮನಿ ಇಬ್ಬರು ರಕ್ತ ಚಂದನ ಗಿಡಗಳನ್ನು ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು.
ರಿಪೇನ್ಸ್ ಹೆಲ್ತ್ಕೇರ್ ಕಂಪನಿಯ ಮುಖ್ಯಸ್ಥ ಹಾಗೂ ನಿರ್ದೇಶಕರಾದ ಪವನ್ ಶೆಟ್ಟಿ, ಎಸ್.ಡಿ.ಪಿ ರೂರಲ್ ಡೆವಲಾಪಮೆಂಟ್ ಸೊಸೈಟಿಯ ನಿರ್ದೇಶಕರಾಗಿರುವ ಎಸ್.ಬಿ ಶೆಟ್ಟಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬ್ರಹ್ಮಾವರ ಕೆ.ವಿ.ಕೆ ಯ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಆಗಿರುವ ಡಾ.ಬಿ ಧನಂಜಯ, ಹಾಗೂ ಬ್ರಹ್ಮಾವರ ಉಪ ವಲಯ ಅರಣ್ಯಾಧಿಕಾರಿ ಹರೀಶ್, ರಕ್ತ ಚಂದನ ಬೆಳೆಗಾರರು, ರೈತರೂ ಆಗಿರುವ ಪುಟ್ಟಯ್ಯ ಶೆಟ್ಟಿ, ಕರುಣಾಕರ ಶೆಟ್ಟಿ, ಬ್ರಹ್ಮಾವರ ಪೊಲೀಸ್ ಸ್ಟೇಶನ್ ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.