ಬೆಂಗಳೂರು: ಲೋಕಸಭಾ ಚುನಾವಣೆ ಅಙತಿಮ ಹಂತದಲ್ಲಿದ್ದು ಮತದಾನಕ್ಕೆ ಕ್ಷಣಗಣನೆ ನಡೆಯುತ್ತಿದ್ದಂತೆಯೇ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಭರ್ಜರಿ ಬೆಳವಣಿಗೆಗಳು ನಡೆದಿವೆ. ಸಾರಿಗೆ ಸಚಿವರಾಗಿರುವ ರಾಮಲಿಂಗ ರೆಡ್ಡಿವಾವರ ಪುತ್ರಿ ಸೌಮ್ಯ ರೆಡ್ಡಿ ಕಾಂಗ್ರೆಸ್ ಹುರಿಯಾಳಾಗಿ ಕಣದಲ್ಲಿದ್ದು, ವಿವಿಧ ಸಂಘಸಂಸ್ಥೆಗಳು ಅವರ ಬೆಂಬಲಕ್ಕೆ ನಿಂತಿವೆ.
ಕೆಲವು ದಿನಗಳಲ್ಲಿ ಹಲವಾರು ಸಂಘಟನೆಗಳು-ಸಮುದಾಯಗಳು ಸೌಮ್ಯ ರೆಡ್ಡಿ ಗೆಲುವಿಗಾಗಿ ಪ್ರಚಾರದಲ್ಲಿ ತೊಡಗಿದ್ದರೆ, ಇದೀಗ ಹೊಟೇಲ್ ಮಾಲೀಕರು ಸೇರಿದಂತೆ ಬೆಂಗಳೂರು ಮಾಲೀಕರ ಸಂಘ ಕೂಡಾ ಸೌಮ್ಯ ರೆಡ್ಡಿ ಅವರಿಗೆ ಬೆಂಬಲ ಘೋಷಿಸಿದೆ.
ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ಸೌಮ್ಯರೆಡ್ಡಿರವರ ಪರ ಬೆಂಗಳೂರು ಮಾಲೀಕರ ಸಂಘದ ವತಿಯಿಂದ ಬೆಂಬಲ ಸಭೆ ನಡೆಯಿತು. ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಮಾಜಿ ಮಹಾಪೌರರಾದ ಮಂಜುನಾಥ್ ರೆಡ್ಡಿ, ಹೋಟೆಲ್ ಸಂಘದ ಅಧ್ಯಕ್ಷರಾದ ಪಿ.ಸಿ.ರಾವ್, ಸ್ವಾತಿ ಗ್ರೂಪ್ ಹೋಟೆಲ್ ಜಿ.ಕೆ.ಶೆಟ್ಟಿ, ಕದಂಬ ರಾಘವೇಂದ್ರರಾವ್, ಮಾಜಿ ಬಿಬಿಎಂಪಿ ಸದಸ್ಯರಾದ ಜಿ.ಮಂಜುನಾಥ್, ಬಂಟ್ಸ್ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಶೆಟ್ಟಿ, ವಿ.ಎಸ್.ಗಾರ್ಡ್ನನ್ ಮಾಲೀಕರಾದ ವೀರಪ್ಪ, ಹೋಟೆಲ್ ಉದ್ಯಮಿ ಕೊರ್ಗೀ ಗೋಪಾಲ್ ಶೆಟ್ಟಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಶಂಕರ್ ಶೆಟ್ಟಿರವರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಹೊಟೇಲ್ ಉದ್ಯಮಿಗಳು, ಸಚಿವ ರಾಮಲಿಂಗ ರೆಡ್ಡಿ ಅವರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಅಷ್ಟೇ ಅಲ್ಲ, ಬೆಂಗಳೂರು ಜನರ ಆಶೋತ್ತರಗಳಿಗೆ ಅವರು ಸ್ಪಂಧಿಸುತ್ತಿದ್ದಾರೆ. ಅವರಂತೆಯೇ ಸೌಮ್ಯ ರೆಡ್ಡಿ ಅವರು ಶಾಸಕಿಯಾಗಿರದಿದ್ದರೂ ನಿರಂತರ ಜನಸೇವೆ ಮಾಡುತ್ತಾ ಇದ್ದಾರೆ. ಹಾಗಾಗಿ ನಮಗೆ ಅಂತಹಾ ಜನಸೇವಕರ ನಮಗೆ ಆವಶ್ಯಕತೆ ಇದೆ ಎಂದರು.