ಬಾಗಲಕೋಟೆ: ಬೀಳಗಿ ಸಮೀಪ ಹೊನ್ಯಾಳ ಕ್ರಾಸ್ ಬಳಿ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಪಲ್ಟಿಯಾಗಿ ಐವರು ಸಾವನ್ನಪ್ಪಿದ್ದಾರೆ. ಮೃತರು ಒಂದೇ ಕುಟುಂಬದವರಾಗಿದ್ದಾರೆ.
ಹೊಲದಲ್ಲು ಕೆಲಸ ಮುಗಿಸಿ ಮನೆಗೆ ತೆರಳಲು ರಸ್ತೆಪಕ್ಕ ನಿಂತಿದ್ದವರ ಮೇಲೆ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಮಗುಚಿಬಿದ್ದಿದೆ. ಟೈರ್ ಬ್ಲಾಸ್ಟ್ ಆಗಿ ಟಿಪ್ಪರ್ ಉರುಳಿ ಬಿದ್ದಿದೆ ಎನ್ನಲಾಗಿದ್ದು, ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಯಂಕಪ್ಪ ತೋಳಮಟ್ಟಿ, ಪತ್ನಿ ಯಲ್ಲವ್ವ, ಮಕ್ಕಳಾದ ಪುಂಡಲೀಕ, ನಾಗವ್ವ ಹಾಗೂ ಅಶೋಕ ಬಮ್ಮಣ್ಣವರ ಎಂದು ಗುರುತಿಸಲಾಗಿದೆ.