ಮೂಡಬಿದ್ರಿ: ಮಂಗಳೂರು ಹೊರವಲಯದ ಎಡಪಡವು ಬಳಿ ಜನರಲ್ಲಿ ಅಚ್ಚರಿ. ಬಾವಿಯಲ್ಲಿ ಕರಿ ಚಿರತೆ ಕಂಡು ಗಾಬರಿ.
ಎಡಪದವು ಸಮೀಪದ ಗೊಸ್ಪಾಲ್ ಸನಿಲದಲ್ಲಿ ತೀರಾ ಅಪರೂಪ ಎನಿಸಿರುವ ಕಪ್ಪು ಚಿರತೆಯೊಂದು ರಾತ್ರಿ ಬಾವಿಗೆ ಬಿದ್ದು ಕೋಲಾಹಲಕ್ಕೆ ಕಾರಣವಾಗಿತ್ತು. ಸ್ಥಳೀಯರ ಮಾಹಿತಿ ಹಿನ್ನೆಲೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ತಂಡ ಸುಮಾರು ಮೂರು ತಾಸು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿದಿದ್ದಾರೆ.
ಸನಿಲ ನಿವಾಸಿ ಶಕುಂತಲಾ ಆಚಾರ್ಯ ಎಂಬವರ ಮನೆಯಂಗಳದ ಬಾವಿಯಲ್ಲಿ ಭಾನುವಾರ ಬೆಳಗ್ಗೆ ಚಿರತೆ ಪತ್ತೆಯಾಗಿತ್ತು. ಅರಣ್ಯಾಧಿಕಾರಿಗಳ ಆಗಮನದ ನಂತರ ಕರಿ ಚಿರತೆಯನ್ನು ಬಾವಿಯಿಂದ ಮೇಲೆತ್ತುವ ಕಾರ್ಯಾಚರಣೆ ನಡೆಯಿತು. ಸಾವಿರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಅಧಿಕಾರಿಗಳು ಪರದಾಡುಂತಾಯಿತು.
ಈ ನಡುವೆ, ಎಡಪದವು ಸುತ್ತಮುತ್ತ ಅನೇಕ ದಿನಗಳಿಂದ ನಾಯಿಗಳು ಕಾಣೆಯಾಗುತ್ತಿದ್ದವು. ಚಿರತೆ ಹಾವಳಿಯಿಂದಾಗಿ ನಾಯಿ, ಹಸು ಸಹಿತ ಜಾನುವಾರುಗಳು ಬಲಿಯಾಗುತ್ತಿದ್ದವು. ಇದೀಗ ಚಿರತೆ ಸೆರೆಸಿಕ್ಕಿರುವುದರಿಂದ ಜನ ನಿರಾಳರಾಗಿದ್ದಾರೆ. ಈ ನಸಡವೆ ಅಪರೂಪದ ಚಿರತೆಯನ್ನು ಕಂಡು ಜನರು ಗಾಬರಿಯ ಜೊತೆ ಅಚ್ಚರಿ ಪಟ್ಟಿದ್ದಾರೆ.