ಚೆನ್ನೈ: ಭಾರತ ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳ ಅನ್ವಯ ಕೈಗೊಂಡ ವಿಶೇಷ ತೀವ್ರ ಪರಿಷ್ಕರಣೆ (SIR) ಬಳಿಕ ತಮಿಳುನಾಡಿನ ಅಂತಿಮ ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ.
ವಿಶೇಷ ಸಾರಾಂಶ ತಿದ್ದುಪಡಿ ವೇಳೆ ಕರಡು ಪಟ್ಟಿಯಿಂದ 97,37,831 ಹೆಸರುಗಳನ್ನು ಅಳಿಸಲಾಗಿದೆ. ಇದರೊಂದಿಗೆ ರಾಜ್ಯದ ಒಟ್ಟು ಮತದಾರರ ಸಂಖ್ಯೆ 5.43 ಕೋಟಿಗೆ ಇಳಿದಿದೆ. ಅಳಿಸಿದ ಹೆಸರುಗಳಲ್ಲಿ ಬಹುತೇಕ ಮೃತ ಮತದಾರರದ್ದಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡು ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್ ಅವರು ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪರಿಷ್ಕರಣೆಯ ವಿವರಗಳನ್ನು ನೀಡಲಿದ್ದಾರೆ.
ಕಡ್ಡಾಯ ವಿವರಗಳಿಲ್ಲದ ಅಥವಾ ವ್ಯತ್ಯಾಸಗಳಿದ್ದ 12,43,363 ಮಂದಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ದಾಖಲೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಳಿಸಲಾದ ಅರ್ಹ ಮತದಾರರಿಗೆ ನಮೂನೆ–6 ಮೂಲಕ ಮರು ಅರ್ಜಿ ಸಲ್ಲಿಸುವ ಅವಕಾಶವೂ ಕಲ್ಪಿಸಲಾಗಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ಅಳಿಸುವಿಕೆಯ ಕಾರಣಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿದ್ದು, ಗ್ರಾಮ ಪಂಚಾಯಿತಿ ಹಾಗೂ ನಗರ ವಾರ್ಡ್ ಕಚೇರಿಗಳಲ್ಲಿ ಪಟ್ಟಿಗಳನ್ನು ಪ್ರದರ್ಶಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು 10 ದಿನಗಳ ಅವಧಿ ನೀಡಲಾಗಿತ್ತು.
ಪುದುಚೇರಿ ಅಂತಿಮ ಪಟ್ಟಿಯಲ್ಲಿ 9,44,211 ಮತದಾರರು ಇದ್ದಾರೆ. ಪರಿಷ್ಕೃತ ಪಟ್ಟಿಯಿಂದ ಚುನಾವಣೆ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ನಿಖರತೆ ಹೆಚ್ಚಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.



















































