(ವರದಿ: ರಾಘವೇಂದ್ರ)
ಮಂಡ್ಯ: ಕಳೆದ ಐದುನೈದು ದಿನಗಳಿಂದ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದ್ರಿಂದಾಗಿ ಜಿಲ್ಲೆಯಲ್ಲಿ ರೈತರು, ಸಾಮಾನ್ಯ ಜನರು ಕೂಡ ಹೈರಾಣಾಗಿದ್ದಾರೆ. ಕೋಪ ಬಂದವರೆಂತೆ ವರುಣ, ವಾಯು ದೇವರು ಮಳೆ-ಗಾಳಿ ಸುರಿಸುತ್ತಿದ್ದಾರೆ. ಕೋಪಗೊಂಡಿರೋ ಇಬ್ಬರು ದೇವರನ್ನು ಶಾಂತಿ ಮಾಡಿಸಲು ಮಂಡ್ಯ ಜಿಲ್ಲೆಯ ಜನರು ಇದೀಗ ಕೈಂಕರ್ಯದಲ್ಲಿ ತೊಡಗಿದ್ದಾರೆ.
ಹೌದು! ಮಂಡ್ಯ ಜಿಲ್ಲೆಯಲ್ಲಿ ಕಳೆದ ತಿಂಗಳು ಕೆ.ಆರ್.ಎಸ್ ಡ್ಯಾಂ ಭರ್ತಿಯಾಗದ ಕಾರಣಕ್ಕೆ
ಖುದ್ದು ಸಿ.ಎಂ. ಆಗಮಿಸಿ ಮಳೆಗಾಗಿ ಪರ್ಜನ್ಯ ಹೋಮ ನಡೆಸಿದ್ರು. ಕಾಕತಾಳೀಯವೋ, ಸಿ.ಎಂ.ಪೂಜೆಯ ಪ್ರತಿ ಫಲವೋ ಎಂಬಂತೆ ಆ ದಿನದಿಂದ ಮಳೆ ಆರಂಭವಾಗಿದ್ದು ಡ್ಯಾಂ ಕೂಡ ತುಂಬಿ ಸಿ.ಎಂ ಬಾಗೀನ ಅರ್ಪಿಸಿದ್ದು್ದೂ ಆಗಿದೆ. ಆದ್ರೀಗ ಮಳೆ ನಿಲ್ಲದೆ ನಿರಂತರವಾಗಿ ಧಾರಾಕಾರವಾಗಿ ಸುರಿಯುತ್ತಿರುವುದು ಜಿಲ್ಲೆಯ ಜನರನ್ನು ಕಂಗಾಲಾಗಿಸಿದೆ.ಕೋಪ ಬಂದವರಂತೆ ಮಳೆ ಗಾಳಿ ಸುರಿಸುತ್ತಿರೋ ವಾಯು ಮತ್ತು ವರುಣ ದೇವ ರನ್ನು ಶಾಂತಿಗಿಳಿಸಲು ಇದೀಗ ಮಂಡ್ಯ ಜನರು ಮುಂದಾಗಿದ್ದಾರೆ.
ಮಂಡ್ಯ ರಕ್ಷಣಾವೇದಿಕೆ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಕಾರ್ಯಕರ್ತರು ಸೇರಿದಂತೆ ಶ್ರೀರಂಗಪಟ್ಟಣದ ಜನರು ಪಟ್ಟಣದ ಮೂಡಲು ಬಾಗಿಲು ಆಂಜನೇಯ ದೇವಾಲಯದಲ್ಲಿ ವಾಯು ಪುತ್ರ ಆಂಜನೇಯನ ಮೂಲಕ ಸಂಧಾನ ಮಾಡುವಂತೆ ದೇವರಿಗೆ ಅಭಿಷೇಕ ಸಹಿತ ವಿಶೇಷ ಪೂಜೆ ಸಲ್ಲಿಸಿದರುು. ಈಡುಗಾಯಿ ಒಡೆದು ಜನರ ರಕ್ಷಣೆಯಾಗಿ ಮಳೆ ಗಾಳಿ ಸ್ಥಗಿತಗೊಳಿಸಿ ಕಾಪಾಡುವಂತೆ ದೇವರಲ್ಲಿ ಪ್ರಾರ್ಥಿಸಿದರು.
ಒಟ್ಟಾರೆ ಕಳೆದ ಒಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಗೆ ಜನರ ಕಂಗಾಲಾಗಿರೋದ್ರ ಜೊತೆಗೆ ಮಳೆ ಹಾನಿಯಿಂದ ಜನರು ಹೈರಾಣಾಗಿದ್ದು, ಇದೀಗ ಮತ್ತೆ ಮಳೆ ಸ್ಥಗಿತಕ್ಕೆ ದೇವರ ಮೊರೆ ಹೋದ ಸನ್ನಿವೇಶವು ಪರಿಸ್ಥಿತಿಗೆ ಹಿಡಿದಿರುವ ಕಣ್ಣಡಿಯಂತಿದೆ.