ಬೆಂಗಳೂರು: ಕರ್ನಾಟಕದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ಮುಗಿದಿರುವುದರಿಂದ ನೀತಿಸಂಹಿತೆ ಸಡಿಲಿಕೆ ಕೋರಿದ್ದ ಸರ್ಕಾರದ ಪ್ರಸ್ತಾವನೆಗೆ ಚುನಾವಣಾ ಆಯೋಗ ಸಮ್ಮತಿ ಸೂಚಿಸಿದೆ. ಕೆಲವು ಪ್ರಸ್ತಾವನೆಗಳಿಗೆ ಮಾತ್ರ ಅನ್ವಯವಾಗುವಂತೆ ಆಯೋಗ ನೀತಿ ಸಂಹಿತೆಯನ್ನು ಸಡಿಲಿಕೆ ಮಾಡಿದೆ.
ಬರ ಪರಿಹಾರ ಕಾಮಗಾರಿಗಳ ಪರಾಮರ್ಶೆ ನಡೆಸಲು, ಮೂಲ ಸೌಲಭ್ಯ ಅಭಿವೃದ್ಧಿ ಪಡಿಸಲು ಈ ನಿರ್ಧಾರದಿಂದ ಅವಕಾಶ ಸಿಕ್ಕಿದೆ. ಚುನಾವಣಾ ಆಯೋಗದ ಕ್ರಮದಿಂದಾಗಿ ರಾಜ್ಯ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಬಹುದು, ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದ ಟೆಂಡರ್ ಆಹ್ವಾನಕ್ಕೂ ಅವಕಾಶ ಇದೆ, ಕಾಮಗಾರಿಗಳ ಕಾರ್ಯಾದೇಶ ನೀಡಬಹುದಾಗಿದೆ.
ಇದೇ ವೇಳೆ, ನಿಗಮ-ಮಂಡಳಿಗಳ ಶಾಸನಾತ್ಮಕ ಸಭೆಗಳನ್ನು ನಡೆಸಲು ಅನುವಾಗುವಂತೆಯೂ ನೀತಿ ಸಂಹಿತೆ ಸಡಿಗೊಳಿಸಿ ಆದೇಶಿಸಲಾಗಿದೆ ಎಂದು ಅದಿಜಾರಿಗಳು ತಿಳಿಸಿದ್ದಾರೆ.