ಹೈದರಾಬಾದ್: ಲೋಕಸಭಾ ಚುನಾವಣಾ ಅಖಾಡದಲ್ಲಿ ಇದೀಗ ಹೈದರಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೊಂಪೆಲ್ಲಾ ಮಾಧವಿ ಲತಾ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ. ಹೈದರಾಬಾದ್ ಕ್ಷೇತ್ರದಿಂದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖಂಡ ಅಸಾದುದ್ದೀನ್ ಓವೈಸಿ ವಿರುದ್ಧ ಅಖಾಡಕ್ಕಿಳಿದಿರುವ 49 ವರ್ಷದ ಮಾಧವಿ ಲತಾ ತಮ್ಮದೇ ಆದ ನಡೆಯಿಂದಾಗಿ ಎಲ್ಲರ ಗಮನಕೇಂದ್ರೀಕರಿಸಿದ್ದಾರೆ.
कल श्री राम नवमी के पावन पर्व के उपलक्ष में “भाग्यनगर श्री राम नवमी उत्सव समिति” के द्वारा गोशामहल विधानसभा में आयोजित शोभा यात्रा कार्यक्रम में हिस्सा लिया जिसमे मेरे सभी छोटे और बड़े बहन भाइयों का जोश देखने लायक़ था।
प्रभु श्री राम हम सभी के जीवन को सुख समृद्ध बनायेंगे 🙏 pic.twitter.com/DGvhCwGPUh
— Kompella Madhavi Latha (Modi Ka Parivar) (@Kompella_MLatha) April 18, 2024
ಎಐಎಂಐಎಂ ಭದ್ರಕೋಟೆಯಂತಿರುವ ಹೈದರಾಬಾದ್’ನಲ್ಲಿ 1984 ರಿಂದ ಪ್ರತಿ ಚುನಾವಣೆಯಲ್ಲಿ ಹಿಡಿತ ಸಾಧಿಸುತ್ತಲೇ ಇದೆ. ಈ ಕ್ಷೇತ್ರದಲ್ಲಿ ಅಸಾದುದ್ದೀನ್ ಓವೈಸಿ ಅವರ ತಂದೆ ಸುಲ್ತಾನ್ ಸಲಾವುದ್ದೀನ್ ಓವೈಸಿ 6 ಬಾರಿ ಆಯ್ಕೆಯಾಗಿದ್ದರು. 1996ರಲ್ಲಿ ಬಿಜೆಪಿಯ ಹಿರಿಯ ನಾಯಕ ಎಂ.ವೆಂಕಯ್ಯ ನಾಯ್ಡು ಅವರನ್ನು ಸೋಲಿಸಿದ್ದರು. ಸಲಾವುದ್ದೀನ್ ಓವೈಸಿ ಅನಾರೋಗ್ಯದ ಕಾರಣ 2004ರಲ್ಲಿ ಸ್ಪರ್ಧಿಸಲಿಲ್ಲ. ಅನಂತರ ಅಸಾದುದ್ದೀನ್ ಓವೈಸಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಅವರನ್ನು ಈ ಬಾರಿಯಾದರೂ ಸೋಲಿಸಬೇಕೆಂದು ಪಣತೊಟ್ಟಿರುವ ಬಿಜೆಪಿ, ಮೋದಿ ಅವರಿಂದ ಅಸಾಧಾರಣ ವ್ಯಕ್ತಿ ಎಂದು ಬಣ್ಣಿಸಲ್ಪಟ್ಟಿರುವ ಕೊಂಪೆಲ್ಲಾ ಮಾಧವಿ ಲತಾ ಅವರನ್ನು ಕಣಕ್ಕಿಳಿಸಿದೆ.
