ಬೆಂಗಳೂರು: ನಾನ್ ಸಿಆರ್ ಜಡ್ ವ್ಯಾಪ್ತಿಯಲ್ಲಿ ಮುಳುಗಿ ಮರಳು ತೆಗೆಯುವ ಪದ್ಧತಿ ಅಳವಡಿಸುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಸಚಿವರೊಂದಿಗೆ ಶಾಸಕ ರಘುಪತಿ ಭಟ್ ಸಭೆ ನಡೆಸಿದರು.
ಕರ್ನಾಟಕದ ಕರಾವಳಿ ಭಾಗದ ಬಹು ವರ್ಷಗಳ ಬೇಡಿಕೆಯಾದ ಕರಾವಳಿ ನಿಯಂತ್ರಣವಲ್ಲದ ವಲಯ (non CRZ)ದಲ್ಲಿ ಸಾಂಪ್ರದಾಯಿಕ ಮಾನವಾಧಾರಿತ ಮುಳುಗಿ ಮರಳು ತೆಗೆಯುವ ಪದ್ಧತಿಗೆ ಅವಕಾಶ ಕಲ್ಪಿಸುವ ಅನಿವಾರ್ಯತೆ ಬಗ್ಗೆ ರಘುಪತಿ ಭಟ್ ಅವರು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಬಸಪ್ಪ ಆಚಾರ್ ಹಾಗೂ ಅಧಿಕಾರಿಗಳ ಗಮನಸೆಳೆದರು.
ಕರಾವಳಿ ನಿಯಂತ್ರಣವಲ್ಲದ ವಲಯ (NON CRZ)ದಲ್ಲಿ ಸಾಂಪ್ರದಾಯಿಕ ಮಾನವಾಧಾರಿತ ಮುಳುಗಿ ಮರಳು ತೆಗೆಯಲು ಅವಕಾಶ ಕಲ್ಪಿಸಲು ಬೇಡಿಕೆ ಇರುವುದರಿಂದ ಮರಳು ನೀತಿಗೆ ತಿದ್ದುಪಡಿ ತಂದು ಅವಕಾಶ ಕಲ್ಪಿಸುವ ಬಗ್ಗೆ ಚರ್ಚಿಸಿದರು. ಗೃಹ ಸಚಿವರಾದ ಶ್ರೀಯುತ ಆರಗ ಜ್ಞಾನೇಂದ್ರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕರಾದ ರಮೇಶ್, ಉಪ ನಿರ್ದೇಶಕರಾದ ಲಕ್ಷ್ಮಮ್ಮ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.