ಶಿಕ್ಷಣ, ಆರೋಗ್ಯ ಮತ್ತು ಆಹಾರ ಸೇವೆ ಒದಗಿಸುತ್ತಿರುವ ಮಾಧವಿ ಲತಾ, ತಮ್ಮ ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ಮೂಲಕ ನಿರ್ಗತಿಕರಿಗೆ ಸಹಾಯ ಮಾಡುವ ವಿಚಾರದಿಂದಾಗಿ ದೇಶದ ಗಮನಕೇಂದ್ರೀಕರಿಸಿದ್ದಾರೆ. ಉದ್ಯಮಿ ಮಾತ್ರವಲ್ಲದೆ, ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ಮಾಧವಿ ಲತಾ ಅವರು ಮುಸ್ಲಿಂ ಬಾಹುಳ್ಯವಿರುವ ಈ ಹಳೆಯ ನಗರದಲ್ಲಿ ದೀರ್ಘಕಾಲದಿಂದ ಸಕ್ರಿಯರಾಗಿದ್ದಾರೆ.
ವೃತ್ತಿನಿರತ ಭರತನಾಟ್ಯ ನೃತ್ಯಗಾರ್ತಿಯಾಗಿರುವ, ಮಾಧವಿ ಲತಾ ರಾಜಕೀಯದಲ್ಲಿ ಸಕ್ರಿಯವಾಗಿರಲಿಲ್ಲ. ಹಿಂದುತ್ವದ ಪರ ಭಾಷಣಗಾರ್ತಿಯಾಗಿರುವ ಇವರು ತ್ರಿವಳಿ ತಲಾಖ್ ವಿರುದ್ಧದ ಧ್ವನಿಯಾಗಿದ್ದರು. ಓವೈಸಿ ವಿರುದ್ಧ ನಿರಂತರ ಟೀಕೆ ಮಾಡುತ್ತಿರುವ ಕಾರಣಕ್ಕಾಗಿ ಮಾಧವಿ ಲತಾ ಅವರನ್ನೇ ಹೈದರಾಬಾದ್’ನಲ್ಲಿ ಬಿಜೆಪಿಗೆ ಕಣಕ್ಕಿಳಿಸಿದೆ.
ಹೈದರಾಬಾದ್ ಚುನಾವಣಾ ಅಖಾಡದಲ್ಲಿ ಮೇನಿಯಾ ಸೃಷ್ಟಿಸಿರುವ ಮಾಧವಿ ಲತಾ ಅವರು ಪ್ರಚಾರಕ್ಕೆ ಇಳಿದರೆ ಸಾಕು ಸಾವಿರಾರು ಮಂದಿ ಸಾತ್ ನೀಡುತ್ತಿದ್ದಾರೆ. ಇವರ ಜೊತೆ ಜನರು ಸೆಲ್ಫೀಗಾಗಿ ಮುಗಿಬೀಳುತ್ತಿರುವ ದೃಶ್ಯಗಳೂ ಸಾಮಾನ್ಯವಾಗಿದೆ.
ತಮ್ಮದೇ ರೀತಿಯಲ್ಲಿ ಮೋಡಿ ಮಾಡುತ್ತಾ ಮತ ಯಾಚಿಸುತ್ತಿರುವ ಮಾಧವಿ ಲತಾ, ಹೋಟೆಲ್ ಸಿಕ್ಕಿದರೆ ಸಾಕು ಅಡುಗೆ ಕೊನೆಗೆ ನುಗ್ಗಿ ದೋಸೆ ತಾಯಾರಿಸುತ್ತಾರೆ, ಟೀ ಮಾಡಿ ಹಂಚುತ್ತಾರೆ. ಶ್ರಮಿಕರ ಆಡೇಜ್ ತೆರಳಿದರೆ ಅಲ್ಲೂ ತಮ್ಮ ಚಾಣಾಕ್ಷತನ ಪ್ರದರ್ಶಿಸಿ ಎಲ್ಲರ ಚಿತ್ತ ಕೇಂದ್ರೀಕರಿಸುತ್ತಾರೆ. ಕಲಾವಿದೆಯಾಗಿ, ಸಾಂಸ್ಕೃತಿಕ ರಾಯಭಾರಿಯಂತೆ ಇರುವ ಇವರು ಮಾಧ್ಯಕ ಕ್ಷೇತ್ರಕ್ಕೂ ಕುತೂಹಲದ ವ್ಯಕ್ತಿಯಂತಿದ್ದಾರೆ.
हम होंगे कामयाब “आज” से ।।
“आप की अदालत”
श्री @RajatSharmaLive जी 🙏🙏@indiatvnews 🙏🙏#AbkiBaar400Baar #PhirEkBaarModiSarkaar #MLK4BHAGYANAGAR pic.twitter.com/5JxueGBXCU
— Kompella Madhavi Latha (Modi Ka Parivar) (@Kompella_MLatha) April 11, 2024
ಈ ನಡುವೆ, ಹಿಂದೂ ಭಾಷಣಗಾರ್ತಿಯಾಗಿರುವ ಮಾಧವಿ ಲತಾ ರಾಮನವಮಿ ದಿನದಂದು ಚುನಾವಣಾ ಪ್ರಚಾರದಲ್ಲಿ ಮಾಡಿದ ಮೋದಿ ವ್ಯಾಪಕ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಶ್ರೀರಾಮನ ರೀತಿ ಪ್ರದರ್ಶನ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ. ರಾಮನವಮಿ ಮೆರವಣಿಗೆ ಮಸೀದಿಯೊಂದರ ಸಮೀಪದಲ್ಲೇ ಹಾದುಹೊದ ಸಂದರ್ಭದಲ್ಲಿ ಮಾಡಿದ ಮೋಡಿ ಬಗ್ಗೆ ಹಲವಾರು ಬಗೆ ಬಗೆಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಮಸೀದಿಯನ್ನು ಗುರಿಯಾಗಿಸಿ ಮಾಧವಿ ಅವರು ಈ ರೀತಿ ಕಾಲ್ಪನಿಕ ಬಾಣ ಪ್ರಯೋಗಿಸಿದ್ದಾರೆ ಎಂಬ ಟೀಕೆಯೂ ವ್ಯಕ್ತವಾಗಿದೆ.
Hindu Sherni & BJP Candidate #MadhaviLatha for #Hyderabad Parliamentary Constituency in Action.
Look at her Age & Behavior !
She runs a Hospital too 🤔
She speaks as if she is the Next Biggest Humanist & Philanthropist after Mother Teressa who took birth to Serve the Humanity. pic.twitter.com/Kj1U8C7awp
— Syed Rafi – నేను తెలుగు ‘వాడి’ని. (@syedrafi) April 19, 2024
ಈ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿರುವ ಮಾಧವಿ ಲತಾ, ವೀಡಿಯೊವನ್ನು ಎಡಿಟ್ ಮಾಡಲಾಗಿದೆ ಎಂದು ದೂರಿದ್ದಾರೆ.
ಈ ನಡುವೆ, ಮುಸ್ಲಿಂ ಮಹಿಳೆಯರ ವಿಚ್ಛೇದನ , ಬುರ್ಖಾ ವಿಚಾರದಲ್ಲಿ ಮಾಧವೀಯವರ ಹೇಳಿಕೆ ಬಗ್ಗೆ ಓವೈಸಿ ಕಿಡಿಕಾರಿದ್ದಾರೆ. ಈ ಆರೋಪಗಳಿಗೂ ಮಾಧವಿ ಎದಿರೇಟು ಕೊಟ್ಟಿರುವ ವೀಡಿಯೋ ಕೂಡಾ ವೈರಲ್ ಆಗಿವೆ.
#WATCH | Telangana: BJP candidate from Hyderabad constituency Madhavi Latha says, “…Did Asaduddin Owais ever hear me telling women not to wear burqa, or not to study, or to get divorced or die in poverty…We ask Muslim women to take ration, medicines, we pay their college… pic.twitter.com/eRXHmPRqO9
— ANI (@ANI) April 12, 2024